thekarnatakatoday.com
Karavali Karnataka

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ  ಶ್ರೀಮತಿ ಸಾಕು  ಇವರ ಗಂಡ ರಘು ರವರು ಧಮಸ್ಥಳ ಸಂಘದಲ್ಲಿ ಸದಸ್ಯರಾಗಿದ್ದು ಅವರ ಜೊತೆಯಲ್ಲಿ ಶೇಖರ, ಸಂತೋಷ,ರಮೇಶ, ಚಂದ್ರ ರವರು ಇದ್ದು ಸಂಘದ ಹಣವನ್ನು ವಾರಕ್ಕೊಮ್ಮೆ ಕಟ್ಟುತ್ತಿದ್ದರು

ಅದರಂತೆ 04/02/2025 ರಂದು ರಘು  ಸಂಘದ ಹಣವನ್ನು ಒಟ್ಟು ಮಾಡಿದ್ದು ಅದೇ ದಿನ ಸಂಜೆ ಸಂತೋಷ ಹಾಗೂ ಶೇಖರ ರವರು ರಘು ಅವರ ಮನೆಗೆ ಬಂದು ಸಂಘದ ಹಣವನ್ನು ಕೊಟ್ಟು ಹೋಗಿದ್ದು

ಅದೇ ದಿನ ಸಂತೋಷನು ಅವರ ಬಳಿ ಇದ್ದ ರೂ 5000/- ಹಣವನ್ನು ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿ ವಾಪಾಸ್ಸು ಮನೆಗೆ ಬಂದು  ಹುಡುಕಾಡಿದ್ದಲ್ಲಿ ಹಣವು ಸಿಕ್ಕಿರುವುದಿಲ್ಲ

ಮರುದಿನ  ಹಣದ ತೊಟ್ಟೆಯು ಸಿಕ್ಕಿದ್ದು ಅದನ್ನು ವಾಪಾಸ್ಸು ಸಂತೋಷನಿಗೆ ನೀಡಿದ್ದು ದಿನಾಂಕ 11/02/2025 ರಂದು ಸಾಕು ಅವರು ಗಂಡನೊಂದಿಗೆ ತಮ್ಮ ಬೈಕಿನಲ್ಲಿ ಅಮಾಸೆಬೈಲಿನ ತೋಟದಿಂದ ಮನೆಗೆ ಹೊಗುವಾಗ ಸಮಯ ಸುಮಾರು ರಾತ್ರಿ 09:15 ಗಂಟೆಗೆ ಹೆಂಗವಳ್ಳಿ ಪೇಟೆಯಲ್ಲಿ  ರಘು ಅವರು ಅಂಗಡಿಗೆ ಪುಸ್ತಕ ತರಲು ಹೋದಾಗ

ಬೈಕಿನ ಬಳಿ ಸಾಕು ಅವರು ನಿಂತುಕೊಂಡಾಗ ಆ ಸ್ಥಳಕ್ಕೆ ಸಂತೋಷ ರವರು ಬಂದು ಕಳೆದು ಹೋದ ಹಣ ಬಾಕಿ ಇದೆ ಎಂದು ಹೇಳಿ ಗಲಾಟೆ ಮಾಡುತ್ತಿದ್ದು ಆಗ ರಘು ಅವರು ಅಲ್ಲಿಗೆ ಬರುವಾಗ ಸಂತೋಷ ರವರು ರಘು ರವರನ್ನು ಅಡ್ಡಕಟ್ಟಿ ತಡೆದು ನಿಲ್ಲಿಸಿ ಮೊನ್ನೆ ನೀನು 5000/- ರೂಪಾಯಿ ಕೊಟ್ಟು ನೀನು 5000/- ರೂಪಾಯಿ ಇಟ್ಟುಕೊಂಡಿದ್ದಿಯಾ

ಎಂದು ಹೇಳಿ ಕೈಯಿಂದ ಮುಖಕ್ಕೆ, ಕೆನ್ನೆಗೆ ಹೊಡೆದು ದೂಡಿದ್ದು ಆಗ ನೆಲಕ್ಕೆ ಬಿದ್ದ ರಘು ರವರಿಗೆ ಕಾಲಿನಿಂದ ತುಳಿದಿದ್ದು ಈ ಹಿಂದೆ ಕೂಡ ಸುಮಾರು4 ತಿಂಗಳ ಹಿಂದೆ ಸಂತೋಷ ರವರು ಹೆಂಗವಳ್ಳಿ ಶಾಲೆ ಗುಡ್ಡೆ ಬಳಿ  ರಘು ಇವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ .

ಈ ಬಗ್ಗೆ  ರಘು ಅವರ ಪತ್ನಿ ಸಾಕು ದೂರು ನೀಡಿದ್ದು ಶಂಕರನಾರಾಯಣ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Related posts

ಕಾಡಾನೆಗಳನ್ನು ಗುಂಡಿಕ್ಕಿ ಸಾಯಿಸಬೇಕೆನ್ನುವ ಹರೀಶ್ ಪೂಂಜಾ ಅರಣ್ಯ ಭೂಮಿಯಲ್ಲಿರುವ ಅಕ್ರಮ ಗಣಿಗಾರಿಕೆ ಹಾಗೂ ಹೋಂಸ್ಟೇಗಳನ್ನು ತೆರವು ಮಾಡಿಸಲಿ : ನವೀನ್ ಸಾಲಿಯಾನ್

The Karnataka Today

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ

The Karnataka Today

ಬಾರಿನಲ್ಲಿ ಕಿರಿಕ್ ಮುಸ್ಲಿಂ ವ್ಯಕ್ತಿಗೆ ಹಲ್ಲೆ ಮಾಡಿದ ಹಿಂದೂ ಯುವಕರು ಮುಸ್ಲಿಂ ಯುವಕನ ಪರವಾಗಿ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಭಜರಂಗದಳ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ನೇತೃತ್ವದ ತಂಡ

The Karnataka Today

Leave a Comment