thekarnatakatoday.com
Karavali Karnataka

ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಡಿಸೆಂಬರ್ 23ರಂದು ಸ್ವಉದ್ಯೋಗ ತರಬೇತಿ ಯೋಜನಾ ಕಾರ್ಯಗಾರ

ಸ್ವ-ಉದ್ಯೋಗ ಯೋಜನೆ ಕಾರ್ಯಾಗಾರ ಉಡುಪಿ : ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕ (PMFME) ಯೋಜನೆಯ ಮೂಲಕ ಸಹಾಯಧನ ಪಡೆದು ಸ್ಪೋದ್ಯೋಗ ಸೃಷ್ಟಿಸಿಕೊಳ್ಳುವ ತರಬೇತಿ.

ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಡಿ.23ರ ಬೆ.11ಕ್ಕೆ ಕೃಷಿ ಇಲಾಖೆಯ ಮೂಲಕ ಕಾರ್ಯಾಗಾರ ನಡೆಯಲಿದೆ.

ಒಂದು ಜಿಲ್ಲೆ-ಒಂದು ಉತ್ಪಾದನೆ ಆಶಯದಡಿ ಪ್ರಾರಂಭಗೊಂಡ ಈ ಯೊಜನೆಯಡಿ ಜಿಲ್ಲೆಯಲ್ಲಿ ಮೀನುಗಾರಿಕೆ ಉತ್ಪನ್ನಕ್ಕೆ ಪ್ರಾಧಾನ್ಯತೆ ನೀಡಲಾಗಿದೆ.

ಇದರೊಂದಿಗೆ ಮನೆಗಳಲ್ಲಿ ವ್ಯಾಪಾರದ ಅಂಗಡಿ ಮತ್ತು ಕಿರು ಉದ್ಯಮ ಸ್ಥಾಪಿಸಬಹುದಾಗಿದೆ.

18 ವರ್ಷ ಮೇಲ್ಪಟ್ಟ ಮಹಿಳೆಯರು, ಪುರುಷರು ಹಾಗೂ ಸ್ವ-ಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಕೋ-ಆಪರೇಟಿವ್ ಸೊಸೈಟಿಗಳು,

ಖಾಸಗಿ ಮಾಲಕತ್ವದ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳು ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಶೇ.50 ರಷ್ಟು ಸಹಾಯಧನ 15 ಲಕ್ಷ ಗರಿಷ್ಠ ಮಿತಿಯೊಂದಿಗೆ ಸಹಾಯಧನ ನೀಡಲಾಗುವುದು.

ಯೋಜನೆಯಡಿಯಲ್ಲಿ ಹಿಂದೆ ಸಹಾಯಧನ ಪಡೆದವರೂ ಇತರ ಸಬ್ಸಿಡಿ ಅರ್ಜಿ ಸಲ್ಲಿಸಬಹುದು.

ಮೀನಿನ ಮೌಲ್ಯವಧಿತ ಪದಾರ್ಥಗಳು, ಹಿಟ್ಟಿನ ಗಿರಣಿಗಳು ಮತ್ತು ಪ್ಯಾಕಿಂಗ್ ಮೆಷಿನ್, ಎಣ್ಣೆ ಗಾಣ, ಬೇಕರಿ ಉತ್ಪನ್ನ ಅರಿಶಿಣ ಸಂಸ್ಕರಣೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆ.

ನಿಪ್ಪಟ್ಟು ಪಾನಿಪುರಿ, ಕೋಡುಬಳೆ, ಮಿಕ್ಸರ್, ‘ಚಿಪ್ಸ್ ತಯಾರಿಕೆ ಸಂಸ್ಕರಿಸಿದ ಚಪಾತಿ, ಪರೋಟ, ಪೂರಿ, ಹೋಳಿಗೆ ಉತ್ಪನ್ನಗಳ ತಯಾರಿಕೆ, ಮಸಾಲ ಪದಾರ್ಥಗಳು/ ಸಾಂಬಾರ್ ಉತ್ಪನ್ನಗಳ ತಯಾರಿಕೆ ಇತ್ಯಾದಿಗಳನ್ನು ತೆರೆಯಬಹುದಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ 245ಕ್ಕೂ ಹೆಚ್ಚು ಕಿರು ಘಟಕಗಳು ಸ್ಥಾಪನೆಯಾಗಿದ್ದು, 2024-25ರಲ್ಲಿ 250 ಘಟಕಗಳನ್ನು ಆರಂಭಿಸಲು ಯೋಜಿಸಲಾಗಿದೆ. ಸಂಪರ್ಕಿಸಿ : 83103 53519

Related posts

ನವೆಂಬರ್ 17,18 ಉಡುಪಿ ನ್ಯಾಯಾಲಯ ಮತ್ತು ವಕೀಲರಸಂಘದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮ

The Karnataka Today

ಸಾಲ ವಸೂಲಾತಿ ಸೊಸೈಟಿಯಲ್ಲಿ ಮಹಿಳೆಯನ್ನು ರಾತ್ರಿವರೆಗೆ ಕುಳ್ಳಿರಿಸಿ ಜಾತಿನಿಂದನೆ,ಜೀವ ಬೆದರಿಕೆ ಒಡ್ಡಿದ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

The Karnataka Today

ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುಂಪು ಗಲಾಟೆ ಭಯದ ವಾತಾವರಣ ನಿರ್ಮಾಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

The Karnataka Today

Leave a Comment