thekarnatakatoday.com
Karavali Karnataka

ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುಂಪು ಗಲಾಟೆ ಭಯದ ವಾತಾವರಣ ನಿರ್ಮಾಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಾಯಾ ಆರ್, ಇವರು ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದಲ್ಲಿ ಹಿರಿಯ ಶಿರೇಸ್ತದಾರರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ

ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ಆವರಣದ ಮುಂದೆ 10 ರಿಂದ 20 ಜನರು ಗುಂಪು ಸೇರಿಕೊಂಡಿದ್ದು, ಅವರನ್ನು ವಿಚಾರಿಸಿದಾಗ ಅವರುಗಳು ಮಾನ್ಯ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ Ex Case No 297/2023 ರಲ್ಲಿ ಡೆಲವರಿ ವಾರೆಂಟ್ ಕಾರ್ಯಗತಗೊಳಿಸುವ ಸಂಬಂಧ

ಮಾನ್ಯ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರನ್ನು ಭೇಟಿ ಆಗಲು ಮುಂದಾಗಿರುವುದಾಗಿ ತಿಳಿಸಿದ್ದು, ಅದಕ್ಕೆ ಫಿರ್ಯಾದುದಾರರು ನ್ಯಾಯಾಧೀಶರ ಅನುಮತಿಯನ್ನು ಪಡೆಯದೇ ಯಾರು ಭೇಟಿ ಆಗಲು ಸಾಧ್ಯವಿಲ್ಲ

ನ್ಯಾಯಾಲಯದ ಆದೇಶವನ್ನು ಎಲ್ಲರೂ ಸಹಾ ಪಾಲಿಸಬೇಕು ಎಂದು ತಿಳಿಸಿದರೂ ಕೂಡ Ex Case No 297/2023 ರಲ್ಲಿನ ಪ್ರಕರಣಕ್ಕೆ ಸಂಬಂಧಿಸಿದ J.Dr’s ಗಳು ಹಾಗೂ ಇತರರನ್ನು ಒಳಗೊಂಡ ಅಕ್ರಮ ಗುಂಪು ಸೇರಿಕೊಂಡು

ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ಆವರಣದ ಮುಂದೆ ಗಲಾಟೆ-ಸೃಷ್ಟಿಸಿ ಗೊಂದಲ ಉಂಟುಮಾಡಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನಗತ್ಯ ಅಡ್ಡಿಪಡಿಸಿರುವುದಲ್ಲದೇ

ಸ್ಥಳದಲ್ಲಿ ಭಯದ ವಾತವಾರಣ ಸೃಷ್ಟಿಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 0055/2025 u/s 189(2) , 221 ಜೊತೆಗೆ 190 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.

Related posts

ಖ್ಯಾತ ಉದ್ಯಮಿ  ಶ್ರೀಮತಿ ಅಮೃತಾ ಹರೀಶ್ ಭಟ್ ರಿಗೆಒಲಿದ 2025 ನೇ ಸಾಲಿನ ಪ್ರತಿಷ್ಠಿತ ಆರ್ಯಭಟ  ಅಂತರಾಷ್ಟ್ರೀಯ ಪ್ರಶಸ್ತಿ

The Karnataka Today

ನಕ್ಸಲರಿಗೆ ಶರಣಾಗತಿ ಎಂಬ ಪ್ಯಾಕೇಜ್ ನೀಡಿ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತಿರುವುದು ನಾಗರಿಕ ಸಮಾಜನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ:: ಸುನಿಲ್ ಕುಮಾರ್

The Karnataka Today

ಬಿಜೆಪಿ ನಗರ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ 10 ಬಡ ಕುಟುಂಬಗಳಿಗೆ ದಿನ ಬಳಕೆ ಆಹಾರ ಕಿಟ್ ವಿತರಣೆ

The Karnataka Today

Leave a Comment