ಮಲ್ಪೆ ಮಹಿಳೆ ಹಲ್ಲೆ ಪ್ರಕರಣದ ಬಳಿಕ ಮೊಗವೀರ ಯುವ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್,ನವೀನ್ ಸಾಲ್ಯಾನ್,ನಾಗೇಂದ್ರ ಪುತ್ರನ್
ಮೇಲೆ ಕಿಡಿಗೇಡಿಗಳು ಮೊಗವೀರ ಸಮಾಜದ ಮಧ್ಯೆ ಬಿರುಕು ಮೂಡಿಸುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟರ್ ಹರಿಯಬಿಟ್ಟಿದ್ದು ವೈರಲ್ ಆಗಿದ್ದು ಬಾರಿ ಚರ್ಚೆಗೆ ಗ್ರಾಸವಾಗಿದೆ
,ಸಮಾಜದ ಹೆಸರು ಕೆಡಿಸಲು ಕೆಲವು ಕಿಡಿಗೇಡಿಗಳು ಪ್ರಯತ್ನ ಪಟ್ಟಿದ್ದು ಅಲ್ಲದೆ ಮೊಗವೀರ ಯುವ ಸಂಘಟನೆಯ ಅಧಿಕೃತ ಲೋಗೋವನ್ನು ಕೂಡ ವಿನಹ ಕಾರಣ ದುರ್ಬಳಕೆ ಮಾಡಿರುತ್ತಾರೆ
ಈ ಬಗ್ಗೆ ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷರಾದ ಜಯಂತ್ ಕೋಡಿ,ನಿಕಟಪೂರ್ವ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡ್ಕ,ಹಾಗೂ ಮೊಗವೀರ ಸಮಾಜದ ಮುಖಂಡ ನಿಯೋಗ
ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ಅರುಣ್ ಕೆ ಇವರನ್ನು ಭೇಟಿ ಮಾಡಿ ಈ ಬಗ್ಗೆ ದೂರು ನೀಡಿ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ