thekarnatakatoday.com
News

ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ 33.33 ಕೋಟಿ ಮೌಲ್ಯದ ಅಕ್ರಮ ಮದ್ಯವಶ

“ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪ ಚುನಾವಣೆ ನಡೆಯುತ್ತಿದ್ದು, ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಇದುವರೆಗೆ 29 ಕೋಟಿ ರೂಪಾಯಿ ಮೌಲ್ಯದ ಸುಮಾರು ಮೂರು ಲಕ್ಷ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಜಿದ್ದಾ ಜಿದ್ದಿನ ಅಖಾಡವಾಗಿ ಮಾರ್ಪಟ್ಟಿದ್ದು, ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಎನ್ ಡಿಎ ಅಭ್ಯರ್ಥಿಯಾಗಿ ಹಾಗೂ ಸಿಪಿ ಯೋಗೀಶ್ವರ್ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಮುಖ್ಯ ಚುನಾವಣಾಧಿಕಾರಿಗಳ ಪ್ರಕಾರ, ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ, ಈ ಮೂರು ಕ್ಷೇತ್ರಗಳಲ್ಲಿ ಅಕ್ಟೋಬರ್ 16 ರಿಂದ ನವೆಂಬರ್ 11 ರವರೆಗೆ ಪೊಲೀಸರು, ಅಬಕಾರಿ ಮತ್ತು ಇತರ ಅಧಿಕಾರಿಗಳು ಒಟ್ಟು 33.33 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ಈ ಪೈಕಿ ಚನ್ನಪಟ್ಟಣದಲ್ಲಿಯೇ ಬರೋಬ್ಬರಿ 29 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಉಪ ಚುನಾವಣೆ: ಮೂರು ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ತೆರೆ, ಬುಧವಾರ ಮತದಾನ

ಶಿಗ್ಗಾಂವಿಯಲ್ಲಿ 300 ಲೀಟರ್‌ಗಿಂತ ಹೆಚ್ಚು ಮದ್ಯ ಮತ್ತು ಸಂಡೂರಿನಲ್ಲಿ 2926 ಲೀಟರ್ ಮದ್ಯ ಹಾಗೂ ಚನ್ನಪಟ್ಟಣದಲ್ಲಿ 2,95,395 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಇದೇ ವೇಳೆ ಶಿಗ್ಗಾಂವಿಯಲ್ಲಿ 8.2 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಶಿಗ್ಗಾಂವ, ಸಂಡೂರು ಮತ್ತು ಚನ್ನಪಟ್ಟಣದಲ್ಲಿ ಸುಮಾರು 770 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಏಳು ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಸಿದ್ಧರಾಗಿದ್ದಾರೆ. ಒಟ್ಟು 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ.




Follow KannadaPrabha channel on WhatsApp    KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ ಚನ್ನಪಟ್ಟಣಉಪ ಚುನಾವಣೆchannapatnaBypollsLiquor worth over Rs 29 cr seized29 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ Show Comments Advertisement ಈ ವಿಭಾಗದ ಇತರ ಸುದ್ದಿ ಚನ್ನಪಟ್ಟಣ ಉಪಚುನಾವಣೆ: ‘ಔಟ್ ಸೈಡರ್ ಕಾರ್ಡ್’ ಪ್ರಯೋಗಿಸಿದ ಕಾಂಗ್ರೆಸ್, ನಿಖಿಲ್ ವಿರುದ್ಧ ವಾಗ್ದಾಳಿ Manjula VN 05 Nov 2024 ಮಹಾರಾಷ್ಟ್ರ ಚುನಾವಣೆ: ಸುಮಾರು 24 ಕೋಟಿ ರೂ ಮೌಲ್ಯದ ಚಿನ್ನಾಭರಣ ವಶ! Nagaraja AB 02 Nov 2024 ಚನ್ನಪಟ್ಟಣ ಉಪ ಚುನಾವಣೆ: ಅಖಾಡಕ್ಕೆ ದೇವೇಗೌಡ ಎಂಟ್ರಿ; ನಿಖಿಲ್ ಪರ ಬಿರುಸಿನ ಪ್ರಚಾರಕ್ಕೆ ವೇದಿಕೆ ಸಜ್ಜು! Manjula VN 28 Oct 2024 ಚುನಾವಣಾ ಅಧಿಕಾರಿಗಳ ಮಹಾ ಬೇಟೆ; ಪುಣೆಯಲ್ಲಿ 139 ಕೋಟಿ ರೂ ಮೌಲ್ಯದ ಚಿನ್ನಾಭರಣ ಜಪ್ತಿ! Lingaraj Badiger 25 Oct 2024 Advertisement Contact Us About Us Privacy Policy Terms of Use The New Indian Express The Morning Standard Dinamani Samakalika Malayalam Cinema Express Indulgexpress Edexlive Eventxpress © kannadaprabha 2024 Powered by Quintype ” https://www.kannadaprabha.com/karnataka/2024/Nov/12/liquor-worth-over-rs-29-cr-seized-from-channapatna-in-ktaka-ec#:~:text=%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6%20%E0%B2%AE%E0%B3%82%E0%B2%B0%E0%B3%81%20%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%B8%E0%B2%AD%E0%B2%BE%20%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0%E0%B2%97%E0%B2%B3%E0%B2%BF%E0%B2%97%E0%B3%86%20%E0%B2%AC%E0%B3%81%E0%B2%A7%E0%B2%B5%E0%B2%BE%E0%B2%B0%20%E0%B2%89%E0%B2%AA,Powered%20by%20Quintype

Related posts

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕಾಂಗ್ರೆಸ್ ನಲ್ಲಿಮುಂದುವರಿದ ಲಾಬಿ ಹೈಕಮಾಂಡ್ ನತ್ತ ಆತೃಪ್ತರ  ಚಿತ್ತ

The Karnataka Today

ಜನನ ಪ್ರಮಾಣದ ಪತ್ರದಲ್ಲಿ ಹೆಸರು ಬದಲಾವಣೆಗೆ ಹೊಸ ಕಾರ್ಯ ಸೂಚಿ ಪ್ರಕಟಿಸಿದ  ಹೈಕೋರ್ಟ್

The Karnataka Today

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ  ಮನವಿ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನಿಯೋಗ

The Karnataka Today

Leave a Comment