ರಾಜ್ಯಕ್ಕೂ ಬೇಕು ಸಾಗರ ಆ್ಯಂಬುಲೆನ್ಸ್‌ : ಮೀನುಗಾರಿಕೆ ಸಚಿವ ಮಂಕಾಳ ವೈದ್ಯ

51

ಅಂಕೋಲಾ : ಕೇರಳ ಸರಕಾರ ಸಾಗರ ಆ್ಯಂಬುಲೆನ್ಸ್‌ ಜಾರಿಗೆ ತಂದ ನಂತರ ರಾಜ್ಯಕ್ಕೂ ಬೇಕು ಎಂದು ಸಚಿವರು ಆಗ್ರಹಿಸಿದ್ದರು ರಾಜ್ಯದಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳು ಸಮುದ್ರ ತೀರಗಳನ್ನು ಹೊಂದಿವೆ. ಈ ಆ್ಯಂಬುಲೆನ್ಸ್‌ನಲ್ಲಿ ಒಂದೇ ಸಮಯದಲ್ಲಿ ಐವರಿಗೆ ಆರೈಕೆ ಮತ್ತು ಹತ್ತು ಜನರಿಗೆ ಪ್ರಾಥಮ ಚಿಕಿತ್ಸೆ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಇರುತ್ತದೆ.

ಕರ್ನಾಟಕದ ಮೂರು ಜಿಲ್ಲೆಗಳ ಬೇಡಿಕೆಗಳಲ್ಲಿ ಒಂದಾಗಿರುವ ಸಾಗರ ಆ್ಯಂಬುಲೆನ್ಸ್‌ ಮುಂದಿನ ಮಳೆಗಾಲದ ಒಳಗೆ ಬರುವ ಆಶಾಭಾವ ಮೂಡಿದೆ. ಸ್ವತಃ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ‘ಮುಂದಿನ ಮಳೆಗಾಲದ ಒಳಗಾಗಿ ಸಾಗರ ಆ್ಯಂಬುಲೆನ್ಸ್‌ ಬರಲಿದೆ’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಕೇರಳ ಸರಕಾರ ಸಾಗರ ಆ್ಯಂಬುಲೆನ್ಸ್‌ ಜಾರಿಗೆ ತಂದ ನಂತರ ರಾಜ್ಯಕ್ಕೂ ಬೇಕು ಎಂದು ಸಚಿವರು ಆಗ್ರಹಿಸಿದ್ದರು. ಅದರಂತೆ ಈಗ ಮಂಗಳೂರಿನ ಬಂದರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಬಂದ ಸಂದರ್ಭದಲ್ಲಿ ಈ ಕುರಿತು ಹೇಳಿಕೆ ನೀಡಿರುವುದು ಮೀನುಗಾರರ ಹರ್ಷಕ್ಕೂ ಕಾರಣವಾಗಿದೆ.

ರಾಜ್ಯದಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳು ಸಮುದ್ರ ತೀರಗಳನ್ನು ಹೊಂದಿವೆ. ಸಾವಿರಾರು ಮೀನುಗಾರಿಕೆಗೆ ಬೋಟ್‌ಗಳು ಮೀನುಗಾರಿಕೆಗಾಗಿ ಪ್ರತಿನಿತ್ಯ ಆಳಸಮುದ್ರಕ್ಕೆ ತೆರಳುತ್ತವೆ. ಈ ಮೂರು ಜಿಲ್ಲೆಗಳಲ್ಲಿ ಪ್ರತಿವರ್ಷ ಸರಾಸರಿ 50 ಮೀನುಗಾರರು ವಿವಿಧ ಕಾರಣಗಳಿಂದಾಗಿ ಮೃತಪಡುತ್ತಿದ್ದಾರೆ. ಮೀನುಗಾರರ ಸಾವು ತಪ್ಪಿಸಲು ಸಾಗರ ಆ್ಯಂಬುಲೆನ್ಸ್‌ ಅವಶ್ಯಕತೆ ಇದೆ.

ಸಾಗರ ಆ್ಯಂಬುಲೆನ್ಸ್‌ ವಿಶೇಷತೆ: ಈ ಆ್ಯಂಬುಲೆನ್ಸ್‌ನಲ್ಲಿ ಒಂದೇ ಸಮಯದಲ್ಲಿ ಐವರಿಗೆ ಆರೈಕೆ ಮತ್ತು ಹತ್ತು ಜನರಿಗೆ ಪ್ರಾಥಮ ಚಿಕಿತ್ಸೆ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಇರುತ್ತದೆ. ಇದರಲ್ಲಿಅರೆ ವೈದ್ಯಕೀಯ ಸಿಬ್ಬಂದಿ, ತರಬೇತಿ ಪಡೆದ ಪಾರುಗಾಣಿಕಾ ದಳ, ಪೋರ್ಟ್‌ಬಲ್‌ ಶವಾಗಾರ ಮತ್ತು ಔಷಧಗಳು ಇರುತ್ತವೆ.

ರಾಜ್ಯದಲ್ಲಿಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಸಾವಿರಾರು ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಮುದ್ರದಲ್ಲಿಅವಘಡ ಸಂಭವಿಸಿದರೆ ಇನ್ನೊಂದು ಬೋಟ್‌ ಮೂಲಕ ತೀರಕ್ಕೆ ತರುವಷ್ಟರಲ್ಲಿ ಮೃತಪಡುವ ಸಾಧ್ಯತೆ ಇರುತ್ತದೆ.

ಆದರೆ, ಸಾಗರ ಆ್ಯಂಬುಲೆನ್ಸ್‌ ಅತಿವೇಗವಾಗಿ ತೆರಳುವುದರಿಂದ ಸ್ಥಳದಲ್ಲಿಯೇ ಔಷಧೋಪಚಾರಕ್ಕೆ ಸಹಾಯವಾಗಲಿದೆ. 320 ಕಿ.ಮೀ ಕರಾವಳಿ ತೀರ ಉತ್ತರ ಕನ್ನಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಒಟ್ಟು 320 ಕಿ.ಮೀ. ಕರಾವಳಿ ತೀರವಿದೆ. ಅದರಲ್ಲಿಉತ್ತರ ಕನ್ನಡ ಜಿಲ್ಲೆಯಲ್ಲಿಕಾರವಾರ, ಮುದಗಾ, ಬೇಲೆಕೇರಿ, ಮಂಜಗುಣಿ, ತದಡಿ, ಕುಮಟಾ, ಹೊನ್ನಾವರ, ಭಟ್ಕಳ ಹಾಗೇ ಉಡುಪಿ ಜಿಲ್ಲೆಯಲ್ಲಿಮಲ್ಪೆ, ಗಂಗೊಳ್ಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಮಂಗಳೂರು, ಹಂಗರಕಟ್ಟೆಯಲ್ಲಿಪ್ರಮುಖ ಬಂದರುಗಳಿವೆ.

ಬೋಟ್‌ನಲ್ಲಿಮೀನುಗಾರರು ತಮ್ಮ ಕರ್ತವ್ಯ ನಿರ್ವಹಿಸುವಾಗ ಸ್ವಲ್ಪ ಯಾಮಾರಿದರೂ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಿದೆ. ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಕಾರಣಗಳಿಂದ ಸಮುದ್ರದಲ್ಲಿಬೋಟ್‌ಗಳು ಮುಳುಗಡೆಯಾಗುವುದು ಅಥವಾ ಇತರೆ ಅವಘಡಗಳಿಗೆ ಒಳಗಾಗುವುದನ್ನು ಕಾಣುತ್ತೇವೆ. ಸಾಗರ ಆ್ಯಂಬುಲೆನ್ಸ್‌ ನಮ್ಮ ಬಹುವರ್ಷದ ಬೇಡಿಕೆಯಾಗಿದೆ ಎಂದಿದ್ದಾರೆ ಡಾ.ಹರಿಹರ ಹರಿಕಾಂತ, ಮೀನುಗಾರರ ಮುಖಂಡರು ಅಂಕೋಲಾ”

Leave a comment

Leave a Reply

Your email address will not be published. Required fields are marked *

Related Articles

ಮೂರು ವರ್ಷಗಳ ಬಳಿಕ ಇಂದು ಶೃಂಗೇರಿ ನೂತನ ಶಾಸಕರಾಗಿ ಡಿ ಎನ್ ಜೀವರಾಜ್ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಕೊನೆಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಇಂದು ಡಿ ಎನ್ ಜೀವರಾಜ್ ಪ್ರಮಾಣ ವಚನ...

ಶೃಂಗೇರಿ ಮರುಮತ ಎಣಿಕೆ ಪ್ರಕರಣ ಅಂಚೆ ಮತಗಳಲ್ಲಿ ಅಕ್ರಮ ಆರೋಪ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ  ಎಫ್ಐಆರ್ ದಾಖಲು

“ಚಿಕ್ಕಮಗಳೂರು ಶೃಂಗೇರಿ ಮತ ಎಣಿಕೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಅಂಚೆ ಮತಗಳಲ್ಲಿ ಅಕ್ರಮ ಆರೋಪದ...

52 ಮತಗಳಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು, ನೂತನ ಶಾಸಕರಾಗಿ ಘೋಷಣೆ..

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಕಾಂಗ್ರೆಸ್ ಶಾಸಕ...

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು, ಅಧಿಕೃತ ಆದೇಶ ಯೋಗೇಶ್ ಗೌಡ ಕೊಲೆ ಪ್ರಕರಣ ಶಿಕ್ಷೆ ಹಿನ್ನಲೆ

ಬೆಂಗಳೂರು: ಧಾರವಾಡದ ಬಿಜೆಪಿ ಜಿ.ಪಂ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ...