ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು

41

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ  ಶ್ರೀಮತಿ ಸಾಕು  ಇವರ ಗಂಡ ರಘು ರವರು ಧಮಸ್ಥಳ ಸಂಘದಲ್ಲಿ ಸದಸ್ಯರಾಗಿದ್ದು ಅವರ ಜೊತೆಯಲ್ಲಿ ಶೇಖರ, ಸಂತೋಷ,ರಮೇಶ, ಚಂದ್ರ ರವರು ಇದ್ದು ಸಂಘದ ಹಣವನ್ನು ವಾರಕ್ಕೊಮ್ಮೆ ಕಟ್ಟುತ್ತಿದ್ದರು

ಅದರಂತೆ 04/02/2025 ರಂದು ರಘು  ಸಂಘದ ಹಣವನ್ನು ಒಟ್ಟು ಮಾಡಿದ್ದು ಅದೇ ದಿನ ಸಂಜೆ ಸಂತೋಷ ಹಾಗೂ ಶೇಖರ ರವರು ರಘು ಅವರ ಮನೆಗೆ ಬಂದು ಸಂಘದ ಹಣವನ್ನು ಕೊಟ್ಟು ಹೋಗಿದ್ದು

ಅದೇ ದಿನ ಸಂತೋಷನು ಅವರ ಬಳಿ ಇದ್ದ ರೂ 5000/- ಹಣವನ್ನು ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿ ವಾಪಾಸ್ಸು ಮನೆಗೆ ಬಂದು  ಹುಡುಕಾಡಿದ್ದಲ್ಲಿ ಹಣವು ಸಿಕ್ಕಿರುವುದಿಲ್ಲ

ಮರುದಿನ  ಹಣದ ತೊಟ್ಟೆಯು ಸಿಕ್ಕಿದ್ದು ಅದನ್ನು ವಾಪಾಸ್ಸು ಸಂತೋಷನಿಗೆ ನೀಡಿದ್ದು ದಿನಾಂಕ 11/02/2025 ರಂದು ಸಾಕು ಅವರು ಗಂಡನೊಂದಿಗೆ ತಮ್ಮ ಬೈಕಿನಲ್ಲಿ ಅಮಾಸೆಬೈಲಿನ ತೋಟದಿಂದ ಮನೆಗೆ ಹೊಗುವಾಗ ಸಮಯ ಸುಮಾರು ರಾತ್ರಿ 09:15 ಗಂಟೆಗೆ ಹೆಂಗವಳ್ಳಿ ಪೇಟೆಯಲ್ಲಿ  ರಘು ಅವರು ಅಂಗಡಿಗೆ ಪುಸ್ತಕ ತರಲು ಹೋದಾಗ

ಬೈಕಿನ ಬಳಿ ಸಾಕು ಅವರು ನಿಂತುಕೊಂಡಾಗ ಆ ಸ್ಥಳಕ್ಕೆ ಸಂತೋಷ ರವರು ಬಂದು ಕಳೆದು ಹೋದ ಹಣ ಬಾಕಿ ಇದೆ ಎಂದು ಹೇಳಿ ಗಲಾಟೆ ಮಾಡುತ್ತಿದ್ದು ಆಗ ರಘು ಅವರು ಅಲ್ಲಿಗೆ ಬರುವಾಗ ಸಂತೋಷ ರವರು ರಘು ರವರನ್ನು ಅಡ್ಡಕಟ್ಟಿ ತಡೆದು ನಿಲ್ಲಿಸಿ ಮೊನ್ನೆ ನೀನು 5000/- ರೂಪಾಯಿ ಕೊಟ್ಟು ನೀನು 5000/- ರೂಪಾಯಿ ಇಟ್ಟುಕೊಂಡಿದ್ದಿಯಾ

ಎಂದು ಹೇಳಿ ಕೈಯಿಂದ ಮುಖಕ್ಕೆ, ಕೆನ್ನೆಗೆ ಹೊಡೆದು ದೂಡಿದ್ದು ಆಗ ನೆಲಕ್ಕೆ ಬಿದ್ದ ರಘು ರವರಿಗೆ ಕಾಲಿನಿಂದ ತುಳಿದಿದ್ದು ಈ ಹಿಂದೆ ಕೂಡ ಸುಮಾರು4 ತಿಂಗಳ ಹಿಂದೆ ಸಂತೋಷ ರವರು ಹೆಂಗವಳ್ಳಿ ಶಾಲೆ ಗುಡ್ಡೆ ಬಳಿ  ರಘು ಇವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ .

ಈ ಬಗ್ಗೆ  ರಘು ಅವರ ಪತ್ನಿ ಸಾಕು ದೂರು ನೀಡಿದ್ದು ಶಂಕರನಾರಾಯಣ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...