ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಸೆಪ್ಟೆಂಬರ್ 16 ರಂದು ವಿಶೇಷ ಸಂಪುಟ ಸಭೆ ನಿಗದಿ ಮಾಡಿದೆ. ನ್ಯಾಯಾಲಯದ ಮೊರೆ ಹೋಗಿರುವ ರೈತರಿಗೆ ಸಮ್ಮತ ಪರಿಹಾರ ಸೂತ್ರದ ಮೂಲಕ ಪರಿಹಾರ ನೀಡಲು ಸರಕಾರ ಯೋಚಿಸಿದೆ. ಮೇಲ್ದಂಡೆ ಯೋಜನೆಯು ಪೂರ್ಣಗೊಂಡರೆ 8 ಜಿಲ್ಲೆಗಳ 15 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.

ಯುಕೆಪಿ ಮೂರನೇ ಹಂತದ ಹಾದಿ ಸುಗಮಗೊಳಿಸಲು ಸರಕಾರ ಸೆಪ್ಟೆಂಬರ್ 16 ರಂದು ವಿಶೇಷ ಸಂಪುಟ ಸಭೆ ನಡೆಸಲಿದೆ ಭೂಸ್ವಾಧೀನ ಸಮಸ್ಯೆ ಎದುರಿಸುತ್ತಿರುವ ರೈತರು ನ್ಯಾಯಾಲಯಗಳಲ್ಲಿ 11 ಸಾವಿರದಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ ಯುಕೆಪಿ ಯೋಜನೆ ಪೂರ್ಣಗೊಳ್ಳುವ ಮೂಲಕ 8 ಜಿಲ್ಲೆಗಳಲ್ಲಿ 15 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಯು ಲಭ್ಯ ಕೃಷ್ಣಾ ಮೇಲ್ದಂಡೆ ಯೋಜನೆ.

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಹಾದಿ ಸುಗಮಗೊಳಿಸಲು ಸರಕಾರ ಸೆ.16 ರಂದು ವಿಶೇಷ ಸಂಪುಟ ಸಭೆ ನಡೆಸಲಿದೆ, ಸೂಕ್ತ ಪರಿಹಾರ ದೊರೆತೀತೆ ಎಂದು ಸಂತ್ರಸ್ತರು ಆಶಾಭಾವದಿಂದ ಎದುರು ನೋಡುತ್ತಿದ್ದಾರೆ. ಯುಕೆಪಿ ಮೂರನೇ ಹಂತದಲ್ಲಿ ಬೃಹತ್ ಹಣಕಾಸು ಹೊಂದಿಸುವ ಸಂಕಷ್ಟದಲ್ಲಿರುವ ಸರಕಾರ ಪರಿಹಾರ ಸೂತ್ರಕ್ಕೆ ಮುಂದಾಗಿದೆ. ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಒಪ್ಪಿತ ಪರಿಹಾರ ಧನ ಘೋಷಿಸುವುದು ಉದ್ದೇಶ.”

Leave a comment