“ಅಶ್ವಿನಿ ಗಂಗೊಳ್ಳಿ ಗ್ರಾಮ ಇವರು ಶ್ರೀ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆಯ ಸಂಘದಲ್ಲಿ 12 ವರ್ಷದಿಂದ ಇದ್ದು ಪ್ರಸ್ತುತ ಸಂಘದ ಅಧ್ಯಕ್ಷೆಯಾಗಿದ್ದು
ಅವರು ಸುಮಾರು ಒಂದೂವರೆ ವರ್ಷದ ಹಿಂದೆ 4 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದು ಸಾಲದ ಕಂತುಗಳನ್ನು ಪ್ರತಿ ವಾರದಂತೆ ಪಾವತಿಸುತ್ತಿದ್ದು ಈ ವಾರದಲ್ಲಿ ಹಣದ ಅಡಚಣೆ ಇರುವುದರಿಂದ ಸಾಲದ ಕಂತುಗಳನ್ನು ಕಟ್ಟಿರುವುದಿಲ್ಲ.
ಅಶ್ವಿನಿ ಸಾಲದ ಹಣವನ್ನು ಕಟ್ಟದೇ ಇರುವ ವಿಚಾರವಾಗಿ ಆಪಾದಿತರಾದ ಸಂಘದ ಯೋಜನಾ ಅಧಿಕಾರಿಯಾದ ಸರಸ್ವತಿಯವರು ಸುರೇಖಾ ಹಾಗೂ ಚಂದ್ರರವರೊಂದಿಗೆ ದಿನಾಂಕ 27-03-2025 ರಂದು ಬೆಳಿಗ್ಗೆ 11:00 ಗಂಟೆಗೆ ಅಶ್ವಿನಿ ಯವರ ಮನೆಗೆ ಅಕ್ರಮ ಪ್ರವೇಶ ಮಾಡಿ
ಮೂರು ಜನರು ಸೇರಿಕೊಂಡು ಅಶ್ವಿನಿ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ನೀನು ಸಂಘದ ಹಣವನ್ನು ಕಟ್ಟದೇ ಇದ್ದರೆ ನಿನ್ನನ್ನು ಏನು ಮಾಡಿಬೇಕು ಎಂದು ನಮಗೆ ಗೊತ್ತಿದೆ ಎಂದು ಹೇಳಿ
ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 35/2025 ಕಲಂ: 329(4̧) 352, 351(2) ಜೊತೆ 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.