ಆಂತರಿಕ ಸಂಘರ್ಷ: ಟಾಟಾ ಸಮೂಹದಲ್ಲಿ ಬಿಕ್ಕಟ್ಟು ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ

44

ರತನ್ ಟಾಟಾ ನಿಧನದ ನಂತರ ಟಾಟಾ ಸಮೂಹದಲ್ಲಿ ತಲೆದೋರಿದೆ ಆಂತರಿಕ ಬಿಕ್ಕಟ್ಟು ಕೇಂದ್ರ ಸರ್ಕಾರಕ್ಕೆ ಟ್ರಸ್ಟ್‌ನ ಭಿನ್ನಾಭಿಪ್ರಾಯಗಳು ಕಂಪನಿ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಆತಂಕ ಹೀಗಾಗಿ ಮಧ್ಯಪ್ರವೇಶಿಸಲು ತೀರ್ಮಾನ, ಟಾಟಾ ಗ್ರೂಪ್‌ನ ಪ್ರಮುಖ ಅಧಿಕಾರಿಗಳೊಂದಿಗೆ ಹಿರಿಯ ಸಚಿವರ ಸಭೆ ಸಭೆಯಲ್ಲಿ ಆಂತರಿಕ ಸಂಘರ್ಷ ಪರಿಹಾರ ಮತ್ತು ಟಾಟಾ ಸನ್ಸ್ ಐಪಿಒ ಕುರಿತು ನಡೆಯಲಿದೆ ಚರ್ಚೆ ಟಾಟಾ ಸಮೂಹದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ.

ಭಾರತದ ಅತಿ ದೊಡ್ಡ ಉದ್ಯಮ ಸಮೂಹ ಟಾಟಾದಲ್ಲಿ ಒಂದು ಸಣ್ಣ ಬಿಕ್ಕಟ್ಟು ಆರಂಭವಾಗಿದೆ. ವರ್ಷಗಳಿಂದ ಗ್ರೂಪ್‌ ಮುನ್ನಡೆಸುತ್ತಾ ಬಂದಿದ್ದ ದಿಗ್ಗಜ ರತನ್‌ ಟಾಟಾ ನಿಧನ ಬೆನ್ನಲ್ಲೇ ಈ ಏರುಪೇರು ಸಂಭವಿಸಿದೆ. ಇದೀಗ ಟಾಟಾ ಸಮೂಹದ ಆಂತರಿಕ ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಲು ನಿರ್ಧರಿಸಿದೆ. ಟಾಟಾ ಸನ್ಸ್‌ನ ಬಹುಪಾಲು ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್‌ಗಳಲ್ಲಿನ ಆಂತರಿಕ ಸಂಘರ್ಷಗಳು ಕಂಪನಿಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ‘ವಿಕ’ ಸೋದರ ಪತ್ರಿಕೆ ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಸರ್ಕಾರದ ಮಧ್ಯಪ್ರವೇಶ ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾದ ಟಾಟಾ ಗ್ರೂಪ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಇಬ್ಬರು ಹಿರಿಯ ಕ್ಯಾಬಿನೆಟ್ ಸಚಿವರು ಈ ವಾರ ದಿಲ್ಲಿಯಲ್ಲಿ ಟಾಟಾ ಗ್ರೂಪ್‌ನ ನಾಲ್ವರು ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಗುಜರಾತ್‌, ಆಂಧ್ರ ಬಿಟ್ಟು ಕರ್ನಾಟಕಕ್ಕೆ ಮಣೆ ಹಾಕಿದ ಟಾಟಾ, ಏರ್‌ಬಸ್‌! ಕೋಲಾರದಲ್ಲಿ ವಿಶ್ವದ ಪ್ರಸಿದ್ಧ ಹೆಲಿಕಾಪ್ಟರ್‌ ಉತ್ಪಾದನೆ! ಸೇನೆಗೂ ಭೀಮ ಬಲ! ಈ ಸಭೆಯಲ್ಲಿ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ , ಉಪಾಧ್ಯಕ್ಷ ವೇಣು ಶ್ರೀನಿವಾಸನ್, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಮತ್ತು ಟಾಟಾ ಟ್ರಸ್ಟ್ಸ್‌ ಟ್ರಸ್ಟಿ ಡೇರಿಯಸ್ ಖಂಬಾಟಾ ಭಾಗವಹಿಸಲಿದ್ದಾರೆ. ಸಭೆಯ ಪ್ರಮುಖ ಅಜೆಂಡಾಗಳು ಈ ಉನ್ನತ ಮಟ್ಟದ ಸಭೆಯಲ್ಲಿ ಎರಡು ಪ್ರಮುಖ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.

ಆಂತರಿಕ ಸಂಘರ್ಷ : ಟಾಟಾ ಟ್ರಸ್ಟ್‌ನ ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿಯಂತ್ರಿಸಿ, ಅದು ಟಾಟಾ ಸನ್ಸ್ ಮತ್ತು ಅದರ ಅಧೀನ ಕಂಪನಿಗಳ ಕಾರ್ಯಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಸಭೆಯ ಮುಖ್ಯ ಉದ್ದೇಶವಾಗಿದೆ. ಕಂಪನಿ ಲಿಸ್ಟಿಂಗ್‌ (ಐಪಿಒ): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಯಮಗಳ ಪ್ರಕಾರ ಕಡ್ಡಾಯವಾಗಿ ಟಾಟಾ ಸನ್ಸ್‌ ಷೇರು ಮಾರುಕಟ್ಟೆ ಪ್ರವೇಶಿಸಬೇಕಿದೆ (ಲಿಸ್ಟಿಂಗ್). ಇದರ ಬಗ್ಗೆ ಮುಂದಿನ ಹಾದಿಯನ್ನು ಚರ್ಚಿಸುವುದು.

ಸಂಘರ್ಷ ಆರಂಭವಾಗಿದ್ದು ಹೇಗೆ? ರತನ್ ಟಾಟಾ ಅವರ ನಿಧನದ ಸುಮಾರು ಒಂದು ವರ್ಷದ ನಂತರ ಟ್ರಸ್ಟಿಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ಟಾಟಾ ಸನ್ಸ್‌ನ ಆಡಳಿತ ಮಂಡಳಿಗೆ ನಾಮನಿರ್ದೇಶಿತ ನಿರ್ದೇಶಕರ ನೇಮಕಾತಿ ಮತ್ತು ಮಂಡಳಿಯ ಚರ್ಚೆಗಳ ಮಾಹಿತಿಯನ್ನು ಹಂಚಿಕೊಳ್ಳುವ ವಿಚಾರದಲ್ಲಿ ವಿವಾದ ಭುಗಿಲೆದ್ದಿದೆ. ಮಾಜಿ ರಕ್ಷಣಾ ಕಾರ್ಯದರ್ಶಿ ವಿಜಯ್ ಸಿಂಗ್ ಅವರನ್ನು ಟಾಟಾ ಸನ್ಸ್‌ನ ನಾಮನಿರ್ದೇಶಿತ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ರೀತಿಯೂ ವಿವಾದಕ್ಕೆ ಕಾರಣವಾಗಿದೆ.

ವೇಣು ಶ್ರೀನಿವಾಸನ್ ಮತ್ತು ನೋಯೆಲ್ ಟಾಟಾ ಅವರು ವಿಜಯ್‌ ಸಿಂಗ್ ಅವರ ಪದಚ್ಯುತಿಗೆ ವಿರೋಧ ವ್ಯಕ್ತಪಡಿಸಿದ್ದರೆ, ಇತರೆ ಟ್ರಸ್ಟಿಗಳು ಇದನ್ನು ಬೆಂಬಲಿಸಿದ್ದರು. ವೇಣು ಶ್ರೀನಿವಾಸನ್ ಅವರನ್ನು ಇದೇ ರೀತಿ ಮಂಡಳಿಯಿಂದ ತೆಗೆದುಹಾಕುವ ಬೆದರಿಕೆಯ ಇ-ಮೇಲ್ ಒಂದು ರವಾನೆಯಾಗಿದ್ದು, ಇದು ಟಾಟಾ ಸನ್ಸ್‌ನ ನಿಯಂತ್ರಣವನ್ನು ಕಬಳಿಸುವ ಪ್ರಯತ್ನ ಎಂದೇ ವಿಶ್ಲೇಷಿಸಲಾಗುತ್ತಿದೆ. ಲಿಸ್ಟಿಂಗ್‌ ವಿವಾದ ಆರ್‌ಬಿಐ ನಿಯಮಾವಳಿಗಳ ಪ್ರಕಾರ, ಟಾಟಾ ಸನ್ಸ್ ಅನ್ನು ಮೂರು ವರ್ಷಗಳ ಹಿಂದೆ ‘ಅಪ್ಪರ್ ಲೇಯರ್’ ಎನ್‌ಬಿಎಫ್‌ಸಿ ಎಂದು ಗುರುತಿಸಲಾಗಿತ್ತು. ಇದರ ಅಡಿತಲ್ಲಿ ಮೂರು ವರ್ಷಗಳೊಳಗೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುವುದು ಕಡ್ಡಾಯವಾಗಿತ್ತು.

ಈ ಗಡುವು ಸೆಪ್ಟೆಂಬರ್ 30ಕ್ಕೆ ಮುಗಿದಿದೆ. ಆದರೆ, ಈ ನಿಯಮದಿಂದ ವಿನಾಯಿತಿ ಕೋರಿ ಟಾಟಾ ಸನ್ಸ್ ಆರ್‌ಬಿಐಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಮತ್ತೊಂದೆಡೆ, ಟಾಟಾ ಸನ್ಸ್‌ನಲ್ಲಿ ಶೇ. 18.37 ರಷ್ಟು ಪಾಲು ಹೊಂದಿರುವ ಶಪೂರ್ಜಿ ಪಲ್ಲೊಂಜಿ ಗ್ರೂಪ್, ತಮ್ಮ ಹೂಡಿಕೆಯನ್ನು ನಗದೀಕರಿಸಲು ಲಿಸ್ಟಿಂಗ್‌ಗೆ ಒತ್ತಾಯ ಹೇರುತ್ತಿದೆ.

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...