ಕಂಬಳ ಗದ್ದೆಯಲ್ಲಿ ಹಗ್ಗ-ಜಗ್ಗಾಟ ಸ್ಪರ್ಧೆ  ತಂಡಗಳ ಹೊಡೆದಾಟ ಪ್ರಕರಣ ದಾಖಲು

3

 ಚೇರ್ಕಾಡಿ ಕಂಬಳ ಗದ್ದೆಯಲ್ಲಿ ತಂಡಗಳ ಹೊಡೆದಾಟ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು  09.12.2024 ರಂದು ಚೇರ್ಕಾಡಿ ಕಂಬಳದ ಪ್ರಯುಕ್ತ ಕಂಬಳ ಗದ್ದೆಯಲ್ಲಿ ನಡೆದ ಹಗ್ಗ-ಜಗ್ಗಾಟದ  2ನೇ ಸುತ್ತಿನ ಸ್ಪರ್ಧೆಲ್ಲಿ ಆಟವಾಡಲು ರಾಕೇಶ್‌, (32)

  ಇವರು ತನ್ನ ತಂಡದ ಸದಸ್ಯರಾದ ಕಿರಣ, ರಘು, ಅರುಣ, ರಾಕೇಶ, ಪ್ರಸಾದ್ ಮತ್ತು ಸತೀಶ್‌ ರವರ ಜೊತೆ ಸೇರಿ ನಿಂತು ಎದುರು ತಂಡದವರೊಂದಿಗೆ ಸಂಜೆ 6:30 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ  ಪ್ರಾರಂಭಗೊಂಡಾಗ

ಎದುರಾಳಿ ತಂಡದವರಾದ  ಶರತ್‌, ಸಂದೀಪ್‌, ರಾಕೇಶ್‌, ಸುಮಂತ್‌ ಹಾಗೂ ಇತರೇ 15 ಜನರು ಸೇರಿಕೊಂಡು ಏಕಾ ಎಕಿ ಕಂಬಳಗದ್ದೆಗೆ  ನುಗ್ಗಿ ರಾಕೇಶ್ ರನ್ನು ಸೇರಿ ಅವರ ತಂಡದವರಿಗೆ  ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಅವಾಚ್ಯವಾಗಿ ಬೈದು ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ

ರಾಕೇಶ್  ತನ್ನ ತಂಡದವರೊಂದಿಗೆ ಸ್ಪರ್ಧೆಯನ್ನು ಅಲ್ಲಿಯೇ ಕಡಿತಗೊಳಿಸಿ ಕಂಬಳಗದ್ದೆಯಿಂದ ಮೇಲೆ ಬಂದಾಗ, ಆರೋಪಿ ಶರತ್‌  ಏಕಾ ಏಕಿ ರಾಕೇಶ್ ರ ಕಾಲರ್‌ ಪಟ್ಟಿಗೆ ಕೈ ಹಾಕಿ, ಅವರ ತಲೆ, ಭುಜಕ್ಕೆ ಕಲ್ಲಿನಿಂದ ಹೊಡೆದು ಜಜ್ಜಿರುತ್ತಾರೆ.

ಅದನ್ನು ತಡೆಯಲು ಬಂದ ಕಿರಣ ಮತ್ತು ರಾಕೇಶ್‌ ಅವರ ಮೇಲೆಯು ಕೂಡ ಆರೋಪಿಗಳು ಹಲ್ಲೆ ಮಾಡಿರುತ್ತಾರೆ. ಈ ಹಲ್ಲೆಯಲ್ಲಿ  ಗಾಯಗೊಂಡ   ಕಿರಣ್‌, ರಾಕೇಶ್‌ ರವರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯಲ್ಲಿ 279/2024 ಕಲಂ: 189(2), 191(2), 115(2), 351(2)(3),118(1) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a comment

Leave a Reply

Your email address will not be published. Required fields are marked *

Related Articles

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ರಾಜ್ಯದ 18 ಸ್ಥಳಗಳಲ್ಲಿ ಎನ್ಐಎ ದಾಳಿ

ನವದೆಹಲಿ: ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶನಿವಾರ...

ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಗೊಂದಲದ ನಡೆ ಕೂಡಲೆ ಸೃಷ್ಟಿಕರಣ ನೀಡಿ ::ನಿತಿನ್ ಪೂಜಾರಿ ಆಗ್ರಹ

ಧಾರ್ಮಿಕ ನಂಬಿಕೆಯ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ : ಉದಯಕುಮಾರ್ ಶೆಟ್ಟಿ ಅವರು ಸಲ್ಲಿಸಿದ ಹೈಕೋರ್ಟ್...

ಧರ್ಮಸ್ಥಳ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರಕರಣದ...

ಧರ್ಮಸ್ಥಳ ಆಗೆದ ಸ್ಥಳದಲ್ಲಿ ಸಿಗದ ಅವಶೇಷಗಳು ಕಾರ್ಯಾಚರಣೆ ನಾಳೆಗೆ ಮುಂದೂಡಿದ ಎಸ್ಐಟಿ

“ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಪ್ರಕರಣದ ಸಾಕ್ಷಿ-ದೂರುದಾರನಾಗಿರುವ ವ್ಯಕ್ತಿ ಶವಗಳನ್ನು...