ಕಾಪು ಪೇಟೆಯಲ್ಲಿರುವ ಕಾಪು ಉಡುಪಿ ಬಸ್ ನಿಲ್ದಾಣದ ಬಳಿ ಸಂಜೆ 4:03 ಗಂಟೆಗೆ ಓರ್ವ ಬಸ್ಸು ಚಾಲಕನು ತನ್ನ ಬಸ್ಸನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಅದರ ನಿರ್ವಾಹಕ ಹಾಗೂ ಟೈಮ್ ಕೀಪರ್ ನಡುವೆ ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಬೈದಾಡಿಕೊಂಡು ಜಗಳವಾಡುತ್ತಾ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ನಡೆಸಿದ ಘಟನೆ ನಡೆದಿದೆ 
ಸ್ಥಳಕ್ಕೆ ಧಾವಿಸಿದ ಕಾಪು ಪೊಲೀಸರಿಗೆ ದೊರೆತ ಮಾಹಿತಿಯಂತೆ ಬಸ್ಸು ಉಡುಪಿ ಕಡೆಗೆ ಹೋಗಿದ್ದು ಅದರ ಚಾಲಕ ಹಾಗೂ ನಿರ್ವಾಹಕರ ಹೆಸರು ವಿಳಾಸ ತಿಳಿಯದಿದ್ದು ಟೈಮ್ ಕೀಪರ್ ಆದ ಚೇತನ್ ರವರು ಮನೆ ಕಡೆ ಹೋಗಿರುವುದಾಗಿ ತಿಳಿದುಬಂದಿದ್ದು,
ಗಲಾಟೆ ಮಾಡಿದವರ ವಿಡಿಯೋ ರೆಕಾರ್ಡ ಮಾಡಿದ ಬಗ್ಗೆ ತಿಳಿದುಬಂದಿದ್ದು ವಿಡಿಯೋವನ್ನು ನೋಡಿ ಪರಿಶೀಲಿಸಿ ವಿಚಾರಿಸಲಾಗಿ ದಿನಾಂಕ: 17.09.2025 ರಂದು ಸಂಜೆ ಗಲಾಟೆ ಮಾಡಿದ KA 20 AB 3199 ನೇ ಬಸ್ಸಿನ ಚಾಲಕನಾದ ನಿಜಾಮುದ್ದೀನ್ ಹಾಗೂ ಬಸ್ಸಿನ ನಿರ್ವಾಹಕ ಶೇಖ್ ಅಹಮ್ಮದ್ ಹಾಗೂ ಟೈಮ್ ಕೀಪರ್ ಆದ ಚೇತನ್ ಎಂಬುದಾಗಿ ತಿಳಿದುಬಂದಿದ್ದು. 
KA20 AB3199 ನೇ ಬಸ್ಸನ್ನು ಹಾಗೂ ಗಲಾಟೆ ಮಾಡಿದ ನಿಜಾಮುದ್ದೀನ್, ಶೇಖ್ ಅಹಮ್ಮದ್ ಹಾಗೂ ಚೇತನ್ ರವರನ್ನು ದಿನಾಂಕ: 18.09.2025 ರಂದು ಬೆಳಿಗ್ಗೆ ವಶಕ್ಕೆ ಪಡೆದು ಸದ್ರಿಯವರು ಸಮಾನ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡುವಂತೆ ವರ್ತಿಸಿದವರ ವಿರುದ್ದ ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment