ಕುಂದಾಪುರ ಎಸ್ಪೇಟ್ ಅಡ್ಡಗೆ ದಾಳಿ ಅಂದಾರ್ ಬಾಹರ್ ಆಡುತ್ತಿದ್ದ 3ಜನರ ಬಂಧನ ಉಳಿದ ಆರೋಪಿಗಳು ಪರಾರಿ ಪ್ರಕರಣ ದಾಖಲು ಚಂದ್ರಕಲಾ ಮ ಪತ್ತಾರ ಪಿಎಸ್ ಐ ಕುಂದಾಪುರ ಗ್ರಾಮಾಂತರ ಪೊಲೀಸ್ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 23:30 ಗಂಟೆಗೆ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೂನಿ ಹತ್ತಿರದ ಸರಕಾರಿ ಹಾಡಿಯಲ್ಲಿ ಎಂಬಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ

ದಿನಾಂಕ 21/12/2025 ರಂದು 00-10 ಗಂಟೆಗೆ ದಾಳಿ ನಡೆಸಿ 1) ರಾಕೇಶ್ (24) 2) ಮ್ಯಾಕ್ಸಿ ರೋಶನ್ (39) 3) ಸತೀಶ್ (37) ಎಂಬ ಮೂವರನ್ನು ವಶಕ್ಕೆ ಪಡೆದಿದ್ದು, ಪ್ರಕಾಶ , ರಾಜೇಶ್ ಮತ್ತು ಸುಜನ್ ಎಂಬವರು ಓಡಿ ಹೋಗಿರುತ್ತಾರೆ.

ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಹಣ 4,450/- ರೂಪಾಯಿ, 2) ಇಸ್ಪೀಟ್ ಎಲೆಗಳು 52 3) ಹಳೆಯ ನ್ಯೂಸ್ ಪೇಪರ್ ನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡು, ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ
Leave a comment