
ಪ್ರತಿಮಾ ಹಾಗೂ ಅಳಿಯ ದೀರಜ್ ರವರು ಕ್ಯೂನಲ್ಲಿ ನಿಂತುಕೊಂಡ ಸಮಯ ಜಯಂತಿಯವರು ಶ್ರೀ ವೀರಭದ್ರ ದೇವರಿಗೆ ಕೈ ಮುಗಿದು ಬರುವುದಾಗಿ ಹೇಳಿ ಅಲ್ಲಿಗೆ ಹೋದ ಸಮಯ ಒಮ್ಮೇಲೆ ಮಳೆ ಬಂದಿದ್ದು
ಈ ಸಮಯ ದೇವಸ್ಥಾನದ ಹೊರಾಂಗಣದಲ್ಲಿ ನೆರೆದ ಜನರು ಒಮ್ಮೇಲೆ ವೀರಭದ್ರ ದೇವರ ಗುಡಿಯ ಕಡೆಗೆ ನುಗ್ಗಿ ಜಯಂತಿಯವರ ಮೈ ಮೇಲೆ ಬಿದ್ದಿದ್ದು, ಜನರು ಹೋದ ಬಳಿಕ ಮಗಳಿದ್ದ ಕ್ಯೂ ಸ್ಥಳಕ್ಕೆ ಹೋಗಿ ನೋಡಲಾಗಿ ಜಯಂತಿಯವರ ಕುತ್ತಿಗೆಯಲ್ಲಿದ್ದ 5 ಪವನ್ ಇರುವ ಚಿನ್ನದ ಸರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ತಿಳಿದಿರುತ್ತದೆ.
ಮಧ್ಯಾಹ್ನ 12:30 ಗಂಟೆಯಿಂದ 01:00 ಗಂಟೆಯ ಮಧ್ಯೆ ಅವಧಿಯಲ್ಲಿ ಶ್ರೀ ವೀರಭದ್ರ ದೇವರ ಗುಡಿಯಲ್ಲಿ ಇರುವ ಸಮಯದಲ್ಲಿ ಯಾರೋ ಕಳ್ಳರು ಜಯಂತಿ ಯವರ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Leave a comment