ಉಡುಪಿ ಜಿಲ್ಲೆ , ಹಿರಿಯಡ್ಕ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘದ ಸಿಬ್ಬಂದಿಗಳಿಂದ ಸಾಲ ಬಾಕಿಉಳಿಸಿಕೊಂಡಿದ್ದ ಮಹಿಳೆಯ
ಸಹೋದರಿಯ ಪುತ್ರಿಗೆ ಕಿರುಕುಳ ಯುವತಿ ಆತ್ಮಹತ್ಯೆ ಯತ್ನ ಸ್ಥಳೀಯರಿಂದ ರಕ್ಷಣೆ ಸ್ವಸಹಾಯ ಸಂಘದ ಸಿಬ್ಬಂದಿಗಳ ವಿರುದ್ಧ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲು
ಬೊಮ್ಮರಬೆಟ್ಟು ಗ್ರಾಮ ಹಿರಿಯಡ್ಕ ದುಗುಣಿ ಇವರ ತಂಗಿ ಇಂದಿರಾ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಸದಸ್ಯರಾಗಿದ್ದು ಕೆಲವು ತಿಂಗಳ ಹಿಂದೆ ಸಂಘದಲ್ಲಿ 65 ಸಾವಿರ ರೂಪಾಯಿ ಸಾಲವನ್ನು ಪಡೆದಿದ್ದರು
ವಾರಕ್ಕೆ 1 ಸಾವಿರ ದಂತೆ ಸಾಲದ ಕಂತನ್ನು ಕಟ್ಟುತ್ತಾ ಬರುತ್ತಿದ್ದು, ಇಂದಿರಾರವರ ಮಗ ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ಕಾರಣ
ಇಂದಿರಾವರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಎರಡು ತಿಂಗಳಿನಿಂದ ವಾರದ ಕಂತನ್ನು ಕಟ್ಟಲು ವಿಳಂಬವಾದ ಕಾರಣದಿಂದ ದಿನಾಂಕ 22/03/2025 ರಂದು ಸಂಜೆ 6:00 ಗಂಟೆ ಸಮಯಕ್ಕೆ ದುಗುಣಿಯವರ ಮಗಳು ಸಂಧ್ಯಾ ಕೆಲಸಕ್ಕೆ ಹೋಗಿ ಮನೆಗೆ ಬಂದಾಗ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯಲ್ಲಿ ಕೆಲಸದಲ್ಲಿರುವ ಸಿಬ್ಬಂದಿಗಳಾದ ನಳಿನಿ, ಪ್ರಭಾಕರ, ವಿಜಯ, ಸವಿತಾ ಇವರು ಧಾವಿಸಿ ಮನೆ ಮುಂದೆ 7:30 ಗಂಟೆ ತನಕ ಕೂತು ಕೆಟ್ಟ ಪದಗಳನ್ನು ಉಪಯೋಗಿಸಿ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟ ಹಿನ್ನೆಲೆಯಲ್ಲಿ.
ದುಗುಣಿ ,ಯವರ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಗ ನೆರೆಕೆರೆಯವರು ಸಂಧ್ಯಾಳನ್ನು ರಕ್ಷಣೆ ಮಾಡಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2025 ಕಲಂ: 329(4),351(2) ಜೊತೆಗೆ 3(5) BNS ಮತ್ತು ಕಲಂ: 8,12 The Karnataka Micro loan and small loan(Prevention Coerice actions) ordiance 2025 ರಂತೆ ಪ್ರಕರಣ ದಾಖಲಾಗಿರುತ್ತದೆ.