ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣದಲ್ಲಿ ತೊಡಗಿಕೊಂಡಿದ್ದ ದರ್ಶನ್ ಎಂಬುವನನ್ನು ಆತನ ಮನೆಗೆ ತೆರಳಿದಾಗ ಆತನ ತಂದೆ ಮಗನನ್ನು ರಕ್ಷಿಸಿ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿ ಹೊರಗೆ ಕಳಿಸಿದ್ದ ಕಾರಣ ಪೊಲೀಸರು ಆರೋಪಿಯ ತಂದೆ ಮೇಲೆ ತಂದೆ ವಿರುದ್ಧ ಪ್ರಕರಣದ ಮಾಡಿದ್ದಾರೆ
ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 33/2025 ಕಲಂ: 309(4) BNS ಪ್ರಕರಣದಲ್ಲಿ ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಸ್ಥಳೀಯ ಕೆಲವು ಸಿ.ಸಿ ಟಿವಿ. ಪೂಟೇಜನ್ನು ಪರಿಶೀಲನೆ ಮಾಡಲಾಗಿದ್ದು
ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿದಾಗ ಬಡಾನಿಡಿಯೂರು ಗ್ರಾಮದ ನಾರಾಯಣ ಬಂಗೇರಾ ರವರ ಮಗ ದರ್ಶನ್ ಕುಮಾರ್ ಎಂಬುವವನು KA-20-EZ- 1502 ಮೋಟಾರು ಸೈಕಲಿನಲ್ಲಿ ಬಂದು ಸುಲಿಗೆ ಮಾಡಿರುವುದಾಗಿ ಖಚಿತ ಮಾಹಿತಿ ತಿಳಿದುಬಂದಿರುತ್ತದೆ
. ನಾರಾಯಣ ರವರಲ್ಲಿ ದರ್ಶನ್ ಬಗ್ಗೆ ವಿಚಾರಿಸಲಾಗಿ 3 ದಿನಗಳಿಂದ ಮನೆಗೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಇಲಾಖಾ ಜೀಪಿನಲ್ಲಿ ಠಾಣಾ ಸಿಬ್ಬಂದಿಯವರೊಂದಿಗೆ ಆರೋಪಿ ದರ್ಶನ್ ಕುಮಾರ್ ಮನೆಯ ಬಳಿ ತೆರಳಿದಾಗ ನಾರಾಯಣ ರವರು ಮನೆಯಿಂದ ಹೊರಗೆ ಬಂದು ಇನ್ನು ದರ್ಶನ್ ಮನೆಗೆ ಬಂದಿರುವುದಿಲ್ಲ ಎಂದು ಮಾಹಿತಿ ನೀಡಿರುತ್ತಾರೆ.
ಕಂಪೌಂಡಿನಿಂದ ಒಳಗೆ ಹೋಗಲು ಅವಕಾಶವನ್ನು ನೀಡಿರುವುದಿಲ್ಲ. ಹಾಗೂ ಮಾತನಾಡುತ್ತಾ ಒಂದು ನಿಮಿಷ ನೀವು ಇಲ್ಲೇ ಇರಿ ಬರುತ್ತೇನೆ ಎಂದು ಹೇಳಿ ಮನೆಯ ಒಳಗೆ ಹೋದ ನಾರಾಯಣ ರವರು ಹಿಂಬದಿಯ ಬಾಗಿಲಿನಿಂದ ದರ್ಶನ್ ನನ್ನು ಕರೆದುಕೊಂಡು ಬಂದು ಅವನ ದ್ವಿಚಕ್ರ ವಾಹನದಲ್ಲಿ ಅವನನ್ನು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿರುತ್ತಾರೆ.
ಇದನ್ನು ನೋಡಿ ಕಂಪೌಂಡ್ ಬಳಿ ಹೋಗುವಷ್ಟರಲ್ಲಿ ಆತನು ದ್ವಿಚಕ್ರ ವಾಹನದಲ್ಲಿ ಅಲ್ಲಿಂದ ಪರಾರಿಯಾಗಿರುತ್ತಾನೆ. ಪ್ರಕರಣದ ಆರೋಪಿತ ದರ್ಶನ್ ಕುಮಾರ್ ಈತನು ಆರೋಪಿ ಎಂದು ತಿಳಿದಿದ್ದರೂ
ಅವನನ್ನು ಮರೆ ಮಾಡುವ ಉದ್ದೇಶದಿಂದ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ, ಆಶ್ರಯ ನೀಡಿ ಆತನನ್ನು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ನಾರಾಯಣ ರವರು ಸಹಾಯ ಮಾಡಿ ಅಪರಾಧವೆಸಗಿರುವುದಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2025 ಕಲಂ:249(b),212 BNS ರಂತೆ ಪ್ರಕರಣ ದಾಖಲಾಗಿರುತ್ತದೆ