ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕರ್ಜೆ,ವಾರ್ಷಿಕ ಜಾತ್ರಾ ಮಹೋತ್ಸವ, ಗೆಂಡಸೇವೆ ರಥೋತ್ಸವ ದಿನಾಂಕ ದಿನಾಂಕ : 13-04-2026ನೇ ಸೋಮವಾರದಿಂದ 16-04-2026ನೇ ಗುರುವಾರದ ವರೆಗೆ ನಡೆಯಲಿದೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿ

ದಿನಾಂಕ: 13-04-2026ನೇ ಸೋಮವಾರಬೆಳಿಗ್ಗೆ ಗಂಟೆ 8.30ರಿಂದ : ಶ್ರೀ ಮಹಾಗಣಪತಿ ದೇವರಿಗೆ ನವಕುಂಭ ಸ್ನಪನ, ಅಧಿವಾಸ ಹೋಮ, ಮಹಾಪೂಜೆ ಇತ್ಯಾದಿಗಳು. ಧರ್ಮಚಾವಡಿ ಪಂಜುರ್ಲಿ ಹಾಗೂ ಸ್ವಾಮಿ ನಾಗ ಇತ್ಯಾದಿಗಳಿಗೆನವಕುಂಭ ಸಪನ ಹೋಮ, ಅಭಿಷೇಕ, ಮಹಾಪೂಜೆ

ಸಂಜೆ ಗಂಟೆ 6.30ಕ್ಕೆ: ಶ್ರೀ ಸನ್ನಿಧಿಯಲ್ಲಿಉತ್ಸವ ಬಲಿ ಮುಹೂರ್ತ, ಕಲ್ಕುಡ ಕಟ್ಟೆ ಅಮ್ಮನವರು: ಅಡಕತ್ತಾಯ ಭದ್ರಕಾಳಿ, ಮಲಯಾಳಿ ಬೊಬ್ಬರ್ಯ ಇತ್ಯಾದಿ ಧರ್ಮದೈವಗಳಿಗೆ ನವಕುಂಭ ಸ್ಥಾಪನ ಹೋಮ ಸ್ನಪನ -ಮಹಾಪೂಜೆ ಇತ್ಯಾದಿಗಳು

ದಿನಾಂಕ: 14-04-2026ನೇ ಮಂಗಳವಾರ
ಪೂವಾಹ್ನ ಗಂಟೆ 8-15ಕ್ಕೆ : ಒದಗುವ ವೃಷಭ ಲಗ್ನ ಸುಮೂಹೂರ್ತದಲ್ಲಿ ಧ್ವಜಾರೋಹಣ, ಗಣಯಾಗ, ಬ್ರಹ್ಮ, ಪಂಜುರ್ಲಿ ಇತ್ಯಾದಿ ಧರ್ಮ ದೈವಗಳಿಗೆ ನವ ಕುಂಭ ಸ್ಥಾಪನ, ಹೋಮ ಸ್ನಪನ. ಮಹಾಪೂಜೆ ಇತ್ಯಾದಿಗಳು, ಮಹಾಸಾನಿಧ್ಯಕ್ಕೆ ತತ್ವ ಹೋಮ ಸ್ನಪನ ಮಹಾಪೂಜೆ, ಅನ್ನಸಂತರ್ಪಣೆ ಇತ್ಯಾದಿಗಳು

ಸಂಜೆ ಗಂಟೆ 7.00ರಿಂದ : ಧರ್ಮ ಚಾವಡಿಯಿಂದ ಉತ್ಸವ ಮೂಹೂರ್ತ ಪ್ರಾರಂಭ, ದೀವಟಿಗೆಬೆಳಕಿನ ಮಹಾಪೂಜೆ – ಗುಂಡುಸೇವೆ ರಾತ್ರಿ ಗಂಟೆ 8.30ಕ್ಕೆ : ಅನ್ನಸಂತರ್ಪಣೆ ರಾತ್ರಿ ಗಂಟೆ 11.00ರಿಂದ : ಗೆಂಡಸೇವೆ, ಮಹಾರಂಗ ಪೂಜೆ, ರಥೋತ್ಸವ, ಕೆರೆ ದೀಪೋತ್ಸವ, ಮುಖಭೇಟಿ, ಧ್ವಜಾವರೋಹಣ, ಭೂತಬಲಿ, ಇತ್ಯಾದಿಗಳು

ದಿನಾಂಕ: 15-04-2026ನೇ ಬುಧವಾರಬೆಳಿಗ್ಗೆ: ಪಂಜುರ್ಲಿ ಕೋಲ, ತುಲಾಭಾರ, ದೇವಸ್ಥಾನದ ನಾಗಬನದಲ್ಲಿ ಆಶ್ಲೇಷಾ ಬಲಿ, ಮಹಾಪೂಜೆ, ಶ್ರೀ ಸನ್ನಿಧಿಯಲ್ಲಿ ಚಂಡಿಕಾಯಾಗ, ಮಹಾಪೂಜೆ – ಮಹಾಪ್ರಸಾದ ವಿತರಣೆ ನಡೆಯಲಿರುವುದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಭಕ್ತಾಭಿಮಾನಿಗಳಲ್ಲಿ ವಿನಂತಿಸಿದ್ದಾರೆ
Leave a comment