ಮಲ್ಪೆ ಮುಗ್ಧ ಜನರನ್ನ ದಾರಿ ತಪ್ಪಿಸಿ ಷಡ್ಯಂತರ ರಚಿಸುವುದನ್ನು ಕೂಡಲೇ ನಿಲ್ಲಿಸಿ ಮಾಜಿ ಶಾಸಕ ರಘುಪತಿ ಭಟ್ ಗೆ ಸನತ್ ಸಾಲಿಯಾನ್ ಎಚ್ಚರಿಕೆ

128

ಮಲ್ಪೆ ಹಲವಾರು ದಶಕಗಳಿಂದ ಉಡುಪಿಯ ಶಾಸಕರಾಗಿದ್ದ ರಘುಪತಿ ಭಟ್ ನೀವು ಮಲ್ಪೆ ಕಡಲ ತಡಿಯ ಜನರ ಬಹು ಬೇಡಿಕೆಯನ್ನು ಈಡೇರಿಸದೆ ಹಲವಾರು ವರ್ಷಗಳಿಂದ ಹನುಮಾನ್ ನಗರದ ಜನರು ನೀವು ಶಾಸಕರಾಗಿದ್ದ ಸಂದರ್ಭದಲ್ಲಿ ಬಯಲು ರಂಗಮಂದಿರ ಹಾಗೂ ಇನ್ನಿತರ ಚಟುವಟಿಕೆಗಳಿಗಾಗಿ ನಿಮ್ಮ ಬಳಿ ಬೇಡಿಕೆಟ್ಟು ಹಲವಾರು ಬಾರಿ ಭೇಟಿ ಮಾಡಿದರು ಕೂಡ ಯಾವುದೇ ರೀತಿಯ ಸಹಾಯವನ್ನು ಮಾಡದೆ ಇದೀಗ ಪ್ರಸ್ತುತ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಮಲ್ಪೆಯ ಭಜನಾ ಮಂದಿರ ಹಾಗೂಮುಗ್ದ ಜನರನ್ನಮತ್ತು ಕೆಲವೇ ಕೆಲವು ಬೆರಳೆಣಿಕೆಯ ನಿಮ್ಮ ಹಿಂಬಾಲಕರನ್ನು ಹಿಡಿದುಕೊಂಡು ದಾರಿ ತಪ್ಪಿಸುವ ಕೆಲಸವನ್ನು ಕೂಡಲೇ ನಿಲ್ಲಿಸುವಂತೆ ತಮಗೆ ಈ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಸಮಾಜ ಸೇವಕ ಸನತ್ ಸಾಲಿಯಾನ್ ಮಲ್ಪೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ

ಇದೇ ರೀತಿ ತಾವು ಅಮಾಯಕ ಜನರನ್ನು ದಾರಿ ತಪ್ಪಿಸಿ ಷಡ್ಯಂತರ ರಚಿಸಿದರೆ ತಾವು 15 ವರ್ಷ ಮೂರು ಬಾರಿ ಶಾಸಕರಾಗಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಎಲ್ಲಾ ಅಕ್ರಮಗಳನ್ನು ಬಹಿರಂಗಪಡಿಸಲು ನಾವು ಸಿದ್ಧರಿದ್ದೇವೆ ಕೇವಲ ತಮ್ಮ ಹಿಂಬಾಲಕರಿಗೋಸ್ಕರ ಮಲ್ಪೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ ಅನ್ನೋದು ಈ ಭಾಗದ ಹೆಚ್ಚಿನ ಜನರಿಗೆ ತಿಳಿದಿದೆ ಮಲ್ಪೆ ಜನರನ್ನ ಜನರ ಒಗ್ಗಟ್ಟನ್ನು ಹೊಡೆಯಲು ನೀವು ಮಾಡಿದ ಷಡ್ಯಂತರ ಎಲ್ಲರಿಗೂ ತಿಳಿದ ವಿಚಾರವಾಗಿದೆ ನಿಮ್ಮ ಎಲ್ಲಾ ಅಕ್ರಮಗಳ ಹೆಚ್ಚಿನ ಮಾಹಿತಿ ಸಾರ್ವಜನಿಕರಿಗೆ ಇದೆ

ಮೊದಲ ಬಾರಿ ಶಾಸಕರಾಗಿದ್ದಾಗ ನೀವು ಹೇಗಿದ್ದವರು ನಂತರ ದಿನಗಳಲ್ಲಿ ಹೇಗೆ ಬದಲಾಗಿದ್ದಿರಿ ಏನೆಲ್ಲ ಮಾಡಿದ್ದಿರಿ ಯಾರ್ಯಾರನ್ನು ಬೆಳೆಸಲು ಯಾರ್ಯಾರನ್ನು ಕೂಡ ತುಳಿದಿದ್ದೀರಿ, ನೀವು ಯಾವ ಯಾವ ರೀತಿ ಸಂಬಂಧ ಹೊಂದಿದ್ದೀರಿ ಯಾವ ರೀತಿ ಸಂಪಾದನೆ ಮಾಡಿದ್ದೀರಿ ಎನ್ನುವುದು ಸಾರ್ವಜನಿಕರಿಗೆ ತಿಳಿದ ವಿಚಾರ ಇನ್ನಾದರೂ ಕೂಡ ಜನರ ನಡುವೆ ಒಗ್ಗಟ್ಟನ್ನು ಮುರಿಯುವ ನಿಮ್ಮ ಪ್ರಯತ್ನವನ್ನು ನಿಲ್ಲಿಸಿ, 3 ಬಾರಿ ಅಧಿಕಾರ ಅನುಭವಿಸಿದರು ಕೂಡ ಇನ್ನೂ ನಿಮ್ಮ ಅಧಿಕಾರದ ಆಸೆಯಿಂದ ಸಮಾಜವನ್ನು ವಿಂಗಡಣೆ ಮಾಡಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರಿ ಇಂಥ ಚಟುವಟಿಕೆಗಳಿಂದ ದೂರವಿದ್ದು ನಿಮ್ಮ ಗೌರವವನ್ನು ನೀವು ಉಳಿಸಿಕೊಳ್ಳಿ

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...