thekarnatakatoday.com
Karavali Karnataka

ಸಾಲ ವಸೂಲಾತಿ ಸೊಸೈಟಿಯಲ್ಲಿ ಮಹಿಳೆಯನ್ನು ರಾತ್ರಿವರೆಗೆ ಕುಳ್ಳಿರಿಸಿ ಜಾತಿನಿಂದನೆ,ಜೀವ ಬೆದರಿಕೆ ಒಡ್ಡಿದ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಉಡುಪಿ ಕಲ್ಯಾಣಪುರ  ಸಂತೆಕಟ್ಟೆ  ಮೇರಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ  ನಿಕಿತ ಎನ್ನುವ ಮಹಿಳೆ ಸಾಲವನ್ನು ಪಡೆದುಕೊಂಡಿದ್ದು, ಸಾಲದ ಕಂತನ್ನು ಸ್ವಲ್ಪ ಸ್ವಲ್ಪ ಕಟ್ಟುತ್ತಿದ್ದು,

ಆದರೂ ಸೊಸೈಟಿಯ ಇಬ್ಬರೂ ಸಿಬ್ಬಂದಿಗಳು ಪದೇ-ಪದೇಇವರ ಮನೆಗೆ ಹಾಗೂ ಅವರ ಗಂಡ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸಾಲದ ಹಣವನ್ನು ಕಟ್ಟುವಂತೆ ಕಿರುಕುಳ ನೀಡುತ್ತಿದ್ದು,

ಇದೇ ಕಾರಣದಿಂದ ನಿಕಿತಅವರ ಗಂಡನನ್ನು ಕೆಲಸದಿಂದ ತೆಗೆದುಹಾಕಿದ್ದು, ದಿನಾಂಕ:13/03/2025 ರಂದು ಸಂಜೆ 5 ಗಂಟೆಗೆ ದ್ವಿಚಕ್ರ ವಾಹನದಲ್ಲಿ ಬಂದ ಸೊಸೈಟಿಯ ಇಬ್ಬರು ಸಿಬ್ಬಂದಿಗಳು  ದೂರುದಾರರ ಮನೆಯನ್ನು ಅಕ್ರಮವಾಗಿ ಪ್ರವೇಶಮಾಡಿ,

ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಾಳೆ ಸೊಸೈಟಿಗೆ 10,000/- ರೂಪಾಯಿ ಹಣವನ್ನು ಕಟ್ಟಬೇಕು, ಇಲ್ಲವಾದಲ್ಲಿ ಹೇಗೆ ವಸೂಲಿ ಮಾಡಬೇಕು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದು,

ಮರುದಿನ ದಿನಾಂಕ: 14/03/2025 ರಂದು ನಿಕಿತಅವರು ಸೊಸೈಟಿಗೆ 3000/-ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಕಟ್ಟಿದ್ದು, ಸೊಸೈಟಿಯವರು ಹಣ ಕಟ್ಟಿರುವುದಕ್ಕೆ  ಯಾವುದೇ ರಶೀದಿಯನ್ನು ನೀಡದೇ

ನಿಕಿತರನ್ನು ಸಂಜೆ 5:30 ಗಂಟೆಯಿಂದ 7 ಗಂಟೆಯವರೆಗೆ ಅಲ್ಲಿಯೇ ಕೂರಿಸಿ ಸೊಸೈಟಿಯ ಮ್ಯಾನೇಜರ್‌ ಹಾಗೂ ಅಲ್ಲಿಯ ಸಿಬ್ಬಂದಿಗಳಾದ 2 ಮಹಿಳೆಯರು ಮತ್ತು 2 ಪುರುಷರು ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ಬೈದಿದ್ದು,

ಮ್ಯಾನೇಜರ್‌ ದೂರುದಾರರಿಗೆ ಜಾತಿ ನಿಂದನೆ ಮಾಡಿ  ನೀನು 10,000/- ರೂಪಾಯಿ ಹಣವನ್ನು ಕಟ್ಟಲೇ ಬೇಕು ಎಂದು ಹೇಳಿ ಬೆದರಿಕೆ ಹಾಕಿರುತ್ತಾರೆ . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Related posts

ನಕ್ಸಲರಿಗೆ ಶರಣಾಗತಿ ಎಂಬ ಪ್ಯಾಕೇಜ್ ನೀಡಿ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತಿರುವುದು ನಾಗರಿಕ ಸಮಾಜನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ:: ಸುನಿಲ್ ಕುಮಾರ್

The Karnataka Today

ಮಂಗಳೂರು ಕೇರಳದಆಶ್ರಫ್ ಹತ್ಯೆ ಪ್ರಕರಣ  ಆರೋಪಿಗಳನ್ನು ಸಾಕ್ಷಿಗಳಾಗಿ ಪರಿಗಣಿಸಿದ್ದಕ್ಕಾಗಿ ಇನ್ಸ್‌ಪೆಕ್ಟರ್  ಸೇರಿದಂತೆ ಇಬ್ಬರು ಕಾನ್ಸ್ಟೇಬಲ್ ಗಳ ಅಮಾನತು

The Karnataka Today

ಎಂಕುಲು ಫ್ರೆಂಡ್ಸ್ ಕಲಾವಿದರು ಇವರ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ ಎಂಕುಲ್ ಫ್ರೆಂಡ್ಸ್ ಟ್ರೋಫಿ- 2025

The Karnataka Today

Leave a Comment