ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು

3

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ  ಶ್ರೀಮತಿ ಸಾಕು  ಇವರ ಗಂಡ ರಘು ರವರು ಧಮಸ್ಥಳ ಸಂಘದಲ್ಲಿ ಸದಸ್ಯರಾಗಿದ್ದು ಅವರ ಜೊತೆಯಲ್ಲಿ ಶೇಖರ, ಸಂತೋಷ,ರಮೇಶ, ಚಂದ್ರ ರವರು ಇದ್ದು ಸಂಘದ ಹಣವನ್ನು ವಾರಕ್ಕೊಮ್ಮೆ ಕಟ್ಟುತ್ತಿದ್ದರು

ಅದರಂತೆ 04/02/2025 ರಂದು ರಘು  ಸಂಘದ ಹಣವನ್ನು ಒಟ್ಟು ಮಾಡಿದ್ದು ಅದೇ ದಿನ ಸಂಜೆ ಸಂತೋಷ ಹಾಗೂ ಶೇಖರ ರವರು ರಘು ಅವರ ಮನೆಗೆ ಬಂದು ಸಂಘದ ಹಣವನ್ನು ಕೊಟ್ಟು ಹೋಗಿದ್ದು

ಅದೇ ದಿನ ಸಂತೋಷನು ಅವರ ಬಳಿ ಇದ್ದ ರೂ 5000/- ಹಣವನ್ನು ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿ ವಾಪಾಸ್ಸು ಮನೆಗೆ ಬಂದು  ಹುಡುಕಾಡಿದ್ದಲ್ಲಿ ಹಣವು ಸಿಕ್ಕಿರುವುದಿಲ್ಲ

ಮರುದಿನ  ಹಣದ ತೊಟ್ಟೆಯು ಸಿಕ್ಕಿದ್ದು ಅದನ್ನು ವಾಪಾಸ್ಸು ಸಂತೋಷನಿಗೆ ನೀಡಿದ್ದು ದಿನಾಂಕ 11/02/2025 ರಂದು ಸಾಕು ಅವರು ಗಂಡನೊಂದಿಗೆ ತಮ್ಮ ಬೈಕಿನಲ್ಲಿ ಅಮಾಸೆಬೈಲಿನ ತೋಟದಿಂದ ಮನೆಗೆ ಹೊಗುವಾಗ ಸಮಯ ಸುಮಾರು ರಾತ್ರಿ 09:15 ಗಂಟೆಗೆ ಹೆಂಗವಳ್ಳಿ ಪೇಟೆಯಲ್ಲಿ  ರಘು ಅವರು ಅಂಗಡಿಗೆ ಪುಸ್ತಕ ತರಲು ಹೋದಾಗ

ಬೈಕಿನ ಬಳಿ ಸಾಕು ಅವರು ನಿಂತುಕೊಂಡಾಗ ಆ ಸ್ಥಳಕ್ಕೆ ಸಂತೋಷ ರವರು ಬಂದು ಕಳೆದು ಹೋದ ಹಣ ಬಾಕಿ ಇದೆ ಎಂದು ಹೇಳಿ ಗಲಾಟೆ ಮಾಡುತ್ತಿದ್ದು ಆಗ ರಘು ಅವರು ಅಲ್ಲಿಗೆ ಬರುವಾಗ ಸಂತೋಷ ರವರು ರಘು ರವರನ್ನು ಅಡ್ಡಕಟ್ಟಿ ತಡೆದು ನಿಲ್ಲಿಸಿ ಮೊನ್ನೆ ನೀನು 5000/- ರೂಪಾಯಿ ಕೊಟ್ಟು ನೀನು 5000/- ರೂಪಾಯಿ ಇಟ್ಟುಕೊಂಡಿದ್ದಿಯಾ

ಎಂದು ಹೇಳಿ ಕೈಯಿಂದ ಮುಖಕ್ಕೆ, ಕೆನ್ನೆಗೆ ಹೊಡೆದು ದೂಡಿದ್ದು ಆಗ ನೆಲಕ್ಕೆ ಬಿದ್ದ ರಘು ರವರಿಗೆ ಕಾಲಿನಿಂದ ತುಳಿದಿದ್ದು ಈ ಹಿಂದೆ ಕೂಡ ಸುಮಾರು4 ತಿಂಗಳ ಹಿಂದೆ ಸಂತೋಷ ರವರು ಹೆಂಗವಳ್ಳಿ ಶಾಲೆ ಗುಡ್ಡೆ ಬಳಿ  ರಘು ಇವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ .

ಈ ಬಗ್ಗೆ  ರಘು ಅವರ ಪತ್ನಿ ಸಾಕು ದೂರು ನೀಡಿದ್ದು ಶಂಕರನಾರಾಯಣ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...