ಗಾಂಧಿ ಕುಟುಂಬವನ್ನು ಮೆಚ್ಚಿಸುವ ಸಲುವಾಗಿ ಸಾರ್ವಕರ್ ಅವರನ್ನು ಅವಮಾನಿಸಿದ ಮಣಿಶಂಕರ್ ಅಯ್ಯರ್ ಗೆ ಗಾಂಧಿ ಕುಟುಂಬದಿಂದ ಅವಮಾನ

1
ಗಾಂಧಿ ಕುಟುಂಬವನ್ನು ಮೆಚ್ಚಿಸುವ ಕಾರಣಕ್ಕಾಗಿ ಸಾರ್ವಕರ್ ಅವರನ್ನು ಅವಮಾನಿಸಿದ   ಮಣಿಶಂಕರ್ ಅಯ್ಯರ್ ಗೆ ಗಾಂಧಿ ಕುಟುಂಬದಿಂದ ಅವಮಾನ

ಒಂದು ಕಾಲದಲ್ಲಿ ಗಾಂಧಿ ಪರಿವಾರಕ್ಕೆ ನಿಕಟವಾಗಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಈಗ ಗಾಂಧಿ ಪರಿವಾರದ ಕುರಿತು ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.


ತಮ್ಮ ರಾಜಕೀಯ ಜೀವನದಲ್ಲಿ ಗಾಂಧಿ ಪರಿವಾರ ಮಹತ್ವ ಪಾತ್ರ ವಹಿಸಿದ್ದನ್ನು ಒಪ್ಪಿಕೊಳ್ಳುತ್ತಲೇ ಅದರ ಪತನಕ್ಕೆ ಕಾರಣವೂ ಗಾಂಧಿ ಪರಿವಾರವೇ ಎಂದು ಹೇಳುವ ಮೂಲಕ ಮಣಿಶಂಕರ್ ಅಯ್ಯರ್ ಅಚ್ಚರಿ ಮೂಡಿಸಿದ್ದಾರೆ.

ನನ್ನ ಜೀವನದ ವಿಪರ್ಯಾಸವೆಂದರೆ, ನನ್ನ ರಾಜಕೀಯ ಜೀವನವನ್ನು ರೂಪಿಸಿದ್ದೂ ಗಾಂಧಿಗಳೇ, ಅದನ್ನು ಪತನಗೊಳಿಸಿದ್ದೂ ಗಾಂಧಿಗಳೇ ಎಂದು ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗಾಂಧಿ ಪರಿವಾರದೊಂದಿಗೆ ತಮ್ಮ ನೇರ ಸಂಪರ್ಕ ಕಡಿಮೆಯಾಗಿದೆ ಎಂದೂ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

“10 ವರ್ಷಗಳಿಂದ ಸೋನಿಯಾ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ನನಗೆ ಅವಕಾಶ ನೀಡಲಿಲ್ಲ,

ಒಮ್ಮೆ ಬಿಟ್ಟರೆ, ರಾಹುಲ್ ಗಾಂಧಿಯೊಂದಿಗೆ ಯಾವುದೇ ಅರ್ಥಪೂರ್ಣ ಸಮಯವನ್ನು ಕಳೆಯಲು ನನಗೆ ಅವಕಾಶ ನೀಡಲಿಲ್ಲ ಮತ್ತು ಒಂದು ಅಥವಾ ಎರಡು ಬಾರಿ ಹೊರತುಪಡಿಸಿದರೆ ನಾನು ಪ್ರಿಯಾಂಕಾ ಅವರೊಂದಿಗೆ ಹೆಚ್ಚು ಸಮಯ ಕಳೆದಿಲ್ಲ ಎಂದು ಅವರು ಹೇಳಿದರು,

ಪ್ರಿಯಾಂಕಾ ಗಾಂಧಿ ಅವರು ಸಾಂದರ್ಭಿಕವಾಗಿ ಫೋನ್‌ಗೆ ಕರೆ ಮಾಡಿದ್ದಾರೆ, ಇದು ಕೆಲವು ಮಟ್ಟದ ಸಂಪರ್ಕವನ್ನು ಜೀವಂತವಾಗಿರಿಸಿದೆ ಎಂದು ಅಯ್ಯರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಒಂದು ನಿರ್ದಿಷ್ಟ ಘಟನೆಯನ್ನು ನೆನಪಿಸಿಕೊಂಡ ಅಯ್ಯರ್, ಪಕ್ಷದಿಂದ ಅಮಾನತುಗೊಂಡ ಅವಧಿಯಲ್ಲಿ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ವಯನಾಡ್ ಸಂಸದರನ್ನು ಅವಲಂಬಿಸಬೇಕಾಯಿತು ಎಂದು ಹೇಳಿದರು

. “ನಾನು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿದ್ದೇನೆ ಮತ್ತು ಆಕೆ ಯಾವಾಗಲೂ ನನ್ನೆಡೆಗೆ ತುಂಬಾ ದಯೆ ತೋರುತ್ತಾರೆ” ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

“ರಾಹುಲ್ ಅವರ ಹುಟ್ಟುಹಬ್ಬ ಜೂನ್‌ನಲ್ಲಿ ಇರುವುದರಿಂದ, ರಾಹುಲ್‌ಗೆ ನನ್ನ ಶುಭಾಶಯಗಳನ್ನು ತಿಳಿಸಲು ನಾನು ಆಕೆಯನ್ನು ಕೇಳಬಹುದು ಎಂದು ನಾನು ಭಾವಿಸಿದ್ದೇನೆ” ಎಂದು ಮಣಿಶಂಕರ್ ಅಯ್ಯರ್ ತಿಳಿಸಿದ್ದಾರೆ.

ನೀವು ರಾಹುಲ್ ಗಾಂಧಿ ಅವರೊಂದಿಗೆ ಏಕೆ ನೇರವಾಗಿ ಮಾತನಾಡುತ್ತಿಲ್ಲ? ಎಂದು ಪ್ರಿಯಾಂಕ ನನ್ನನ್ನು ಪ್ರಶ್ನಿಸಿದ್ದರು. ನಾನು ಅಮಾನತುಗೊಂಡಿದ್ದೇನೆ ಆದ್ದರಿಂದ ನನ್ನ ನಾಯಕನ ಜೊತೆ ನಾನು ಮಾತನಾಡಲು ಆಗುತ್ತಿಲ್ಲ ಎಂದು ಹೇಳಿದ್ದಾಗಿ ಮಣಿಶಂಕರ್ ಅಯ್ಯರ್ ನೆನಪುಗಳನ್ನು ಹಂಚಿಕೊಂಡಿದ್ದಾರೆ.

“2012 ರ ಅವಧಿಯಲ್ಲಿ ಸೋನಿಯಾ ಗಾಂಧಿ ಅವರಿಗೂ ಅನಾರೋಗ್ಯ ಉಂಟಾಗಿತ್ತು, ಮನಮೋಹನ್ ಸಿಂಗ್ ಅವರಿಗೆ 6 ಬೈಪಾಸ್ ಶಸ್ತ್ರಚಿಕಿತ್ಸೆಗಳಾಗಿದ್ದವು, ಆದ್ದರಿಂದ ಆ ಅವಧಿಯಲ್ಲಿ ಪ್ರಣಬ್ ಮುಖರ್ಜಿ ಸರ್ಕಾರ ಮತ್ತು ಪಕ್ಷವನ್ನು ಸಂಬಾಳಿಸಿದ್ದರು” ಎಂದು ಮಣಿಶಂಕರ್ ಅಯ್ಯರ್ ಹಳೆಯ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಇಸ್ಲಾಂಗೆ ಮತಾಂತರ, ಮದುವೆಗೆ ನಿರಾಕರಣೆ; ಕತ್ತು ಸೀಳಿ ಭಾಗ್ಯಶ್ರೀ ಹತ್ಯೆ ಮಾಡಿದ ಶೇಖ್ ರಯೀಸ್

ಮಧ್ಯಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಧಾರ್ಮಿಕ ಮತಾಂತರ ಮತ್ತು ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು...

ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ ನಲ್ಲಿ ರಮ್ಮಿ ಅಡಿ ಕೃಷಿ ಖಾತೆಯನ್ನು ಕಳೆದುಕೊಂಡ ಸಚಿವ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲಿನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ ತೀರ್ಪು ವಿಶೇಷ ನ್ಯಾಯಾಲಯದಿಂದ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್...

ಅವಧೇಶಾನಂದ ಮಹಾರಾಜ್ ಕೊಲೆ ಪ್ರಕರಣ: ಆರ್ ಎಸ್ಎಸ್ ಮಾಜಿ ಪ್ರಚಾರಕ ಉತ್ತಮ್ ಗಿರಿಗೆ ಜೀವಾವಧಿ ಶಿಕ್ಷೆ

ಸಿರೋಹಿ: 2018 ರಲ್ಲಿ ಏಕಲ್ ವಿದ್ಯಾಲಯದ ಪೋಷಕ ಅವಧೇಶಾನಂದ ಮಹಾರಾಜ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...