thekarnatakatoday.com
Karavali Karnataka

ಉಡುಪಿ ನಗರ ಸಿಟಿ ಬಸ್ ಸ್ಟ್ಯಾಂಡ್ ರಿಕ್ಷಾ ಚಾಲಕರ ದಾಂಧಲೆ ಬಾಡಿಗೆ ಮಾಡುತ್ತಿದ್ದ ಅಮಾಯಕ ರಿಕ್ಷಾ ಚಾಲಕನ ಮೇಲೆ ಹಲ್ಲೆ

ಉಡುಪಿ ನಗರ ಸಿಟಿ ಬಸ್ ಸ್ಟ್ಯಾಂಡ್ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ಮಾಡುತ್ತಿದ್ದ ರಿಕ್ಷಾ ಚಾಲಕನ ಮೇಲೆ ಹಲ್ಲೆ.

ಉಡುಪಿ ನಗರದಲ್ಲಿ ರಿಕ್ಷಾ ಚಾಲನೆ ನಡೆಸಲು ಸ್ಥಳೀಯರಿಗೆ ಅವಕಾಶ ನೀಡದೆ ಹೊರ ಜಿಲ್ಲೆಗಳ ರಿಕ್ಷಾ ಚಾಲಕರಿಂದ ಹೆಚ್ಚಿನ ಹಣ ಪಡೆದು ರಿಕ್ಷಾ ಚಾಲನೆಗೆ ಅವಕಾಶ ಮಾಡಿ ಕೊಡುತ್ತಿರುವ ಆರೋಪ ಕೇಳಿ ಬರುತ್ತಿದೆ

ಸ್ಥಳೀಯ ರಿಕ್ಷಾ ಚಾಲಕರಿಗೆ ರಿಕ್ಷಾ ಚಲಾವಣೆಗೆ ಅವಕಾಶ ನೀಡದೆ ಹಲ್ಲೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ

ಮಂಜುನಾಥ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಗರಸಭೆ ನಿಲ್ದಾಣದಲ್ಲಿ ಆಟೋರಿಕ್ಷಾವನ್ನುಚಲಾಯಿಸಿಕೊಂಡಿದ್ದು.

ದಿನಾಂಕ:13/01/2025 ರಂದು ಸಂಜೆ 5 ಗಂಟೆಗೆ ಸರ್ವಿಸ್‌ ಬಸ್‌ ನಿಲ್ದಾಣದ ಬಳಿ ಇರುವ ಡಿ.ಡಿ.ಪಿ ಆಟೋ ನಿಲ್ದಾಣಕ್ಕೆ ರಿಕ್ಷಾ ಬಾಡಿಗೆಗೆ ಹೋದಾಗ ಅಲ್ಲಿಯ ಆಟೋರಿಕ್ಷಾ ನಂಬ್ರ KA 20 AB 0392 ನೇ ಚಾಲಕರಾದ ಮಹೇಶ್‌ ಮತ್ತು ಆಟೋರಿಕ್ಷಾ ನಂಬ್ರ KA 20 AC 1595 ನೇ ಚಾಲಕ ರಾಘು ರವರು

ದೂರುದಾರರ ಆಟೋರಿಕ್ಷಾವನ್ನು ನಿಲ್ದಾಣದ ಒಳಗಡೆ ಪ್ರವೇಶಿಸುವುದನ್ನು ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ 🙏ದಾಖಲಾಗಿದೆ “

Related posts

ರೋಟರ್ಯಾಕ್ಟ್ ಕ್ಲಬ್ ಉಡುಪಿ ವತಿಯಿಂದ ಆರೋಗ್ಯ ಹಾಗೂ ಸ್ವಚ್ಛತಾ ಅರಿವು ಅಭಿಯಾನ ಉದ್ಘಾಟನೆ

The Karnataka Today

ಬಿಜೆಪಿ ಯುವ ಮೋರ್ಚಾ ಮುಖಂಡನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಸುಮೋಟೋ ಪ್ರಕರಣ ದಾಖಲಿಸುವಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹವಾಲ್ದಾರ್ ಬೆಟ್ಟು ಒತ್ತಾಯ

The Karnataka Today

ಉಡುಪಿ ಜಿಲ್ಲಾ ಕಾಂಗ್ರೆಸ್ ನಲ್ಲಿ ವ್ಯಕ್ತಿ ಪೂಜೆಗೆ ಕಾರ್ಯಕರ್ತರ ಆಕ್ರೋಶ ಜಿಲ್ಲಾ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ???

The Karnataka Today

Leave a Comment