ಬಡವರ ಆಹಾರ ರಾಗಿ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ರೈತರನ್ನು ರಾಗಿ ಬೆಳೆಯತ್ತ ಆಕರ್ಷಿಸಿದೆ.

30

ರಾಗಿಯತ್ತ ರೈತನ ಚಿತ್ತ, ಹಾಸನ ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶ ದಿಢೀರ್‌ ಹೆಚ್ಚಳ ಸಿರಿಧಾನ್ಯಗಳ ರಾಜನಿಗೆ ಬೇಡಿಕೆ ಹಾಸನದಲ್ಲಿ 89 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬಿತ್ತನೆ ಸಕ್ಕರೆ ಕಾಯಿಲೆಗೆ ರಾಗಿ ರಾಮಬಾಣ ಹಿನ್ನೆಲೆ, ರಾಗಿ ಉತ್ಪನ್ನಗಳಿಗೂ ಸಕತ್‌ ಡಿಮ್ಯಾಂಡ್‌ ರಾಗಿ ಬೆಳೆ ಪ್ರದೇಶ ಏಕಾಏಕಿ ಭಾರೀ ಏರಿಕೆ ಕಂಡಿದೆ.

ಹಾಸನ: ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಗಿಮುದ್ದೆಯೇ ಪರಿಹಾರ ಎಂಬ ಸಂಗತಿ ಮನಗಂಡಿರುವ ಪರಿಣಾಮ ‘ಸಿರಿಧಾನ್ಯಗಳ ರಾಜ’ ಎಂಬ ಬಿರುದಿಗೆ ಪಾತ್ರವಾಗಿರುವ ರಾಗಿ ಬಿತ್ತನೆ ಪ್ರದೇಶ ಕೇವಲ ಒಂದೇ ವರ್ಷದಲ್ಲಿ ಹತ್ತಾರು ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ದಿಢೀರ್‌ ವಿಸ್ತರಣೆಯಾಗಿದೆ. ಹಾಸನ ಜಿಲ್ಲೆ ಮಾತ್ರವಲ್ಲದೆ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲೂ ರಾಗಿ ಬಿತ್ತನೆ ವಿಸ್ತೀರ್ಣ ಹೆಚ್ಚಳವಾಗುತ್ತಿರುವುದು ಆರೋಗ್ಯದ ಕಾಳಜಿ ಎಷ್ಟಿದೆ ಎಂಬುದನ್ನು ಸಾಕ್ಷೀಕರಿಸಿದಂತಿದೆ.  

ರಾಗಿ ಬೆಳೆಯುವುದು, ನಿರ್ವಹಣೆ ಮಾಡುವುದು ಕಷ್ಟ ಎಂಬ ಕಾರಣದಿಂದ ಇತ್ತೀಚಿನ ವರ್ಷದಲ್ಲಿ ರಾಗಿ ಕೈಬಿಟ್ಟು ಜೋಳ ಮತ್ತಿತರ ಬೆಳೆಗೆ ರೈತರು ಮಾರು ಹೋಗಿದ್ದರು. ಆದರೆ ಅಕ್ಕಿಯಷ್ಟೇ ರಾಗಿಗೂ ಬೆಲೆ ಹಾಗೂ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡುವ ಕ್ಯಾಲ್ಸಿಯಂ ಅಂಶವಿದೆ ಎಂಬ ಸಂಗತಿ ಮನಗಂಡು ರಾಗಿ ಬೆಳೆಯತ್ತ ಮುಖ ಮಾಡಿದ್ದಾರೆ. “ಈ ಹಿಂದೆ ಜಿಲ್ಲಾದ್ಯಂತ 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿತ್ತು. ಪ್ರಸ್ತುತ ಸಾಲಿನಲ್ಲಿ 89 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ” ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ ಕುಮಾರ್‌.

”100 ಗ್ರಾಂ ಅಕ್ಕಿಯಲ್ಲಿ 10 ರಿಂದ 30 ಗ್ರಾಂ ಕ್ಯಾಲ್ಸಿಯಂ ಇದ್ದರೆ, ರಾಗಿಯಲ್ಲಿ 34.4 ಮಿಲಿಗ್ರಾಂ ಕ್ಯಾಲ್ಸಿಯಂ ಅಂಶವಿದೆ. ಹೀಗಾಗಿ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಗಿ ರಾಮಬಾಣವೇ ಸರಿ” ಎನ್ನುತ್ತಾರೆ ಕೃಷಿ ತಜ್ಞ ಡಾ.ವಿಜಯ್‌ ಅಂಗಡಿ. ಬಡವರ ಆಹಾರ ನಾಲ್ಕೈದು ದಶಕಗಳ ಹಿಂದೆ ರಾಗಿಮುದ್ದೆ, ರೊಟ್ಟಿ ಸೇವಿಸುತ್ತಾರೆ ಎಂದರೆ ಅವರು ಕಡುಬಡವರು ಎಂಬ ನಿರ್ಲಕ್ಷ್ಯ ಭಾವನೆ ಬೇರೂರಿತ್ತು. ಪ್ರಸ್ತುತ ಸಕ್ಕರೆ ಕಾಯಿಲೆ ಎಂಬುದು ಸಣ್ಣ ವಯಸ್ಸಿನಿಂದ ದೊಡ್ಡವರ ತನಕ ಕಾಡುತ್ತಿರುವ ಕಾರಣ ರಾಗಿ ಪದಾರ್ಥ ಸೇವನೆ ಶ್ರೀಮಂತರ ಹೊಟ್ಟೆಯನ್ನು ಸೇರುತ್ತಿದೆ.

ಗೌಡರಿಂದ ರಾಗಿ ಫೇಮಸ್‌ ಹರದನಹಳ್ಳಿಯ ಎಚ್‌.ಡಿ.ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ಅವರ ನೆಚ್ಚಿನ ಆಹಾರವಾದ ರಾಗಿಮುದ್ದೆ ದೇಶ-ವಿದೇಶದಲ್ಲೂ ಪ್ರಸಿದ್ಧಿ ಪಡೆಯಿತು. ಇಂದಿಗೂ ಆ ಖ್ಯಾತಿ ಹೆಚ್ಚುತ್ತಲೇ ಇದೆ. ಸ್ಟಾರ್‌ ಹೋಟೆಲ್‌ನಲ್ಲೂ ಮುದ್ದೆ ಮೆಸ್‌, ಹೋಟೆಲ್‌, ರಸ್ತೆಬದಿ ತಿಂಡಿಗಾಡಿಯಿಂದ ಹಿಡಿದು ಸ್ಟಾರ್‌ ಹೋಟೆಲ್‌ಗಳಲ್ಲೂ ರಾಗಿ ಮುದ್ದೆ ಊಟ ಎಂಬುದು ವಿಶೇಷ ಎಂಬುದಕ್ಕಿಂತ ಬೇಡಿಕೆ ಹೆಚ್ಚಿಸಿಕೊಂಡಿದೆ.

ಹೀಗಾಗಿ ಮುದ್ದೆ ಊಟ ಎಲ್ಲಿ ಸಿಗುತ್ತದೆ ಎಂಬುದನ್ನು ಹುಡುಕಿಕೊಂಡು ಹೋಗುವ ಜನರಿಗೇನು ಕಡಿಮೆ ಇಲ್ಲ. ಈ ಎಲ್ಲ ಕಾರಣದಿಂದ ರಾಗಿ ಮುದ್ದೆಯಷ್ಟೇ ಅಲ್ಲ ರಾಗಿ ದೋಸೆ, ರೊಟ್ಟಿ, ರಾಗಿಲಡ್ಡು, ಬಿಸ್ಕೇಟ್‌, ರಾಗಿ ಉಪ್ಪಿಟ್ಟು, ರಾಗಿ ಮಾಲ್ಟ್‌ ಇತ್ಯಾದಿ ಉತ್ಪನ್ನಗಳು ಬೇಡಿಕೆ ಹೆಚ್ಚಿಸಿಕೊಂಡಿದೆ.

ಬೇಕರಿ, ಸಿರಿಧಾನ್ಯ ಮಳಿಗೆಯಲ್ಲೂ ರಾಗಿ ಉತ್ಪನ್ನಗಳು ಭರ್ಜರಿಯಾಗಿ ಬೇಡಿಕೆ ಕಂಡುಕೊಂಡಿದೆ. ಕೆಜಿ ರಾಗಿಗೆ 50 ರೂ. ನಾನಾ ಬ್ರ್ಯಾಂಡ್‌ನಲ್ಲಿ ರಾಗಿ ಹಿಟ್ಟು ಮಾರುಕಟ್ಟೆಗೆ ಲಗ್ಗೆಇಟ್ಟಿದ್ದು, ಪ್ಯಾಕ್‌ ಮಾಡಿದ ಕೆಜಿ ರಾಗಿ ದರ 50 ರೂ.ಗೆ ಏರಿಕೆ ಕಂಡಿದೆ. ಜಿಲ್ಲೆಯಿಂದ ಬೆಂಗಳೂರು ಮತ್ತಿತರ ಕಡೆಗೂ ಹೆಚ್ಚಿನ ಪ್ರಮಾಣದಲ್ಲಿ ರಾಗಿ ರವಾನೆಯಾಗುತ್ತಿದೆ.

ಈ ಸಂಗತಿಯನ್ನು ಮನಗಂಡ ರೈತರು ನಿರ್ವಹಣೆ ಸ್ವಲ್ಪ ಕಷ್ಟವಾದರೂ ಆಧುನಿಕ ಯಂತ್ರಗಳನ್ನು ಬಳಸಿ ರಾಗಿಯನ್ನು ಯಥೇಚ್ಛವಾಗಿ ಬೆಳೆಯಲು ಮುಂದಾಗಿದ್ದಾರೆ. ಈ ಬಾರಿ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಂಡು ಪೆಟ್ಟು ತಿಂದ ರೈತರಿಗೆ ಪರ್ಯಾಯ ಬೆಳೆ ಮಾಡಿ ಎಂದು ಕೃಷಿ ಇಲಾಖೆ ಸಲಹೆ ನೀಡಿರುವುದು ಒಂದೆಡೆಯಾದರೆ, ಮಾರುಕಟ್ಟೆಯಲ್ಲಿ ರಾಗಿಗೆ ಇರುವ ಡಿಮ್ಯಾಂಡ್‌ ಗಮನಿಸಿ ರೈತರು ಕೂಡ ರಾಗಿ ಬೆಳೆಗೆ ಮಾರುಹೋಗಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...