ಮಾಯಾ ಆರ್, ಇವರು ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದಲ್ಲಿ ಹಿರಿಯ ಶಿರೇಸ್ತದಾರರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ
ಉಡುಪಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ಆವರಣದ ಮುಂದೆ 10 ರಿಂದ 20 ಜನರು ಗುಂಪು ಸೇರಿಕೊಂಡಿದ್ದು, ಅವರನ್ನು ವಿಚಾರಿಸಿದಾಗ ಅವರುಗಳು ಮಾನ್ಯ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ Ex Case No 297/2023 ರಲ್ಲಿ ಡೆಲವರಿ ವಾರೆಂಟ್ ಕಾರ್ಯಗತಗೊಳಿಸುವ ಸಂಬಂಧ
ಮಾನ್ಯ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರನ್ನು ಭೇಟಿ ಆಗಲು ಮುಂದಾಗಿರುವುದಾಗಿ ತಿಳಿಸಿದ್ದು, ಅದಕ್ಕೆ ಫಿರ್ಯಾದುದಾರರು ನ್ಯಾಯಾಧೀಶರ ಅನುಮತಿಯನ್ನು ಪಡೆಯದೇ ಯಾರು ಭೇಟಿ ಆಗಲು ಸಾಧ್ಯವಿಲ್ಲ
ನ್ಯಾಯಾಲಯದ ಆದೇಶವನ್ನು ಎಲ್ಲರೂ ಸಹಾ ಪಾಲಿಸಬೇಕು ಎಂದು ತಿಳಿಸಿದರೂ ಕೂಡ Ex Case No 297/2023 ರಲ್ಲಿನ ಪ್ರಕರಣಕ್ಕೆ ಸಂಬಂಧಿಸಿದ J.Dr’s ಗಳು ಹಾಗೂ ಇತರರನ್ನು ಒಳಗೊಂಡ ಅಕ್ರಮ ಗುಂಪು ಸೇರಿಕೊಂಡು
ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ಆವರಣದ ಮುಂದೆ ಗಲಾಟೆ-ಸೃಷ್ಟಿಸಿ ಗೊಂದಲ ಉಂಟುಮಾಡಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನಗತ್ಯ ಅಡ್ಡಿಪಡಿಸಿರುವುದಲ್ಲದೇ
ಸ್ಥಳದಲ್ಲಿ ಭಯದ ವಾತವಾರಣ ಸೃಷ್ಟಿಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 0055/2025 u/s 189(2) , 221 ಜೊತೆಗೆ 190 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.