thekarnatakatoday.com
News

ಆರ್ ಎಸ್ ಎಸ್ ಅಂತರ  ಧರ್ಮೀಯ  ವಿವಾಹಕ್ಕೆ ವಿರೋಧಿಯಲ್ಲ ಅದರ ಹೆಸರಿನಲ್ಲಿ  ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ವಿರುದ್ಧವಾಗಿದೆ :: ರತನ್ ಶಾರದಾ

“ಅಂತರ ಧರ್ಮೀಯ ವಿವಾಹಗಳು ವಿಶೇಷ ವಿವಾಹ ಕಾಯ್ದೆಯಡಿ ದಾಖಲಾಗಬೇಕಾಗುತ್ತದೆ, ಈ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸೇರಿದಂತೆ ಸಮಾನ ಹಕ್ಕುಗಳು ದೊರೆಯುತ್ತವೆ ಎಂದು ಆರ್ ಎಸ್ ಎಸ್ ಮಾಧ್ಯಮ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂತರಧರ್ಮೀಯ ವಿವಾಹಕ್ಕೆ ವಿರುದ್ಧವಾಗಿ ಇಲ್ಲ, ಆದರೆ ಮದುವೆ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ವಿರುದ್ಧವಾಗಿದೆ.

ಅಂತರಧರ್ಮೀಯ ವಿವಾಹವಾದ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಪತಿಯ ಧರ್ಮಕ್ಕೆ ಮತಾಂತರ ಮಾಡಿಕೊಂಡು ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಆರ್ ಎಸ್ ಎಸ್ ರಾಷ್ಟ್ರೀಯ ಮಾಧ್ಯಮ ತಂಡದ ಸದಸ್ಯ ರತನ್ ಶಾರದಾ ಹೇಳಿದ್ದಾರೆ.

ಇವರು ಲವ್ ಜಿಹಾದ್ ಎಂಬ ವಿವಾದಾತ್ಮಕ ವಿಷಯದ ಮೇಲೆ ಆರ್ ಎಸ್ಎಸ್ 360 ಪುಸ್ತಕದ ಲೇಖಕ ಕೂಡ ಆಗಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಅಂತರಧರ್ಮೀಯ ಮದುವೆಯಲ್ಲಿ ಮಹಿಳೆಯರು ಮೋಸ ಹೋದ ಪ್ರಕರಣಗಳು ಸಾಕಷ್ಟಿವೆ.

ಹಲವು ಮದುವೆಗಳು ಇಂತವು ಯೋಜಿತ ಧರ್ಮ ಮತಾಂತರಗಳು. ವೈಯಕ್ತಿಕ ಕಾನೂನುಗಳನ್ನು ಹತ್ತಿಕ್ಕುವ ಸಾಮಾನ್ಯ ಕಾನೂನುಗಳು ನಮ್ಮಲ್ಲಿ ಬಲಿಷ್ಠವಾಗಬೇಕು ಎಂದರು.

ಜಾತಿ, ಧರ್ಮವನ್ನು ಬದಿಗೊತ್ತಿ ಅಭಿವೃದ್ಧಿಪರ ಮತ ಹಾಕಿದ್ದಾರೆ ಎಂಬುದನ್ನು ಇತ್ತೀಚಿನ ಬಿಹಾರ ಚುನಾವಣೆ ಸಾಬೀತುಪಡಿಸಿದೆ. ಜಾತ್ಯಾತೀತ ಪಕ್ಷಗಳ ರಾಜಕೀಯವನ್ನು ಜನರು ನೋಡಿ ತೀರ್ಮಾನ ಕೊಟ್ಟಿದ್ದು ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೂಡ ಅದು ಸಾಬೀತಾಗಲಿದೆ ಎಂದರು.

Related posts

ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ, ಆದರೆ, ದೇಶದ್ರೋಹಿಗಳ ವಿರೋಧಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

The Karnataka Today

ಹಿಂದಿ ಚಲನಚಿತ್ರ ನಟ ಸೈಫ್ ಅಲಿ ಖಾನ್ ಗೆ ಚೂರಿ ಇರಿತ ಆಸ್ಪತ್ರೆಗೆ ದಾಖಲು ಪ್ರಾಣಪಾಯದಿಂದ ಪಾರು

The Karnataka Today

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಶ್ಲೀಲ ಪದಗಳಿಂದ  ನಿಂದಿಸಿದ ಆರೋಪ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನದೂರು ನೀಡಿದ ಹೆಬ್ಬಾಳ್ಕರ್ ಸಿಟಿ ರವಿ ಬಂಧನ

The Karnataka Today

Leave a Comment