ಮಂಗಳೂರು : ಜ.5ರಿಂದ 7ರ ವರೆಗೆ ಮಾಂಸಾಹಾರಿ ಪ್ರಾಣಿಗಳ ಚಿಹ್ನೆ ಸಮೀಕ್ಷೆ 

24

ಬೆಳ್ತಂಗಡಿ : ರಾಷ್ಟ್ರೀಯ ಪ್ರಾಣಿ ಹುಲಿಯ ಸಂತತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿ ಕಾರ್ಯದ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಗಣತಿಗೆ ಅಗತ್ಯವಾದ ತರಬೇತಿಯನ್ನು ಸಿಬ್ಬಂದಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಚೇರಿಯಲ್ಲಿ ನೀಡಲಾಗಿದೆ.

ಈ ವೇಳೆ ಹುಲಿ ಕಂಡರೂ ಅದನ್ನು ಅಧಿಕೃತವಾಗಿ ಘೋಷಣೆ ಮಾಡುವಂತಿಲ್ಲ. ಮಾಹಿತಿಯನ್ನು ಟೈಗರ್‌ ಅಥಾರಿಟಿ ಆಫ್‌ ಇಂಡಿಯಾಕ್ಕೆ ರವಾನಿಸಲಾಗುತ್ತದೆ. ಪ್ರತಿದಿನ ಐದು ಕಿ.ಮೀ.ನಂತೆ 15 ಕಿ.ಮೀ. ಕಾಡಿನಲ್ಲಿ ಸುತ್ತಾಡಿ ಹುಲಿ, ಚಿರತೆ, ಆನೆ, ಕಾಡುಕೋಣ, ಕಾಡು ಹಂದಿ, ಕಡವೆ, ಜಿಂಕೆ ಮುಂತಾದ ವನ್ಯ ಜೀವಿಗಳನ್ನು ಶೋಧಿಸಬೇಕು ಕ್ಯಾಮರಾ ಟ್ರ್ಯಾಕ್‌ ಮತ್ತು ಎಐ ತಂತ್ರಜ್ಞಾನ ಬಳಸಿ ಹುಲಿ ಸಂಚಾರ ಹಾಗೂ ಪರಿಸರದ ಒಟ್ಟು ವ್ಯವಸ್ಥೆಯ ನಿಖರ ಮಾಹಿತಿ ಸಂಗ್ರಹಿಸಲಾಗುತ್ತದೆ.

ಮಂಗಳೂರು ವೃತ್ತದಲ್ಲಿ ಮೂರು ವಿಭಾಗಗಳಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಜ.9ರಿಂದ 12, ಕುಂದಾಪುರ ವಿಭಾಗದಲ್ಲಿ ಜ.15ರಿಂದ 18, ಮಂಗಳೂರು ವಿಭಾಗದಲ್ಲಿ ಜ.21ರಿಂದ 24ರ ವರೆಗೆ ಹುಲಿಗಣತಿ ನಡೆಯಲಿದೆ. ಇದರ ಜತೆಗೆ ಇತರ ವನ್ಯ ಜೀವಿಗಳ ಗಣತಿಯೂ ನಡೆಯಲಿದೆ. ಈ ವಿಭಾಗಗಳಲ್ಲಿ ಜ.5ರಿಂದ 7ರ ವರೆಗೆ ಮಾಂಸಾಹಾರಿ ಪ್ರಾಣಿಗಳ ಚಿಹ್ನೆ ಸಮೀಕ್ಷೆ ನಡೆಯಲಿದೆ.

ಎಲ್ಲ ಕಾಡುಪ್ರಾಣಿಗಳ ಗಣತಿ: ಈ ಕಾರ್ಯಕ್ಕೆ ಹುಲಿಗಣತಿ ಎಂಬ ಹೆಸರಿದ್ದರೂ ಎಲ್ಲ ಬಗೆಯ ವನ್ಯಜೀವಿಗಳ ಗಣತಿಯನ್ನು ಮಾಡಲಾಗುತ್ತದೆ. ಈ ವೇಳೆ ಹುಲಿ ಕಂಡರೂ ಅದನ್ನು ಅಧಿಕೃತವಾಗಿ ಘೋಷಣೆ ಮಾಡುವಂತಿಲ್ಲ. ಮಾಹಿತಿಯನ್ನು ಟೈಗರ್‌ ಅಥಾರಿಟಿ ಆಫ್‌ ಇಂಡಿಯಾಕ್ಕೆ ರವಾನಿಸಲಾಗುತ್ತದೆ.

ಒಂದೇ ಹುಲಿ ಒಂದಕ್ಕಿಂತ ಹೆಚ್ಚು ಬಾರಿ ವಿಭಾಗದ ಬೇರೆಲ್ಲದರೂ ಕಂಡಿರುವ ಸಾಧ್ಯತೆ ಇರುವುದರಿಂದ ಹೆಚ್ಚು ಬಾರಿ ಗಣತಿಗೆ ಒಳಗಾಗುವುದನ್ನು ತಡೆಯಲು ಈ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಸಾಕಷ್ಟು ಪರಾಮರ್ಶೆ ನಡೆದ ಬಳಿಕವೇ ಅಂತಿಮ ಅಂಕಿ ಅಂಶವನ್ನು ಅಥಾರಿಟಿಯವರು ಪ್ರಕಟಿಸುತ್ತಾರೆ.

ತಂಡ ರಚನೆ: ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಹಾಗೂ ಸ್ಥಳೀಯ ವ್ಯಕ್ತಿ ಸೇರಿದಂತೆ 5 ಜನರ ತಂಡ, ಗುರುತಿಸಲಾದ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಗಣತಿ ಮಾಡುತ್ತಾರೆ. ಪ್ರತಿದಿನ ಐದು ಕಿ.ಮೀ.ನಂತೆ 15 ಕಿ.ಮೀ. ಕಾಡಿನಲ್ಲಿ ಸುತ್ತಾಡಿ ಹುಲಿ, ಚಿರತೆ, ಆನೆ, ಕಾಡುಕೋಣ, ಕಾಡು ಹಂದಿ, ಕಡವೆ, ಜಿಂಕೆ ಮುಂತಾದ ವನ್ಯ ಜೀವಿಗಳನ್ನು ಶೋಧಿಸಬೇಕು. ಈ ವೇಳೆ ಗೋಚರಿಸಿದ ಪ್ರಾಣಿಗಳ ಮಾಹಿತಿಯನ್ನು ಸ್ಥಳದಲ್ಲೇ ಆ್ಯಪ್‌ ಮೂಲಕ ಅಪ್ಲೋಡ್‌ ಮಾಡಬೇಕು.

ನೇರ ವೀಕ್ಷಣೆ ಮುಗಿದ ಬಳಿಕ ಪ್ರಾಣಿಗಳ ಹೆಜ್ಜೆ ಗುರುತು, ಮರದ ಮೇಲೆ ಇರಬಹುದಾದ ಪರಚಿದ ಕುರುಹುಗಳು, ಪ್ರಾಣಿಗಳ ಹಿಕ್ಕೆ, ಪ್ರಾಣಿಗಳು ತಂಗಿರಬಹುದಾದ ಸ್ಥಳ, ಹುಲಿ, ಚಿರತೆ ಬೇಟೆಯಾಡಿ ತಿಂದುಳಿದ ಪ್ರಾಣಿಗಳ ಅವಶೇಷಗಳನ್ನು ಪತ್ತೆ ಹಚ್ಚಿ ಫೋಟೋ ತೆಗೆದಿಡಲಾಗುತ್ತದೆ. ಅತ್ಯಾಧುನಿಕ ಗಣತಿ ವ್ಯವಸ್ಥೆ: ಅರಣ್ಯ ಇಲಾಖೆಯವರು ಗಣತಿಗೆ ಪೂರ್ವಭಾವಿಯಾಗಿ ವಲಯವಾರು ಮಟ್ಟದಿಂದ ಪ್ರದೇಶಗಳನ್ನು ಗುರುತಿಸಿ ಐಸಿಟಿ ಸೆಲ್‌ಗೆ ಕಳುಹಿಸುತ್ತಾರೆ. ಸೆಲ್‌ನವರು ಅದನ್ನು ಅಧ್ಯಯನ ಮಾಡಿ ಮ್ಯಾಪ್‌ ಮಾಡಿ ಕಳುಹಿಸುತ್ತಾರೆ.

ಅದರ ಪ್ರಕಾರ ಟ್ರಾನ್ಸ್ಯಾಕ್ಟ್ ಲೈನ್‌ಗಳನ್ನು ಗುರುತಿಸಲಾಗುತ್ತದೆ. ಆ ವ್ಯಾಪ್ತಿಯಲ್ಲಿಅವರು ತಿರುಗಾಡಬೇಕು. ಅವರ ಪೂರ್ತಿ ಶೋಧ ಲೊಕೇಶನ್‌ ಮೂಲಕ ದಾಖಲಾಗುತ್ತದೆ. ಅವರು ಮೊಬೈಲ್‌ ಫೋನ್‌ ಜತೆಗೆ ಅರಣ್ಯ ಪ್ರವೇಶಿಸಬೇಕು, ಗಣತಿ ಕಾರ್ಯ ಆರಂಭದ ಜಾಗದಿಂದಲೇ ಅವರ ಪ್ರತಿ ಹೆಜ್ಜೆಯೂ ದಾಖಲಾಗುತ್ತದೆ. ಕ್ಯಾಮರಾ ಟ್ರ್ಯಾಕ್‌ ಮತ್ತು ಎಐ ತಂತ್ರಜ್ಞಾನ ಬಳಸಿ ಹುಲಿ ಸಂಚಾರ ಹಾಗೂ ಪರಿಸರದ ಒಟ್ಟು ವ್ಯವಸ್ಥೆಯ ನಿಖರ ಮಾಹಿತಿ ಸಂಗ್ರಹಿಸಲಾಗುತ್ತದೆ.

ಹಿಂದೆ ಸಿಬ್ಬಂದಿ ಕಾಡಿಗೆ ತೆರಳಿ ತಾವು ಕಂಡ ಮಾಹಿತಿಯನ್ನು ಕಾಡಿನಿಂದ ಮರಳಿದ ಬಳಿಕ ಪುಸ್ತಕದಲ್ಲಿ ದಾಖಲಿಸಿ ವರದಿ ನೀಡಬೇಕಾಗಿತ್ತು. 120ಕ್ಕೂ ಅಧಿಕ ಸಿಬ್ಬಂದಿಗೆ ತರಬೇತಿ ಕುದುರೆಮುಖದಲ್ಲಿ 120ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರತಿಯೊಂದು ವಲಯದ ಎಲ್ಲ ಸಿಬ್ಬಂದಿಗೂ ಎಲ್ಲ ವಿಧಾನಗಳ ಮಾಹಿತಿ ನೀಡಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಹಳಷ್ಟಿದೆ.

ಈ ಬಗ್ಗೆಯೂ ಚರ್ಚೆ ನಡೆದಿದ್ದು, ಸ್ವಯಂ ಸೇವಕರನ್ನು ಒದಗಿಸುವ ಭರವಸೆಯನ್ನು ನೀಡಲಾಗಿದೆ. ಇಲಾಖೆ ಸಿಬ್ಬಂದಿಗೆ ಹುಲಿಗಣತಿಗೆ ಅಗತ್ಯವಾದ ಪ್ರಥಮ ಹಂತದ ತರಬೇತಿಯನ್ನು ಈಗಾಗಲೇ ನೀಡಲಾಗಿದೆ. ಅರಣ್ಯ ಇಲಾಖೆಯ ಉಪವಲಯಗಳಲ್ಲಿ ಆಯಾ ವಲಯಗಳ ಕುರಿತು ಇನ್ನೊಂದು ಹಂತದ ತರಬೇತಿ ನಡೆಯಲಿದೆ. ಗಣತಿಗೆ ಸಿಬ್ಬಂದಿ ಕೊರತೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ ಶಿವರಾಮ ಬಾಬು, ಡಿಎಫ್‌ಒ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಾರ್ಕಳ ವಿಭಾಗ.”

Leave a comment

Leave a Reply

Your email address will not be published. Required fields are marked *

Related Articles

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...

ಪೂರ್ಣಿಮಾ ಶೆಟ್ಟಿಗೆ ‘ಮಾನವ ಹಕ್ಕುಗಳ ಸಬಲೀಕರಣ ಮಾನವೀಯ ಶ್ರೇಷ್ಠತೆ’ ಪ್ರಶಸ್ತಿ ಗೌರವ

ಸಾಮಾಜಿಕ ಸೇವಾ ಕಾರ್ಯಕರ್ತೆ ಹಾಗೂ ‘ವಸುದೈವ ಕುಟುಂಬಕಂ’ ಎನ್‌ಜಿಒ ಸಂಸ್ಥೆಯ ಸಂಸ್ಥಾಪಕಿ ಪೂರ್ಣಿಮಾ ಶೆಟ್ಟಿ ಅವರಿಗೆ...