ಕಂಬಳ ಗದ್ದೆಯಲ್ಲಿ ಹಗ್ಗ-ಜಗ್ಗಾಟ ಸ್ಪರ್ಧೆ  ತಂಡಗಳ ಹೊಡೆದಾಟ ಪ್ರಕರಣ ದಾಖಲು

58

 ಚೇರ್ಕಾಡಿ ಕಂಬಳ ಗದ್ದೆಯಲ್ಲಿ ತಂಡಗಳ ಹೊಡೆದಾಟ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು  09.12.2024 ರಂದು ಚೇರ್ಕಾಡಿ ಕಂಬಳದ ಪ್ರಯುಕ್ತ ಕಂಬಳ ಗದ್ದೆಯಲ್ಲಿ ನಡೆದ ಹಗ್ಗ-ಜಗ್ಗಾಟದ  2ನೇ ಸುತ್ತಿನ ಸ್ಪರ್ಧೆಲ್ಲಿ ಆಟವಾಡಲು ರಾಕೇಶ್‌, (32)

  ಇವರು ತನ್ನ ತಂಡದ ಸದಸ್ಯರಾದ ಕಿರಣ, ರಘು, ಅರುಣ, ರಾಕೇಶ, ಪ್ರಸಾದ್ ಮತ್ತು ಸತೀಶ್‌ ರವರ ಜೊತೆ ಸೇರಿ ನಿಂತು ಎದುರು ತಂಡದವರೊಂದಿಗೆ ಸಂಜೆ 6:30 ಗಂಟೆಗೆ ಹಗ್ಗ ಜಗ್ಗಾಟ ಸ್ಪರ್ಧೆ  ಪ್ರಾರಂಭಗೊಂಡಾಗ

ಎದುರಾಳಿ ತಂಡದವರಾದ  ಶರತ್‌, ಸಂದೀಪ್‌, ರಾಕೇಶ್‌, ಸುಮಂತ್‌ ಹಾಗೂ ಇತರೇ 15 ಜನರು ಸೇರಿಕೊಂಡು ಏಕಾ ಎಕಿ ಕಂಬಳಗದ್ದೆಗೆ  ನುಗ್ಗಿ ರಾಕೇಶ್ ರನ್ನು ಸೇರಿ ಅವರ ತಂಡದವರಿಗೆ  ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಅವಾಚ್ಯವಾಗಿ ಬೈದು ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ

ರಾಕೇಶ್  ತನ್ನ ತಂಡದವರೊಂದಿಗೆ ಸ್ಪರ್ಧೆಯನ್ನು ಅಲ್ಲಿಯೇ ಕಡಿತಗೊಳಿಸಿ ಕಂಬಳಗದ್ದೆಯಿಂದ ಮೇಲೆ ಬಂದಾಗ, ಆರೋಪಿ ಶರತ್‌  ಏಕಾ ಏಕಿ ರಾಕೇಶ್ ರ ಕಾಲರ್‌ ಪಟ್ಟಿಗೆ ಕೈ ಹಾಕಿ, ಅವರ ತಲೆ, ಭುಜಕ್ಕೆ ಕಲ್ಲಿನಿಂದ ಹೊಡೆದು ಜಜ್ಜಿರುತ್ತಾರೆ.

ಅದನ್ನು ತಡೆಯಲು ಬಂದ ಕಿರಣ ಮತ್ತು ರಾಕೇಶ್‌ ಅವರ ಮೇಲೆಯು ಕೂಡ ಆರೋಪಿಗಳು ಹಲ್ಲೆ ಮಾಡಿರುತ್ತಾರೆ. ಈ ಹಲ್ಲೆಯಲ್ಲಿ  ಗಾಯಗೊಂಡ   ಕಿರಣ್‌, ರಾಕೇಶ್‌ ರವರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯಲ್ಲಿ 279/2024 ಕಲಂ: 189(2), 191(2), 115(2), 351(2)(3),118(1) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a comment

Leave a Reply

Your email address will not be published. Required fields are marked *

Related Articles

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...

ಪೂರ್ಣಿಮಾ ಶೆಟ್ಟಿಗೆ ‘ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ’ ಪ್ರಶಸ್ತಿ ಗೌರವ

ಸಾಮಾಜಿಕ ಸೇವಾ ಕಾರ್ಯಕರ್ತೆ ಹಾಗೂ ‘ವಸುದೈವ ಕುಟುಂಬಕಂ’ ಎನ್‌ಜಿಒ ಸಂಸ್ಥೆಯ ಸಂಸ್ಥಾಪಕಿ ಪೂರ್ಣಿಮಾ ಶೆಟ್ಟಿ ಅವರಿಗೆ...