ಹೊಸದಿಲ್ಲಿ : ರಿಸರ್ವೇಷನ್ ಚಾರ್ಟ್ ಸಮಯವನ್ನು ಪರಿಷ್ಕರಿಸಿದ ಭಾರತೀಯ ರೈಲ್ವೆ ಮಂಡಳಿ ಇದರಿಂದ ಕೊನೆ ಕ್ಷಣದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆ ಮತ್ತು ಗೊಂದಲ ಇನ್ನು ಮುಂದೆ ಇಲ್ಲ ರೈಲು ಹೊರಡುವ 10 ಗಂಟೆಗಳ ಮುಂಚಿತವಾಗಿ ತಮ್ಮ ರಿಸರ್ವ್ ಆದ ಟಿಕೆಟ್ ಸ್ಥಿತಿಯನ್ನು ತಿಳಿದುಕೊಳ್ಳಲು ಅವಕಾಶ ಪ್ರಯಾಣಿಕರು ಇನ್ನು ಮುಂದೆ ರೈಲು ಹೊರಡುವ 10 ಗಂಟೆಗಳ ಮುಂಚಿತವಾಗಿ ತಮ್ಮ ರಿಸರ್ವ್ ಆದ ಟಿಕೆಟ್ ಸ್ಟೇಟಸ್ ತಿಳಿಯಬಹುದಾಗಿದೆ.
ಭಾರತೀಯ ರೈಲ್ವೆ ಮಂಡಳಿಯು ರಿಸರ್ವೇಷನ್ ಚಾರ್ಟ್ ಸಮಯವನ್ನು ಪರಿಷ್ಕರಿಸುವ ಮೂಲಕ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರು ಇನ್ನು ಮುಂದೆ ರೈಲು ಹೊರಡುವ 10 ಗಂಟೆಗಳ ಮುಂಚಿತವಾಗಿ ತಮ್ಮ ರಿಸರ್ವ್ ಆದ ಟಿಕೆಟ್ ಸ್ಟೇಟಸ್ ತಿಳಿಯಬಹುದಾಗಿದೆ. ಹಾಲಿ ಇರುವ ವ್ಯವಸ್ಥೆಯಲ್ಲಿ ರಿಸರ್ವೇಷನ್ ಚಾರ್ಟ್ಗಳನ್ನು ನಾಲ್ಕು ಗಂಟೆ ಮುಂಚಿತವಾಗಿ ಸಿದ್ಧಪಡಿಸಲಾಗುತ್ತಿತ್ತು.
ಇದರಿಂದ ಕೊನೆ ಕ್ಷಣದಲ್ಲಿ ಪ್ರಯಾಣಿಕರಿಗೆ ಅನಾನುಕೂಲತೆ ಮತ್ತು ಗೊಂದಲ ಉಂಟಾಗುತ್ತಿತ್ತು. ಅದರಲ್ಲೂ ವೇಟಿಂಗ್ ಲಿಸ್ಟ್ನಲ್ಲಿದ್ದವರು, ಆರ್ಎಸಿ ಇದ್ದವರು ಕೊನೆ ಕ್ಷಣದವರೆಗೂ ಗೊಂದಲದಲ್ಲಿ ಇರುವಂತಾಗುತ್ತಿತ್ತು. ಅದನ್ನು ತಪ್ಪಿಸುವ ಸಲುವಾಗಿ ರೈಲು ಹೊರಡುವ 10 ಗಂಟೆ ಮೊದಲೇ ಚಾರ್ಟ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ಹೊರಡುವ ರೈಲುಗಳ ಮೊದಲ ರಿಸರ್ವೇಷನ್ ಚಾರ್ಟ್ ಅನ್ನು ಹಿಂದಿನ ರಾತ್ರಿ 8 ಗಂಟೆ ಹೊತ್ತಿಗೆ ಸಿದ್ಧಪಡಿಸಲಾಗುತ್ತದೆ.
ಮಧ್ಯಾಹ್ನ 2.01ರಿಂದ ರಾತ್ರಿ 11.59ರವರೆಗೆ ಮತ್ತು ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಹೊರಡುವ ರೈಲುಗಳ ಚಾರ್ಟ್ಅನ್ನು 10 ಗಂಟೆಗಳ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ. ಈ ಹೊಸ ಚಾರ್ಟ್ ಸಿದ್ಧಪಡಿಸುವ ವೇಳಾಪಟ್ಟಿಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ರೈಲ್ವೆ ಮಂಡಳಿಯು ವಲಯ ವಿಭಾಗಗಳಿಗೆ ಸೂಚಿಸಿದೆ.
ರೈಲ್ವೇ ಪ್ರಯಾಣಿಕರೇ ಗಮನಿಸಿ, ರಾಜ್ಯದಲ್ಲಿ 11 ರೈಲು ರದ್ದು, 21 ರೈಲು ಸೇವೆ ವ್ಯತ್ಯಯ, ಯಾವಾಗಿಂದ? ಟಿಕೆಟ್ಗೆ ಮಾತ್ರ ಹಣ ಬಳಕೆ ”ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್ಸಿಟಿಸಿ) ಇ-ವ್ಯಾಲೆಟ್ನಲ್ಲಿ ಹಣ ಜಮೆ ಮಾಡುವ ಜನರು ಅದನ್ನು ಟಿಕೆಟ್ ಖರೀದಿಸಲು ಮಾತ್ರ ಬಳಸಬಹುದೇ ಹೊರತು ಹಿಂಪಡೆಯಲು ಸಾಧ್ಯವಿಲ್ಲ. ಇ-ವ್ಯಾಲೆಟ್ ಖಾತೆಯನ್ನು ಬಂದ್ ಮಾಡಿದಲ್ಲಿ ಮಾತ್ರವೇ ಬಳಕೆದಾರರ ಬ್ಯಾಂಕ್ ಖಾತೆಗೆ ಉಳಿಕೆ ಹಣವನ್ನು ಹಿಂತಿರುಗಿಸಲಾಗುತ್ತದೆ,” ಎಂದು ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸಂಸದ ಜನಾರ್ಧನ ಸಿಂಗ್ ಸಿಗ್ರಿವಾಲ್ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಬುಧವಾರ ಲಿಖಿತ ಉತ್ತರ ನೀಡಿರುವ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ”ಐಆರ್ಸಿಟಿಸಿ ಇ-ವ್ಯಾಲೆಟ್ನಲ್ಲಿ ಠೇವಣಿ ಇರಿಸಿದ ಹಣ ದೀರ್ಘಕಾಲ ಲಾಕ್ ಆಗದೇ ಜನರು ಅದನ್ನು ಬೇರೆ ಉದ್ದೇಶಕ್ಕೆ ಬಳಸಬಹುದಾಗಿದೆ.
ಹೀಗಾಗಿ, ವ್ಯಾಲೆಟ್ನಲ್ಲಿರುವ ಹಣವನ್ನು ಬಳಕೆದಾರರ ಖಾತೆಗಳಿಗೆ ಹಿಂತಿರುಗಿಸುವ ಯಾವುದಾದರೂ ಪ್ರಸ್ತಾವ ಸರಕಾರದ ಮುಂದಿದೆಯೇ?” ಎಂದು ಜನಾರ್ಧನ ಸಿಂಗ್ ಪ್ರಶ್ನೆ ಕೇಳಿದ್ದರು. ಇದಕ್ಕೆ ರೈಲ್ವೆ ಸಚಿವರು, ”ಐಆರ್ಸಿಟಿಸಿಯ ಇ-ವ್ಯಾಲೆಟ್ ಖಾತೆಯು ಕ್ಲೋಸ್ಡ್ ಸಿಸ್ಟಮ್ ಪಿಪಿಐ (ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್) ವರ್ಗದ ಖಾತೆಯ ಅಡಿಯಲ್ಲಿ ಬರುತ್ತದೆ.
ಆರ್ಬಿಐ ಮಾರ್ಗಸೂಚಿಗಳ ಅನುಸಾರ, ಯಾವುದೇ ಸಂಸ್ಥೆಯಿಂದ ನೀಡಲಾದ ಕ್ಲೋಸ್ಡ್ ಸಿಸ್ಟಮ್ ಪಿಪಿಐ ಖಾತೆಯು ಆ ಸಂಸ್ಥೆಯಿಂದ ಮಾತ್ರ ಸರಕು ಮತ್ತು ಸೇವೆಗಳನ್ನು ಖರೀದಿಸಲು ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ, ಅಂತಹ ಖಾತೆಗಳಿಂದ ನಗದು ಹಿಂಪಡೆಯುವಿಕೆಯನ್ನು ಅನುಮತಿಸುವುದಿಲ್ಲ. ಈ ಖಾತೆಯಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ರೈಲು ಟಿಕೆಟ್ಗಳ ಖರೀದಿಗೆ ಮಾತ್ರ ಬಳಸಬಹುದು,” ಎಂದು ಸ್ಪಷ್ಟನೆ ನೀಡಿದರು.”

Leave a comment