ಜೆರುಸಲೇಂ ಅಲ್-ಅಕ್ಸಾ ಮಸೀದಿ  ಮೇಲೆ ಇರಾನ್ ಕ್ಷಿಪಣಿ ದಾಳಿ

2

ಈದ್ ಅಲ್-ಫಿತರ್‌ ದಿನವೇ ಜೆರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್-ಅಕ್ಸಾ ಮಸೀದಿಯಿಂದ ಕೇವಲ ನೂರು ಮೀಟರ್‌ಗಳಷ್ಟು ದೂರದಲ್ಲಿ ಕ್ಷಿಪಣಿ ಬಿದ್ದಿದೆ. ಇದರಿಂದಾಗಿ ನೂರಾರು ಮುಸ್ಲಿಂರು ನಗರದ ಹೊರಗೆ ಪ್ರಾರ್ಥನೆ ಸಲ್ಲಿಸುವಂತಾಯಿತು. ಸುಮಾರು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂರಿಗೆ ಮಸೀದಿ ಬಳಿಗೆ ಪ್ರವೇಶ ನಿರ್ಬಂಧಿಸಲಾಯಿತು.

ಈದ್ ಅಲ್-ಫಿತರ್ ಆಚರಣೆ ವೇಳೆಯಲ್ಲಿ ಇರಾನ್ ಜೆರುಸಲೇಂ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಮುಸ್ಲಿಂ, ಕ್ರಿಶ್ಚಿಯರನ್ನರ್ ಮತ್ತು ಯಹೋದಿಗಳ ಪ್ರಾರ್ಥನಾ ಮಂದಿರದಿಂದ ಕೆಲವೇ ಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ ಎಂದು ಇಸ್ರೇಲ್ ತಿಳಿಸಿದೆ. ಇದೇ ಮುಲ್ಲಾಗಳ ನಿಜವಾದ ಮುಖವಾಗಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

  ನಾಗರಿಕ ಸ್ಥಳವಾಗಲಿ ಅಥವಾ ಪ್ರಾರ್ಥನಾ ಮಂದಿರಗಳಿರುವ ಪವಿತ್ರ ತಾಣವಾಗಲೀ ಒಟ್ಟಾರೇ ಇಸ್ರೇಲ್ ರಾಷ್ಟ್ರವನ್ನು ನಾಶಪಡಿಸಬೇಕು ಎಂಬ ಇರಾನ್ ಆಡಳಿತದ ಉದ್ದೇಶಕ್ಕೆ ಈ ದಾಳಿಯೇ ಸಾಕ್ಷಿಯಾಗಿದೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ನೂರಾರು ಮುಸ್ಲಿಂ ಆರಾಧಕರು ಅಲ್-ಅಕ್ಸಾ ಮಸೀದಿ ಬಳಿಗೆ ತೆರಳಲು ಸಾಧ್ಯವಾಗಲಿಲ್ಲ. ಇರಾನ್‌ ಜೊತೆಗೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಭದ್ರತಾ ಕಾಳಜಿಯಿಂದ ಮಸೀದಿ ಬಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

Leave a comment

Leave a Reply

Your email address will not be published. Required fields are marked *

Related Articles

ಇಂಧನ ಮೂಲಸೌಕರ್ಯದ ಮೇಲೆ ದಾಳಿಗೆ ಇರಾನ್ ತೀವ್ರ ಆಕ್ರೋಶ ಅನಿಯಂತ್ರಿತ ಪ್ರತಿದಾಳಿ” ಇರಾನ್ ಸ್ಪಷ್ಟ ಎಚ್ಚರಿಕೆ

“ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ...

ಹಾರ್ಮುಜ್ ಜಲಸಂಧಿಯ ಬಳಿ ಸಮುದ್ರ ಸಂಚಾರಕ್ಕೆ ಅಡ್ಡಿ ಭಾರತೀಯ ಯುದ್ಧನೌಕೆ    ಭದ್ರತೆಯಲ್ಲಿ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್ ಪಿಜಿ ಟ್ಯಾಂಕರ್

ನವದೆಹಲಿ: ಇರಾನ್ ಸಂಘರ್ಷದ ನಡುವೆಯೇ ಶನಿವಾರವೂ ಕೂಡ ಭಾರತ ಮೂಲದ  ಎಲ್ ಪಿಜಿ  ಟ್ಯಾಂಕರ್ ವೊಂದು...

ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ ನೆರೆ ರಾಷ್ಟ್ರ ಗಳ ಕ್ಷಮೆ ಕೇಳಿದ ಇರಾನ್

ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇರಾನ್ ಹಾಗೂ ಮಧ್ಯಪ್ರಾಚ್ಯದ...

ಯುದ್ಧ ಸಂಘರ್ಷ ಇರಾನ್ ವಿದೇಶಾಂಗ ಕಾರ್ಯದರ್ಶಿ ಜೊತೆಗೆ ಮಾತುಕತೆ ನಡೆಸಿದ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್

“ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಇರಾನಿನ...