ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು

62

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ  ಶ್ರೀಮತಿ ಸಾಕು  ಇವರ ಗಂಡ ರಘು ರವರು ಧಮಸ್ಥಳ ಸಂಘದಲ್ಲಿ ಸದಸ್ಯರಾಗಿದ್ದು ಅವರ ಜೊತೆಯಲ್ಲಿ ಶೇಖರ, ಸಂತೋಷ,ರಮೇಶ, ಚಂದ್ರ ರವರು ಇದ್ದು ಸಂಘದ ಹಣವನ್ನು ವಾರಕ್ಕೊಮ್ಮೆ ಕಟ್ಟುತ್ತಿದ್ದರು

ಅದರಂತೆ 04/02/2025 ರಂದು ರಘು  ಸಂಘದ ಹಣವನ್ನು ಒಟ್ಟು ಮಾಡಿದ್ದು ಅದೇ ದಿನ ಸಂಜೆ ಸಂತೋಷ ಹಾಗೂ ಶೇಖರ ರವರು ರಘು ಅವರ ಮನೆಗೆ ಬಂದು ಸಂಘದ ಹಣವನ್ನು ಕೊಟ್ಟು ಹೋಗಿದ್ದು

ಅದೇ ದಿನ ಸಂತೋಷನು ಅವರ ಬಳಿ ಇದ್ದ ರೂ 5000/- ಹಣವನ್ನು ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿ ವಾಪಾಸ್ಸು ಮನೆಗೆ ಬಂದು  ಹುಡುಕಾಡಿದ್ದಲ್ಲಿ ಹಣವು ಸಿಕ್ಕಿರುವುದಿಲ್ಲ

ಮರುದಿನ  ಹಣದ ತೊಟ್ಟೆಯು ಸಿಕ್ಕಿದ್ದು ಅದನ್ನು ವಾಪಾಸ್ಸು ಸಂತೋಷನಿಗೆ ನೀಡಿದ್ದು ದಿನಾಂಕ 11/02/2025 ರಂದು ಸಾಕು ಅವರು ಗಂಡನೊಂದಿಗೆ ತಮ್ಮ ಬೈಕಿನಲ್ಲಿ ಅಮಾಸೆಬೈಲಿನ ತೋಟದಿಂದ ಮನೆಗೆ ಹೊಗುವಾಗ ಸಮಯ ಸುಮಾರು ರಾತ್ರಿ 09:15 ಗಂಟೆಗೆ ಹೆಂಗವಳ್ಳಿ ಪೇಟೆಯಲ್ಲಿ  ರಘು ಅವರು ಅಂಗಡಿಗೆ ಪುಸ್ತಕ ತರಲು ಹೋದಾಗ

ಬೈಕಿನ ಬಳಿ ಸಾಕು ಅವರು ನಿಂತುಕೊಂಡಾಗ ಆ ಸ್ಥಳಕ್ಕೆ ಸಂತೋಷ ರವರು ಬಂದು ಕಳೆದು ಹೋದ ಹಣ ಬಾಕಿ ಇದೆ ಎಂದು ಹೇಳಿ ಗಲಾಟೆ ಮಾಡುತ್ತಿದ್ದು ಆಗ ರಘು ಅವರು ಅಲ್ಲಿಗೆ ಬರುವಾಗ ಸಂತೋಷ ರವರು ರಘು ರವರನ್ನು ಅಡ್ಡಕಟ್ಟಿ ತಡೆದು ನಿಲ್ಲಿಸಿ ಮೊನ್ನೆ ನೀನು 5000/- ರೂಪಾಯಿ ಕೊಟ್ಟು ನೀನು 5000/- ರೂಪಾಯಿ ಇಟ್ಟುಕೊಂಡಿದ್ದಿಯಾ

ಎಂದು ಹೇಳಿ ಕೈಯಿಂದ ಮುಖಕ್ಕೆ, ಕೆನ್ನೆಗೆ ಹೊಡೆದು ದೂಡಿದ್ದು ಆಗ ನೆಲಕ್ಕೆ ಬಿದ್ದ ರಘು ರವರಿಗೆ ಕಾಲಿನಿಂದ ತುಳಿದಿದ್ದು ಈ ಹಿಂದೆ ಕೂಡ ಸುಮಾರು4 ತಿಂಗಳ ಹಿಂದೆ ಸಂತೋಷ ರವರು ಹೆಂಗವಳ್ಳಿ ಶಾಲೆ ಗುಡ್ಡೆ ಬಳಿ  ರಘು ಇವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ .

ಈ ಬಗ್ಗೆ  ರಘು ಅವರ ಪತ್ನಿ ಸಾಕು ದೂರು ನೀಡಿದ್ದು ಶಂಕರನಾರಾಯಣ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...