thekarnatakatoday.com
Editor's Picks

ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ದೂರುದಾರರಿಗೆ ಮಾಹಿತಿ ನೀಡದಿದ್ದ ಕಾರಣಕ್ಕಾಗಿ ಉಡುಪಿ ಹಸಿಮೀನು ಮಾರಾಟಗಾರರ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ದಂಡ

ಉಡುಪಿ ಹಸಿ ಮೀನು ಮಾರಾಟಗಾರ ಸಹಕಾರಿ ಸಂಘದಿಂದ ತಮಗೆ ಬೇಕಾದ ದಾಖಲೆಗಳನ್ನು ಕೇಳಿದ್ದ ದೂರುದಾರರಾದ ಶಿವಕುಮಾರ್ ಅವರ ಪರವಾಗಿ ಖ್ಯಾತ ವಕೀಲರಾದ ಬಿ ಪ್ರಕಾಶ್ ಭಟ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದೂರು ದಾಖಲಿಸಿ ವಾದ ಮಂಡಿಸಿದ್ದರು

ಈ ಪ್ರಕರಣದಲ್ಲಿ ಉಡುಪಿ ಹಸಿ ಮೀನು ಮಾರಾಟಗಾರರ ಸಹಕಾರಿ ಸಂಘದ ಸೇವಾ ನ್ಯೂನ್ಯತೆಗಳನ್ನು ಗಮನಿಸಿ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ

ಪ್ರಕರಣದಲ್ಲಿ ಹಸಿಮೀನು ಮಾರಾಟಗಾರರ ಸಂಘ ಶಾಖಾ ಪ್ರಬಂಧಕರು ಸಂಪೂರ್ಣ ಕಾಗದ ಪತ್ರಗಳ ವಿನಿಮಯಗಳನ್ನು ಮರೆಮಾಡಿ ಬೆಂಗಳೂರಿನಲ್ಲಿ ಕ್ರೈಮ್ ಅರ್ಜಿಯನ್ನು ಸಲ್ಲಿಸಿದ್ದರು

. ದೂರುದಾರರು ಕೇಳಿರುವ ದಾಖಲೆಗಳನ್ನು ಎದುರುದಾರರು ಹಾಜರುಪಡಿಸಿರುವುದಿಲ್ಲ ಸಾಲದ ಒಪ್ಪಂದವನ್ನು ಹೊರತುಪಡಿಸಿ ದೂರುದಾರರು ತಿಳಿಸಿರುವ ಒಂದೇ ಒಂದು ಕಾಗದವನ್ನು ಎದುರುದಾರರು ನೀಡಿರುವುದಿಲ್ಲ.

ಸದರಿ ದೂರು ಸೇವಾ ನ್ಯೂನ್ಯತೆಗೆ ಹೊರತು ಪ್ರಧಾನ ಸಾಲಗಾರನಿಂದ ಬಾಕಿ ಇರುವ ಸಾಲದ ಮೊತ್ತಕ್ಕೆ ಸಂಬಂಧಿಸಿದಂತೆ ಎದುರುದಾರರ ಯಾವುದೇ ಕ್ರೈಮ್‌ಗೆ ಸಂಬಂಧಿಸಿದಂತೆ ಅಲ್ಲ ಎದುರುದಾರರು ದಾಖಲೆಗಳನ್ನು ಪೂರೈಸದೇ ಸೇವಾ ನ್ಯೂನ್ಯತೆ ಮಾಡಿರುತ್ತಾರೆ.

ದಾಖಲೆಗಳನ್ನು ಪೂರೈಸಲು ಎದುರುದಾರರು ಜವಾಬ್ದಾರರಾಗಿರುತ್ತಾರೆ. ಎದುರುದಾರರಿಂದ ಸೇವಾ ನ್ಯೂನ್ಯತೆ ಆಗಿರುವುದಾಗಿ ತಿಳಿಸಿ ದಾಖಲೆಗಳನ್ನು ಮತ್ತು ಪರಿಹಾರ ಕೋರಿ ಆಯೋಗದ ಮುಂದೆ ದೂರು

4. ತದನಂತರ ಆಯೋಗವು ದೂರುದಾರರ ದೂರನ್ನು ಪರಿಗಣಿಸಿ ಎದುರುದಾರರಿಗೆ ನೋಟಿಸ್ ನೀಡಿರುತ್ತದೆ. ಸದರಿ ನೋಟಿಸ್ ಜಾರಿಯಾಗಿದ್ದು ಎದುರುದಾರರು ಆಯೋಗದ ಮುಂದೆ ಹಾಜರಾಗಿರುತ್ತಾರೆ. ಆದರೆ ದೂರುದಾರರ ಆರೋಪಗಳನ್ನು ಅಲ್ಲಗಳೆಯಲು ತಕರಾರನ್ನು ಸಲ್ಲಿಸಿರುವುದಿಲ್ಲ.

ದೂರುದಾರರು ತಮ್ಮ ದೂರನ್ನು ಸಾಬೀತು ಪಡಿಸಲು ತಮ್ಮ ವಿಚಾರಣಾ ವೇಳೆಯಲ್ಲಿ ಪೂರಕ ಪ್ರಮಾಣಪತ್ರವನ್ನು ಸಲ್ಲಿಸಿರುತ್ತಾರೆ.

ಅದನ್ನು ಸಿ.ಡಬ್ಲ್ಯು-01 ಎಂದು ಗುರುತಿಸಲ್ಪಟ್ಟಿರುತ್ತದೆ. ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಕ್ರಮವಾಗಿ ನಿತಾನೆ 5-01 ರಿಂದ ಸಿ-97 ಎಂದು ಗುರುತಿಸಲ್ಪಟ್ಟಿರುತ್ತದೆ,

ಅದರಂತೆ, ಎದುರುದಾರನು ಯಾವುದೇ ಪ್ರಮಾಣಪತ್ರವನ್ನು ಮತ್ತು ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಉಭಯ ಪಕ್ಷಗಳ ಪರ ವಕೀಲರ ವಾದವನ್ನು ಕೇಳಲಾಯಿತು. ವಾರವನ್ನು ಆಲಿಸಿ ದೂರದಾರರ ಪರವಾಗಿ ಆದೇಶ ನೀಡಿದೆ

ದೂರುದಾರರು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಕಲಂ 35ರಲ್ಲಿ ಸಲ್ಲಿಸಿರುವ ದೂರನ್ನು ಎದುರುದಾರರ ವಿರುದ್ಧ ಭಾಗಶ: ಪುರಸ್ಕರಿಸಲಾಗಿದೆ.

* ಎದುರುದಾರರು ದೂರುದಾರರಿಗೆ ಆದ ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ.3,000/- (ರೂಪಾಯಿ ಮೂರು ಸಾವಿರಗಳನ್ನು ಮತ್ತು ವ್ಯಾಜ್ಯದ ಖರ್ಚು ವೆಚ್ಚ ಸೇರಿದಂತೆ ರೂ.2,000/- (ರೂಪಾಯಿ ಎರಡು ಸಾವಿರ )ಗಳನ್ನು ನೀಡತಕ್ಕದೆಂದು ಆದೇಶಿಸಲಾಗಿದೆ.

* ಎದುರುದಾರರಿಗೆ ಈ ಆದೇಶದ ಪ್ರತಿತಲುಪಿದ ದಿನಾಂಕದಿಂದ 30 ಆದೇಶವನ್ನು ವಾಲಿಸತಕ್ಕದೆಂದು ಆದೇಶಿಸಲಾಗಿದೆ. ದೂರುದಾರರಾದ ಶಿವಕುಮಾರ್ ಪರವಾಗಿ ಖ್ಯಾತ ನ್ಯಾಯವಾದಿ ಬಿಪಿ ಭಟ್ ವಾದ ಮಂಡಿಸಿದರು

Related posts

ಕೃಷಿ ಸೋಲಾರ್ ಪಂಪ್‌ಸೆಟ್‌ ಸಬ್ಸಿಡಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ-ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80 ರಷ್ಟು ಸಹಾಯಧನ.

The Karnataka Today

ಬಾಂಗ್ಲಾದೇಶ ಹಿಂದೂಗಳ ಮೇಲೆ ದೌರ್ಜನ್ಯ ವಿರೋಧಿಸಿ ಹಿಂದೂಗಳ ಒಗ್ಗಟ್ಟು ಪ್ರದರ್ಶನಕ್ಕೆ ಆರ್ ಎಸ್ ಎಸ್ ನಿರ್ಣಯ

The Karnataka Today

ಮಹಿಳಾ ವಕೀಲರು ಬುರ್ಖಾ ಧರಿಸಿ ನ್ಯಾಯಾಲಯದ ಕಲಾಪಗಳಲ್ಲಿ ವಾದ ಮಂಡಿಸುವಂತಿಲ್ಲ ಎಂದು ಅದೇಶಿಸಿದ ಜಮ್ಮು- ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್

The Karnataka Today

Leave a Comment