thekarnatakatoday.com
Karavali Karnataka

ಐಟಿ ಅಧಿಕಾರಿಗಳ ದಾಳಿ ಹೆಸರಿನಲ್ಲಿ ಬೆದರಿಸಿ 7.50 ಲಕ್ಷ ನಗದು ಚಿನ್ನಾಭರಣ ಪಡೆದು ಪರಾರಿ ಪ್ರಕರಣ ದಾಖಲು

: ಶ್ರೀಮತಿ ಜ್ಯೂಲಿಯಟ್‌ ಪೆರಂಪಳ್ಳಿ ರಸ್ತೆ, ಶಿವಳ್ಳಿ ಗ್ರಾಮ ಇವರು ಸುಮಾರು 04 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಎಂಬವರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದು ಸುನೀತಾ ರವರಲ್ಲಿ ಅವರ ಹಾಗೂ ಅವರ ಗಂಡನ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೇಳಿರುತ್ತಾರೆ.

ಸುನೀತಾ ರವರು ಜೂಲಿಯಟ್ ರಲ್ಲಿ ಅವರ ಗಂಡನಿಗೆ ವಿಚ್ಚೇದನ ಕೊಡುವಂತೆ ಹೇಳುತ್ತಿದ್ದು,ಇದರಿಂದ ಬೇಸರಗೊಂಡು ಮನೆ ಬಿಟ್ಟು ಹೋಗಲು ನಿರ್ಧರಿಸಿ ಅವರ ತಮ್ಮ ತಾಯಿಯನ್ನು ಮನೆಗೆ ಬರಲು ಹೇಳಿ ದಿನಾಂಕ: 28/10/2024 ರಂದು ಅವರ ತಾಯಿಯಲ್ಲಿ ಬಟ್ಟೆಬರೆ ಹಾಗೂ ಸ್ವಲ್ಪ ಚಿನ್ನವನ್ನು ಹಾಗೂ ಗಂಡನ ಮನೆಯ ಲಾಕರ್‌ ನಲ್ಲಿ ಇರಿಸಿದ್ದ 10 ಲಕ್ಷ ರೂಪಾಯಿಯಲ್ಲಿ 1 ಲಕ್ಷ ಹಣವನ್ನು ಕೊಟ್ಟು ಕಳುಹಿಸಿದ್ದು .

ನಂತರ ದಿನಾಂಕ: 29/10/2024 ರಂದು ಬೆಳಿಗ್ಗೆ 10:30 ಗಂಟೆಗೆ ಸುನೀತಾ ರವರು ಸ್ಟ್ಯಾನಿ ಎಂಬವರೊಂದಿಗೆ ಶ್ರೀಮತಿ ಜೂಲಿಯಟ್ ರವರ ಮನೆಗೆ ಬಂದು ಐ,ಟಿ ಅಧಿಕಾರಿಗಳು ಬಂದಿದ್ದಾರೆ ನಿಮ್ಮ ಮನೆಗೆ ರೈಡ್‌ ಮಾಡುತ್ತಾರೆ ಲಾಕರ್‌ ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆಯಬೇಕು ಎಂದು ಹೇಳಿ ಜೂಲಿಯಟ್ ರಿಂದ ಲಾಕರ್‌ ಕೀ ತೆಗೆದುಕೊಂಡು ಲಾಕರ್‌ ಓಪನ್‌ ಮಾಡಿ ಅದರಲ್ಲಿ ಇದ್ದ ಹಣದಲ್ಲಿ ಒಂದು ಲಕ್ಷ 50 ಸಾವಿರ ರೂಪಾಯಿಯನ್ನು ಜೂಲಿಯೆಟ್ ರಿಗೆ ನೀಡಿರುತ್ತಾರೆ

ಉಳಿದ 7 ಲಕ್ಷ 50 ಸಾವಿರ ರೂಪಾಯಿ ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ನೆಕ್ಲೆಸ್‌ ನ್ನು ಅವಳ ಚೀಲದಲ್ಲಿ ಹಾಕಿಕೊಂಡು ನನ್ನಲ್ಲಿ ಇರಲಿ ಆ ನಂತರ ಕೊಡುತ್ತೇನೆ

ಎಂದು ಹೇಳಿದ್ದು, ಸುನೀತಾ ಹಾಗೂ ಸ್ಟಾನಿ ಇವರುಗಳು ಐ,ಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ 7 ಲಕ್ಷ 50 ಸಾವಿರ ರೂಪಾಯಿ ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್‌ ಸರವನ್ನು ತೆಗೆದುಕೊಂಡು ಮೋಸಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣಾ ಯಲ್ಲಿ ಕಲಂ: 316(7) 318(4) R/w 3(5) ಬಿಎನ್ಎಸ್‌ ರಂತೆ ಪ್ರಕರಣ ದಾಖಲಾಗಿದೆ.

Related posts

ಉಡುಪಿ -ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜುಗಲ್ ಬಂದಿ ಭಜನಾ ಸ್ಪರ್ಧೆ ಬೆಳ್ತಂಗಡಿಯ ಸುನಾದ ವಿನೋದಿನಿ ಭಜನಾ ತಂಡಕ್ಕೆ ಪ್ರಶಸ್ತಿ

The Karnataka Today

ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶಾಸಕ ಯಶ್ ಪಾಲ್ ಸುವರ್ಣ ಇನ್ನಾದರೂ ಶಾಸಕ ಸ್ಥಾನದ ಜವಾಬ್ದಾರಿ ಅರಿತು  ಮಾದರಿ ಶಾಸಕರಾಗುವತ್ತ ಮುನ್ನಡೆಯಲ್ಲಿ::ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಶೆಟ್ಟಿಬಜಗೋಳಿ

The Karnataka Today

ಪಡುಬಿದ್ರಿ ವ್ಯವಸಾಯಕ ಸಹಕಾರಿ ಸಂಘದ ಚುನಾವಣೆಯಲ್ಲಿ ಕನಿಷ್ಠ 500ರೂ ಷೇರು ಹೊಂದಿರುವ  ಸದಸ್ಯರಿಗೂ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ  ಜಿಲ್ಲಾಧಿಕಾರಿಗಳಿಗೆ ಮನವಿ

The Karnataka Today

Leave a Comment