thekarnatakatoday.com
Karavali Karnataka

ಬಾರಿನಲ್ಲಿ ಕಿರಿಕ್ ಮುಸ್ಲಿಂ ವ್ಯಕ್ತಿಗೆ ಹಲ್ಲೆ ಮಾಡಿದ ಹಿಂದೂ ಯುವಕರು ಮುಸ್ಲಿಂ ಯುವಕನ ಪರವಾಗಿ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಭಜರಂಗದಳ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ನೇತೃತ್ವದ ತಂಡ

ಹಿಂದುತ್ವದ ಪ್ರಯೋಗ ಶಾಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತ ಸಾಗುತ್ತಿದೆ ಹಿಂದೂ ಸಂಘಟನೆ  ಎಂಬ ಪ್ರಶ್ನೆ ಹಿಂದೂ ಕಾರ್ಯಕರ್ತರ ಮನಸ್ಸಿನಲ್ಲಿ ಮೂಡುತ್ತಿದೆ.

ಇದಕ್ಕೆ ಪೂರಕವೆಂಬಂತೆ ಎಂದು  ಬಜರಂಗದಳದ ಗೋರಕ್ಷಾ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಹೊಯ್ಗೆ ಬಜಾರ್  ಕೊಲೆ ಆರೋಪಿ ಕಾರ್ತಿಕ್ ಶೆಟ್ಟಿ  ಈಗ ಬಜರಂಗದಳದ ಪ್ರಮುಖನಾಗಿದ್ದಾನೆ

ಈತನಿಗೆ ಬಜರಂಗದಳ ವಿಭಾಗ ಪ್ರಮುಖರ ಕೃಪಾಕಟಾಕ್ಷ ಇರುವುದು ಸೋಜಿಗದ ಸಂಗತಿಯಾಗಿದೆ ಎನ್ನುವುದು ಹಿಂದೂ ಸಂಘಟನೆ ಕಾರ್ಯಕರ್ತರ ವಾದ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕಾಪು ಪರಿಸರದಲ್ಲಿ ದರೋಡೆಗೆ ಸಂಚುರೂಪಿಸಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರ ಮೇಲೆ ಕಾರು ಚಲಾಯಿಸಿ ಹತ್ಯೆ ಗೆ ಯತ್ನಿಸಿದ ಕೇಸು ಕೂಡ ದಾಖಲಾಗಿದ್ದರು ಕೂಡ ಬಜರಂಗದಳ ಸಂಘಟನೆ ಈತನನ್ನ ಸಂಘಟನೆಯಿಂದ ಹೊರಗಿಡದಿರುವುದು ವಿಪರ್ಯಾಸವೇ ಸರಿ ಎಂದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಕೇಳಿ ಬರುತ್ತಿದೆ

ಇಷ್ಟೆಲ್ಲ ಪ್ರಕರಣಗಳು  ನಡೆದರೂ ಕೂಡ ಸುರತ್ಕಲ್ ನ ಬಾರ್ ಒಂದರಲ್ಲಿ ಮುಸ್ಲಿಂ ಯುವಕನಿಗೆ ಹಲ್ಲೆ ಮಾಡಿದ ಹಿಂದೂ ಯುವಕರ ಮೇಲೆ ಬಜರಂಗದಳ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಕಾರ್ತಿಕ್ ಶೆಟ್ಟಿ ನೇತೃತ್ವದ ತಂಡ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ


ಆರೋಪಿತರನ್ನು ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ, ಕೃಷ್ಣ ಶೆಟ್ಟಿ ಕೃಷ್ಣಾಪುರ, ಅಡಪೆ ಯಾನೆ ನಿತೀನ್ ಎಂದು ಗುರುತಿಸಲಾಗಿದೆ.

ಕಾರ್ತಿಕ್ ಶೆಟ್ಟಿ ಕಾಟಿಪಳ್ಳದಲ್ಲಿ ಬಜರಂಗದಳ ಕಾರ್ಯಕರ್ತ ಎಂದು ತಿರುಗುತ್ತಿದ್ದು ಈತನ ವಿರುದ್ಧ ದರೋಡೆ ಹಾಗೂ ಹಲವು ಪ್ರಕರಣಗಳು ಇವೆ ಎನ್ನಲಾಗಿದೆ.

ಪೊಡಿಯೆಟ್ಟಿ ಯಾನೆ ರಫೀಕ್ ಹಾಗೂ ರೋಶನ್, ಸಂದೇಶ್ ಎಂಬವರ ಮಧ್ಯೆ ಕೈಕಂಬ ಕಾರ್ಗೋಗೇಟ್ ಬಳಿಯಿರುವ ಆರೆಂಜ್ ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ರೋಶನ್ ತಂಡ ಪೊಡಿಯೆಟ್ಟಿ ಯಾನೆ ರಫೀಕ್ ಗೆ ಹಲ್ಲೆ ನಡೆಸಿದ್ದಾರೆ.

ಇದೆ ಕಾರಣಕ್ಕೆ ರೋಶನ್ ಸಹೋದರ ವಿಶ್ವ ಹಾಗೂ ಗಿರೀಶ್ ಎಂಬವರು ಅದೇ ಬಾರಿನಲ್ಲಿದ್ದ ಸಂದರ್ಭ ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ಜೊತೆ ಕೃಷ್ಣ ಶೆಟ್ಟಿ ಕೃಷ್ಣಾಪುರ, ಅಡಪೆ ಯಾನೆ ನಿತೀನ್ ಹಾಗೂ ಇತರರು ಆಗಮಿಸಿ ಹಲ್ಲೆ ನಡೆಸಿದ್ದು, ಬಾರಿನಲ್ಲಿ ಮಾರಾಮಾರಿ ನಡೆದಿದೆ.

ಮುಸ್ಲಿಂ ವ್ಯಕ್ತಿ ಪೊಡಿಯೆಟ್ಟಿ ಯಾನೆ ರಫೀಕ್ ಗೆ ಹಲ್ಲೆ ನಡೆಸಿದ್ದಕ್ಕೆ ಬಜರಂಗದಳದ ಕಾರ್ಯಕರ್ತರು ಎಂಟ್ರಿಕೊಟ್ಟು ಹಿಂದೂಗಳ ಮಧ್ಯೆಯೇ ಮಾರಾಮಾರಿ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೂ ಸಂಘಟನೆಗಳ ಹೆಸರು ಕೆಡಿಸಲು ಇಂತಹ ಪುಡಿ ರೌಡಿಗಳೇ ಕಾರಣ ಎನ್ನುವಂತಗಾಗಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿತ್ತು. ಸದ್ಯ ಆರೋಪಿಗಳಿಗೆ ಜಾಮೀನು ದೊರೆತಿದೆ.

Related posts

ಜೈಲಿನಲ್ಲಿ ಅಳವಡಿಸಿದ ಮೊಬೈಲ್ ಜಾಮರ್‌ ನಿಂದ ಸ್ಥಳೀಯರಿಗೆ ಸಮಸ್ಯೆ ಪ್ರತಿಭಟನೆ: ಮಂಗಳೂರು ಜೈಲಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಬಂಧನ

The Karnataka Today

ಉಡುಪಿ ಎತ್ತ ಸಾಗುತ್ತಿದೆ ಕಾನೂನು ಸುವ್ಯವಸ್ಥೆ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳಿಂದ  ಸಂತ್ರಸ್ತರ ಮನೆಗೆ ನುಗ್ಗಿ ದಾಂಧಲೆ

The Karnataka Today

ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣ ಮೂವರಿಗೆ ಜಾಮೀನು ಮಂಜೂರು ಮಾಡಿದ ಉಡುಪಿ ಜಿಲ್ಲಾ  ನ್ಯಾಯಾಲಯ

The Karnataka Today

Leave a Comment