ಶೇಕಡಾ 99 ರಷ್ಟು ದಿನಬಳಕೆಯ ವಸ್ತುಗಳು ಅಗ್ಗ

22

ಪ್ರಧಾನಿ ಮೋದಿ ಭಾಷಣದ ಪ್ರಮುಖ 10 ಅಂಶಗಳಿವು ಪ್ರಧಾನಿ ಮೋದಿಯವರು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಹೊಸ ಜಿಎಸ್‌ಟಿ ಪದ್ಧತಿಯ ಬಗ್ಗೆ ಮಾತನಾಡಿದರು. ಶೇಕಡಾ 99 ರಷ್ಟು ದಿನಬಳಕೆಯ ವಸ್ತುಗಳು ಅಗ್ಗವಾಗಲಿದ್ದು, ಸ್ವದೇಶಿ ಉತ್ಪನ್ನಗಳನ್ನು ಖರೀದಿಸಲು ಕರೆ ನೀಡಿದರು. ಮಧ್ಯಮ ವರ್ಗದವರಿಗೆ ಇದು ಡಬಲ್ ಧಮಾಕಾ ಆಗಲಿದ್ದು, ತೆರಿಗೆ ಕಡಿತದಿಂದ ಉಳಿತಾಯವಾಗಲಿದೆ. ಈ ಸುಧಾರಣೆಯು ‘ವಿಕಸಿತ ಭಾರತ’ದ ಕನಸಿಗೆ ವೇಗ ನೀಡಲಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ. ಮಧ್ಯಮ ವರ್ಗ ಹಾಗೂ ವ್ಯಾಪಾರಿಗಳಿಗೆ ಡಬಲ್‌ ಧಮಾಕ ಎಂದ ಪ್ರಧಾನಿ ಮೋದಿ. ಶೇಕಡಾ 99 ರಷ್ಟು ದಿನ ಬಳಕೆಯ ವಸ್ತುಗಳು ಅಗ್ಗ ಎಂದ ಮೋದಿ, ಸ್ವದೇಶೀ ಉತ್ಪನ್ನಗಳನ್ನು ಖರೀದಿಸಿ ಎಂದ ಕರೆಕೊಟ್ಟಿದ್ದಾರೆ. ನವರಾತ್ರಿಗೆ ಮೋದಿ ಜಿಎಸ್‌ಟಿ ಬಂಪರ್: ಇನ್ಮುಂದೆ ದಿನಬಳಕೆ ವಸ್ತುಗಳು ಅಗ್ಗ, ಮಧ್ಯಮ ವರ್ಗಕ್ಕೆ ಡಬಲ್ ಧಮಾಕಾ! ಸ್ವದೇಶಿ ಚಳವಳಿಗೆ ಕರೆ! ಬೆಂಗಳೂರು: ಸೆಪ್ಟೆಂಬರ್‌ 22 ರಿಂದ ಹೊಸ ಜಿಎಸ್‌ಟಿ ಪದ್ಧತಿ ಜಾರಿಗೆ ಬರುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಮಧ್ಯಮ ವರ್ಗ ಹಾಗೂ ವ್ಯಾಪಾರಿಗಳಿಗೆ ಡಬಲ್‌ ಧಮಾಕ, ಶೇಕಡಾ 99 ರಷ್ಟು ದಿನ ಬಳಕೆಯ ವಸ್ತುಗಳು ಅಗ್ಗ ಎಂದು ಮೋದಿ ಹೇಳಿದರು. ಜತೆಗೆ ಸ್ವದೇಶೀ ಉತ್ಪನ್ನಗಳನ್ನು ಖರೀದಿಸಿ ಎಂದು ದೇಶದ ಜನತೆಗೆ ಕರೆಕೊಟ್ಟರು.

ಪ್ರಧಾನಿ ಮೋದಿ ಭಾಷಣದ ಪ್ರಮುಖ 10 ಅಂಶಗಳು ಸೋಮವಾರದಿಂದ ಜಿಎಸ್‌ಟಿ ಹೊಸ ತೆರಿಗೆ ಪದ್ಧತಿ ಜಾರಿಯಾಗುತ್ತಿದೆ. ಇದು ಕೇವಲ ತೆರಿಗೆ ಸುಧಾರಣೆ ಅಲ್ಲ ಜಿಎಸ್‌ಟಿ ಬಚಾತ್ (ಉಳಿಕೆ) ಉತ್ಸವ. ತೆರಿಗೆ ಕಡಿತ, ಜೇಬಿಗೆ ಉಳಿತಾಯವಾಗಲಿದೆ. ದೇಶದ ಪ್ರತಿ ಕುಟುಂಬದ ಸಂತೋಷವೇ ನನ್ನ ಗುರಿ. ಶಕ್ತಿ ದೇವತೆಯ ಆರಾಧನೆಯ ದಿನದಂದೇ ದೇಶದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಆತ್ಮನಿರ್ಭರ ಭಾರತದ ಕನಸಿಗೆ ಮತ್ತೊಂದು ಹೆಜ್ಜೆಯಾಗಲಿದೆ. ಬಡವರಿಂದ ಹಿಡಿದು ಉದ್ಯಮಿಗಳವರೆಗೆ, ಸಮಾಜದ ಪ್ರತಿಯೊಂದು ಸ್ತರದ ಜನರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವುದೇ ಹೊಸ ಜಿಎಸ್‌ಟಿಯ ಮೂಲ ಉದ್ದೇಶ. ಹಬ್ಬದ ಋತುವಿನಲ್ಲಿ ಎಲ್ಲರ ಬಾಯಿ ಸಿಹಿಯಾಗಲಿ. ಜಿಎಸ್‌ಟಿ ಸುಧಾಕರಣೆಯು 2047ರ ‘ವಿಕಸಿತ ಭಾರತ’ ಕನಸಿಗೆ ಜಿಎಸ್‌ಟಿ ವೇಗ: ಅಭಿವೃದ್ಧಿಯ ಪಥಕ್ಕೆ ಹೊಸ ಟರ್ಬೋ ಚಾರ್ಜ್ ಆಗಲಿದೆ. ಕೇವಲ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್‌ಗಳಿಗೆ ತರಲಾಗಿದೆ. ಹಿಂದೆ 12% ತೆರಿಗೆಯಲ್ಲಿದ್ದ ಶೇ. 99 ರಷ್ಟು ವಸ್ತುಗಳ ಮೇಲೆ ಈಗ ಕೇವಲ 5% ತೆರಿಗೆ ವಿಧಿಸಲಾಗಿದೆ. ಹೊಸ ಸುಧಾರಣೆಯ ಅಡಿಯಲ್ಲಿ, ಜನಸಾಮಾನ್ಯರು ಪ್ರತಿದಿನ ಬಳಸುವ ಶೇಕಡಾ 99 ರಷ್ಟು ವಸ್ತುಗಳು ಇನ್ನು ಮುಂದೆ ಅಗ್ಗವಾಗಲಿವೆ.

ಆಹಾರ ಪದಾರ್ಥ, ಔಷಧಿ, ಸಾಬೂನಿನಂತಹ ಅಗತ್ಯ ವಸ್ತುಗಳು ಬಹುತೇಕ ತೆರಿಗೆ ಮುಕ್ತವಾಗಲಿದ್ದು, ಇದು ನೇರವಾಗಿ ಜನರ ಮಾಸಿಕ ಬಜೆಟ್ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. 12 ಲಕ್ಷ ರೂ.ವರೆಗೂ ಆದಾಯ ತೆರಿಗೆ ವಿನಾಯಿತಿ ಜೊತೆಗೆ ಈಗ ಜಿಎಸ್‌ಟಿ ಕಡಿತದ ಬಂಪರ್. ಇದು ದೇಶ ನವ-ಮಧ್ಯಮ ವರ್ಗಕ್ಕೆ ಡಬಲ್ ಧಮಾಕಾ ಆಗಲಿದೆ. ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮತ್ತು GST ಸುಧಾರಣೆಗಳಿಂದ ಜನರಿಗೆ 2.5 ಲಕ್ಷ ಕೋಟಿ ರೂ. ಉಳಿತಾಯವಾಗುತ್ತದೆ ತಿಳಿದೋ ತಿಳಿಯದೆಯೋ ದಿನ ನಿತ್ಯ ಜೀವನದಲ್ಲಿ ವಿದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಜನರು ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು. ರಾಜ್ಯ ಸರ್ಕಾರಗಳು ಸ್ವಾವಲಂಬಿ ಭಾರತ ಅಭಿಯಾನದ ಮೇಲೆ ಗಮನ ಹರಿಸಬೇಕು ಎಂದು ಮೋದಿ ಮನವಿ ಮಾಡಿದರು. ಕಳೆದ 11 ವರ್ಷಗಳಲ್ಲಿ, ದೇಶದಲ್ಲಿ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ನವ ಮಧ್ಯಮ ವರ್ಗ ಎನಿಸಿಕೊಂಡಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...