ವಾಯು ಗುಣಮಟ್ಟ ಸೂಚ್ಯಂಕ 387 ದಾಖಲು : ಪ್ರಯಾಣಿಕರಿಗೆ ದೆಹಲಿ ವಿಮಾನ ನಿಲ್ದಾಣ ಎಚ್ಚರಿಕೆ

50

ಹೊಸದಿಲ್ಲಿ :  ದೆಹಲಿಯಲ್ಲಿ AQI 387ಕ್ಕೆ ಏರಿಕೆಯಾಗಿದ್ದು, ಕಳಪೆ ಮಟ್ಟ ತಲುಪಿದೆ ವಿಮಾನ ಪ್ರಯಾಣಿಕರಿಗೆ ಮುನ್ಸೂಚನೆ ನೀಡಿದ ದೆಹಲಿ ವಿಮಾನ ನಿಲ್ದಾಣ ವಾರಾಂತ್ಯದಲ್ಲಿ ತಾಪಮಾನ ಏರಿಕೆಯಾಗುವ ಮುನ್ಸೂಚನೆ ನೀಡಿದ IMD ದಿಲ್ಲಿ ವಾಯುಮಾಲಿನ್ಯ

ದಿನದಿಂದ ದಿನಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿಯುತ್ತಿದೆ. ದೆಹಲಿ ಶನಿವಾರ(ಡಿ.13) ಬೆಳ್ಳಂಬೆಳ್ಳಗೆಯೇ ದಟ್ಟವಾದ ಹೊಗೆಯಿಂದ ಆವರಿಸಲ್ಪಟ್ಟಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 387 ಕ್ಕೆ ಏರಿಕೆಯಾಗಿದ್ದು, ಅತ್ಯಂತ ಕಳಪೆ ಮಟ್ಟಕ್ಕೆ ಜಾರಿದೆ. ದೆಹಲಿಯ ದಟ್ಟವಾದ ಮಂಜಿನಿಂದ ಆವೃತವಾಗಿದ್ದು, ಇದು ಹಲವಾರು ಪ್ರದೇಶಗಳಲ್ಲಿ ಗೋಚರತೆಯನ್ನು ಕಡಿಮೆ ಮಾಡಿದೆ.

ಅತ್ಯಂತ ಕಳಪೆಗೆ ಕುಸಿದ ವಾಯುಗುಣ ಮಟ್ಟ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯ ಮಾಹಿತಿಯ ಪ್ರಕಾರ, ಆನಂದ್ ವಿಹಾರ್ (AQI 435), ಬುರಾರಿ ಕ್ರಾಸ್ಸಿಂಗ್ (415), ಚಾಂದನಿ ಚೌಕ್ (419), ಘಾಜಿಪುರ (435), ಜಹಾಂಗೀರ್‌ಪುರಿ (442), ಆರ್.ಕೆ. ಪುರಂ (404), ಮತ್ತು ರೋಹಿಣಿ (436) ಹೀಗೆ ಕೆಲವು ಪ್ರದೇಶಗಳು ಈಗಾಗಲೇ ತೀವ್ರ‌ ಮಟ್ಟದ ವಲಯದಲ್ಲಿವೆ. CPCB ದತ್ತಾಂಶವನ್ನು ಉಲ್ಲೇಖಿಸಿ ತಿಳಿಸಿರುವ ಅಧಿಕಾರಿಗಳು ಹೆಚ್ಚಿನ ಮಾನಿಟರಿಂಗ್ ಕೇಂದ್ರಗಳು ಅತ್ಯಂತ ಕಳಪೆ ವಾಯುವನ್ನು ವರದಿ ಮಾಡುತ್ತಿವೆ.

ಕಡಿಮೆ ಗಾಳಿಯ ವೇಗದಿಂದಾಗಿ ಮಾಲಿನ್ಯಕಾರಕಗಳು ನೆಲದ ಹತ್ತಿರವೇ ಉಳಿದುಕೊಂಡಿವೆ ಪಶ್ಚಿಮ ದಿಕ್ಕಿನಿಂದ ಬರುವ ದುರ್ಬಲ ವಾತಾವರಣವು ತಕ್ಷಣದ ಪರಿಹಾರವನ್ನು ತರುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ದೆಹಲಿ ವಿಮಾನ ನಿಲ್ದಾಣ ಮುನ್ಸೂಚನೆ ದೆಹಲಿ ವಿಮಾನ ನಿಲ್ದಾಣವು ವಿಮಾನ ಕಾರ್ಯಾಚರಣೆಗಳು ಎಂದಿನಂತೆ ನಡೆಯುತ್ತಿವೆ. ಆದಾಗ್ಯೂ, ಕಡಿಮೆ ಗೋಚರತೆ ಇರುವ ಕಾರಣದಿಂದಾಗಿ ವಿಶೇಷ ಕಾರ್ಯಾಚರಣೆಗಳು ಜಾರಿಯಲ್ಲಿವೆ ಎಂದು ಅಧಿಕಾರಿಗಳು ಪ್ರಕಟಣೆ ನೀಡಿದ್ದು, ಪ್ರಯಾಣಿಕರು ತಮ್ಮ ವಿಮಾನದ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ ಎಂದು ತಿಳಿಸಿದೆ. ತಾಪಮಾನ ಹಚ್ಚಾಗುವ ನಿರೀಕ್ಷೆ ಇನ್ನು IMD ಈ ವಾರಾಂತ್ಯದಲ್ಲಿ ತಾಪಮಾನವು ಸ್ವಲ್ಪ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಕನಿಷ್ಠ ತಾಪಮಾನವು 10-12°C ಮತ್ತು ಗರಿಷ್ಠ ತಾಪಮಾನವು 23-25°C ರಷ್ಟಿರಬಹುದು.

ಮಧ್ಯಮ ಮಂಜು ಮುಂದುವರಿಯುವ ನಿರೀಕ್ಷೆಯಿದ್ದು, ಇದು ವಾಯು ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸುತ್ತದೆ. ದೆಹಲಿಯು ಮತ್ತೊಂದು ಸವಾಲಿನ ಚಳಿಗಾಲದ ಹೊಗೆಯನ್ನು ಎದುರಿಸುತ್ತಿರುವಾಗ, ನಾಗರಿಕರು ಹೊರಗಿನ ಓಡಾಟವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಆರೋಗ್ಯ ಸಲಹೆಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ.”

Leave a comment

Leave a Reply

Your email address will not be published. Required fields are marked *

Related Articles

ನಮ್ಮಿಂದ ಬಿಜೆಪಿ ಹಾಳಾಗಿಲ್ಲ: ನಮ್ಮಿಂದಾಗಿ ಮಂತ್ರಿಯಾಗಿ ಲಂಚ ಪಡೆದು ನೀವು ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನೀವು ಕಾರಣರಾದೀರಿ ಈಶ್ವರಪ್ಪಗೆ:: ಬಿ ಸಿ ಪಾಟೀಲ್ ತಿರುಗೇಟು

ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ...

ಪಿ ಎಚ್ ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಿ ಪ್ರಾಧ್ಯಾಪಕನ ಅಮಾನತು

“ಧಾರವಾಡ: ಪಿ ಎಚ್ ಡಿ  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ...

ಕೊಲ್ಲೂರು ದೇವಿಗೆ 1 ಕೆಜಿ 600 ಗ್ರಾಮದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್

“ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಮೂಕಾಂಬಿಕೆ...

ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ, ಮೆಟ್ರೋ ಮೂರನೇ ಹಂತ ಯೋಜನೆಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

“ನವದೆಹಲಿ: ಸಿಎಂ ಡಿಕೆ ಶಿವಕುಮಾರ್ ಅವರು ಇಂದು ಕೇಂದ್ರ ಇಂಧನ, ವಸತಿ ಮತ್ತು ನಗರಾಭಿವೃದ್ಧಿ ಸಚಿವ...