ಬಾರಿನಲ್ಲಿ ಕಿರಿಕ್ ಮುಸ್ಲಿಂ ವ್ಯಕ್ತಿಗೆ ಹಲ್ಲೆ ಮಾಡಿದ ಹಿಂದೂ ಯುವಕರು ಮುಸ್ಲಿಂ ಯುವಕನ ಪರವಾಗಿ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಭಜರಂಗದಳ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ನೇತೃತ್ವದ ತಂಡ

2

ಹಿಂದುತ್ವದ ಪ್ರಯೋಗ ಶಾಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತ ಸಾಗುತ್ತಿದೆ ಹಿಂದೂ ಸಂಘಟನೆ  ಎಂಬ ಪ್ರಶ್ನೆ ಹಿಂದೂ ಕಾರ್ಯಕರ್ತರ ಮನಸ್ಸಿನಲ್ಲಿ ಮೂಡುತ್ತಿದೆ.

ಇದಕ್ಕೆ ಪೂರಕವೆಂಬಂತೆ ಎಂದು  ಬಜರಂಗದಳದ ಗೋರಕ್ಷಾ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಹೊಯ್ಗೆ ಬಜಾರ್  ಕೊಲೆ ಆರೋಪಿ ಕಾರ್ತಿಕ್ ಶೆಟ್ಟಿ  ಈಗ ಬಜರಂಗದಳದ ಪ್ರಮುಖನಾಗಿದ್ದಾನೆ

ಈತನಿಗೆ ಬಜರಂಗದಳ ವಿಭಾಗ ಪ್ರಮುಖರ ಕೃಪಾಕಟಾಕ್ಷ ಇರುವುದು ಸೋಜಿಗದ ಸಂಗತಿಯಾಗಿದೆ ಎನ್ನುವುದು ಹಿಂದೂ ಸಂಘಟನೆ ಕಾರ್ಯಕರ್ತರ ವಾದ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕಾಪು ಪರಿಸರದಲ್ಲಿ ದರೋಡೆಗೆ ಸಂಚುರೂಪಿಸಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರ ಮೇಲೆ ಕಾರು ಚಲಾಯಿಸಿ ಹತ್ಯೆ ಗೆ ಯತ್ನಿಸಿದ ಕೇಸು ಕೂಡ ದಾಖಲಾಗಿದ್ದರು ಕೂಡ ಬಜರಂಗದಳ ಸಂಘಟನೆ ಈತನನ್ನ ಸಂಘಟನೆಯಿಂದ ಹೊರಗಿಡದಿರುವುದು ವಿಪರ್ಯಾಸವೇ ಸರಿ ಎಂದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಕೇಳಿ ಬರುತ್ತಿದೆ

ಇಷ್ಟೆಲ್ಲ ಪ್ರಕರಣಗಳು  ನಡೆದರೂ ಕೂಡ ಸುರತ್ಕಲ್ ನ ಬಾರ್ ಒಂದರಲ್ಲಿ ಮುಸ್ಲಿಂ ಯುವಕನಿಗೆ ಹಲ್ಲೆ ಮಾಡಿದ ಹಿಂದೂ ಯುವಕರ ಮೇಲೆ ಬಜರಂಗದಳ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಕಾರ್ತಿಕ್ ಶೆಟ್ಟಿ ನೇತೃತ್ವದ ತಂಡ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ


ಆರೋಪಿತರನ್ನು ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ, ಕೃಷ್ಣ ಶೆಟ್ಟಿ ಕೃಷ್ಣಾಪುರ, ಅಡಪೆ ಯಾನೆ ನಿತೀನ್ ಎಂದು ಗುರುತಿಸಲಾಗಿದೆ.

ಕಾರ್ತಿಕ್ ಶೆಟ್ಟಿ ಕಾಟಿಪಳ್ಳದಲ್ಲಿ ಬಜರಂಗದಳ ಕಾರ್ಯಕರ್ತ ಎಂದು ತಿರುಗುತ್ತಿದ್ದು ಈತನ ವಿರುದ್ಧ ದರೋಡೆ ಹಾಗೂ ಹಲವು ಪ್ರಕರಣಗಳು ಇವೆ ಎನ್ನಲಾಗಿದೆ.

ಪೊಡಿಯೆಟ್ಟಿ ಯಾನೆ ರಫೀಕ್ ಹಾಗೂ ರೋಶನ್, ಸಂದೇಶ್ ಎಂಬವರ ಮಧ್ಯೆ ಕೈಕಂಬ ಕಾರ್ಗೋಗೇಟ್ ಬಳಿಯಿರುವ ಆರೆಂಜ್ ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ರೋಶನ್ ತಂಡ ಪೊಡಿಯೆಟ್ಟಿ ಯಾನೆ ರಫೀಕ್ ಗೆ ಹಲ್ಲೆ ನಡೆಸಿದ್ದಾರೆ.

ಇದೆ ಕಾರಣಕ್ಕೆ ರೋಶನ್ ಸಹೋದರ ವಿಶ್ವ ಹಾಗೂ ಗಿರೀಶ್ ಎಂಬವರು ಅದೇ ಬಾರಿನಲ್ಲಿದ್ದ ಸಂದರ್ಭ ಬಜರಂಗದಳದ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ಜೊತೆ ಕೃಷ್ಣ ಶೆಟ್ಟಿ ಕೃಷ್ಣಾಪುರ, ಅಡಪೆ ಯಾನೆ ನಿತೀನ್ ಹಾಗೂ ಇತರರು ಆಗಮಿಸಿ ಹಲ್ಲೆ ನಡೆಸಿದ್ದು, ಬಾರಿನಲ್ಲಿ ಮಾರಾಮಾರಿ ನಡೆದಿದೆ.

ಮುಸ್ಲಿಂ ವ್ಯಕ್ತಿ ಪೊಡಿಯೆಟ್ಟಿ ಯಾನೆ ರಫೀಕ್ ಗೆ ಹಲ್ಲೆ ನಡೆಸಿದ್ದಕ್ಕೆ ಬಜರಂಗದಳದ ಕಾರ್ಯಕರ್ತರು ಎಂಟ್ರಿಕೊಟ್ಟು ಹಿಂದೂಗಳ ಮಧ್ಯೆಯೇ ಮಾರಾಮಾರಿ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೂ ಸಂಘಟನೆಗಳ ಹೆಸರು ಕೆಡಿಸಲು ಇಂತಹ ಪುಡಿ ರೌಡಿಗಳೇ ಕಾರಣ ಎನ್ನುವಂತಗಾಗಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿತ್ತು. ಸದ್ಯ ಆರೋಪಿಗಳಿಗೆ ಜಾಮೀನು ದೊರೆತಿದೆ.

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...