thekarnatakatoday.com
Blog

ರೊಟರಾಕ್ಟ್ ಕ್ಲಬ್ ಉಡುಪಿಯಿಂದ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಸೇವಾಕಾರ್ಯ

ರೊಟರಾಕ್ಟ್ ಕ್ಲಬ್ ಉಡುಪಿಯ ವಾರ್ಷಿಕ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿಯ ಅಧಿಕೃತ ಭೇಟಿಯ ಪ್ರಯುಕ್ತ, ಕುಕ್ಕಿಕ್ಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.

ರೋಟರಿ ಕ್ಲಬ್ ಉಡುಪಿ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಬಾಲನಿಕೇತನದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪುಸ್ತಕಗಳು, ಛತ್ರಿಗಳು ಹಾಗೂ ಇತರ ಕಚೇರೀ ವಸ್ತುಗಳನ್ನು ವಿತರಿಸಲಾಯಿತು. ಜೊತೆಗೆ, ಹತ್ತನೇ ತರಗತಿ ವ್ಯಾಸಂಗ ಮುಗಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಐದು ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿ ರೋ. ಚೇತನ್ ಕುಮಾರ್, ಜಿಲ್ಲಾ ರೊಟರಾಕ್ಟ್ ಸಭಾಪತಿ ರೋ. ನವೀನ್ ಅಮೀನ್, ರೋಟರಿ ಉಡುಪಿ ಅಧ್ಯಕ್ಷ ರೋ. ಗುರುರಾಜ್ ಭಟ್, ರೋಟರೀ ಉಡುಪಿಯ ರೊಟರಾಕ್ಟ್ ಸಭಾಪತಿ ರೋ. ಬಿ.ಕೆ. ನಾರಾಯಣ್ ಹಾಗೂ ಮಾಜಿ ಜಿಲ್ಲಾ ಪ್ರತಿನಿಧಿ ರೋ. ಮಹಾಲಸ ಕಿಣಿ ಉಪಸ್ಥಿತರಿದ್ದರು.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ರೊಟರಾಕ್ಟ್ ಅಸೆಂಬ್ಲಿಯಲ್ಲಿ ಭಾಗವಹಿಸಿ, ನೂತನ ರೊಟರಾಕ್ಟ್ ಸದಸ್ಯರಿಗೆ ದಿಶಾನಿರ್ದೇಶನ ನೀಡಿದ ರೋ. ಮಹಾಲಸ ಕಿಣಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ರೀತಿ, ಪ್ರಸ್ತುತ ಜಿಲ್ಲಾ ಪ್ರತಿನಿಧಿಯಾಗಿ ಶ್ರೇಷ್ಠ ಕಾರ್ಯನಿರ್ವಹಣೆ ಮಾಡುತ್ತಿರುವ ರೋ. ಚೇತನ್ ಕುಮಾರ್ ಅವರಿಗೂ ಕ್ಲಬ್‌ನ ವತಿಯಿಂದ ಸನ್ಮಾನ ನೀಡಲಾಯಿತು.

ಸಭೆಯಲ್ಲಿ ಕ್ಲಬ್‌ನ ಈ ವರ್ಷದ ಸೇವಾ ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ರೋ. ಅನಂತ ಕೃಷ್ಣ ಓದಿ ಜುಲೈ 1ರಿಂದ ಪ್ರಸ್ತುತವರೆಗೆ ಸುಮಾರು 20 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದರಿಂದ, ಸಮುದಾಯದಲ್ಲಿ ಕ್ಲಬ್ ಉತ್ತಮ ಹೆಸರನ್ನು ಗಳಿಸಿದೆ ಎಂಬ ಅಭಿಪ್ರಾಯವನ್ನು ಗಣ್ಯರು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊಟರಾಕ್ಟ್ ಕ್ಲಬ್ ಉಡುಪಿಯ ಅಧ್ಯಕ್ಷ ರೋ. ಅಂಶ್ ಕೋಟ್ಯಾನ್ ವಹಿಸಿದ್ದರು. ಅವರು ಉಪಸ್ಥಿತರಿದ ಎಲ್ಲರಿಗೂ ಸ್ವಾಗತ ಮಾಡಿದರು. ಕಾರ್ಯದರ್ಶಿ ರೋ. ಅನಂತ ಕೃಷ್ಣ ವಂದನಾಪೂರ್ವಕವಾಗಿ ಸಮಾರೋಪಿಸಿದರು.

Related posts

ಏಕರೂಪ ನಾಗರಿಕತೆ ಜಾರಿಗೆ ತರಲು ರಾಜ್ಯ ಸರಕಾರಗಳಿಗೆ ಹೈಕೋರ್ಟ್ ಒತ್ತಾಯ

The Karnataka Today

ಕ್ರೀಡಾಪಟು ಯುವತಿಯ ಮೇಲೆ 60 ಮಂದಿಗೂ ಹೆಚ್ಚು ಜನರಿಂದ ಲೈಂಗಿಕ ದೌರ್ಜನ್ಯ ದೂರು 15 ಜನರ ಬಂಧನ

The Karnataka Today

ಷರಿಯಾ ಕಾನೂನಿನ ವಿರುದ್ಧ  ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಮಹಿಳೆ

The Karnataka Today

Leave a Comment