ಕಾಪು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಕಲಿ ಲೆಟರ್ ಹೆಡ್ ಸೀಲು ಸಹಿ ಬಳಸಿ ದಾಖಲೆ ದುರ್ಬಳಕೆ ಪ್ರಕರಣ ದಾಖಲು

48

ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಲೆಟರ್ ಹೆಡ್ ಸೀಲು ಸಹಿ ದುರ್ಬಳಕೆ ದುರ್ಬಳಕೆ ಪ್ರಕರಣ ದಾಖಲು ಶ್ರೀಮತಿ ರಜನಿ  ಪಂಚಾಯತ್‌ ಅಭಿವೃದ್ದಿ ಅಧಿಕಾರಿ ತೆಂಕ ಗ್ರಾಮ ಪಂಚಾಯತ್‌, ಕಾಪು ತಾಲೂಕು ಇವರು ದಿನಾಂಕ 30/10/2025 ರಂದು ಪಿರ್ಯಾದಿದಾರರಿಗೆ ಸಾರ್ವಜನಿಕರು ತೆಂಕ ಗ್ರಾಮದ ಪಂಚಾಯತ್‌ ಅಭಿವೃದ್ದಿ ಅಧಿಕಾರಿಯವರ ಸಹಿ ಇರುವ ದಾಖಲೆ ದುರುಪಯೋಗ ಆಗಿದೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಸಂಶಯಗೊಂಡು ತೆಂಕ ಗ್ರಾಮ ಪಂಚಾಯತ್‌ ಕಛೇರಿಯಿಂದ ಮೂಲ್ಕಿ ಉಪ-ನೊಂದಣಾಧಿಕಾರಿಯವರ ಕಛೇರಿಗೆ ಕಳುಹಿಸಿದ ದಾಖಲೆಗಳ ಬಗ್ಗೆ ಮೂಲ್ಕಿ ಉಪ-ನೊಂದಣಾಧಿಕಾರಿಯವರ ಕಛೇರಿಯಲ್ಲಿ ದೂರುದಾರರು ಪರಿಶೀಲಿಸಲಾಗಿ
ತೆಂ.ಗ್ರಾ.ಪಂ 003/2025-26 ನಂಬ್ರದ ದಿನಾಂಕ ನಮೂದು ಇಲ್ಲದ ತೆಂಕ ಗ್ರಾಮ ಪಂಚಾಯತ್‌ನ ಲೆಟರ್‌ ಹೆಡ್‌ನ ದೃಡಪತ್ರದ ಜೆರಾಕ್ಸ್‌ ಪ್ರತಿ ಇದ್ದು ಅದರಲ್ಲಿ “ ಉಡುಪಿ ಜಿಲ್ಲೆ ಕಾಪು ತಾಲೂಕು ತೆಂಕ ಗ್ರಾಮ ಪಂಚಾಯತ್‌ ವ್ಯಾಪ್ತಿಯ 7 ನೇ ವಾರ್ಡಿನ ಸರ್ವೇ ನಂಬ್ರ 56/2 ರಲ್ಲಿ ಗಿರಿಯಪ್ಪ ಕೋಟ್ಯಾನ್‌ ಇವರ ಹೆಸರಿನಲ್ಲಿ ಕಟ್ಟಡ ನಂಬ್ರ 7-5 (152600304100110964) ರಲ್ಲಿರುವ ವಾಸ್ತವ್ಯದ ಕಟ್ಟಡವು ಸುಮಾರು 800 ಚದರ ಅಡಿಯ ಹಂಚಿನ ಕಟ್ಟಡವಾಗಿದ್ದು,ಸದ್ರಿ ಕಟ್ಟಡದ ನೆಲಕ್ಕೆ ಟೈಲ್ಸ್‌ ಅಳವಡಿಸಲಾಗಿರುತ್ತದೆ ಎಂದು ಈ ಮೂಲಕ ದೃಡಪಡಿಸಲಾಗಿದೆ “ ಎಂಬುದಾಗಿ ನಮೂದು ಇದ್ದು, ಸದ್ರಿ ದೃಡಪತ್ರದಲ್ಲಿ ತೆಂಕ ಗ್ರಾಮ ಪಂಚಾಯತ್‌ನ ಲೆಟರ್‌ ಹೆಡ್‌ನಲ್ಲಿ ಪಂಚಾಯತ್‌ ಅಭಿವೃದ್ದಿ ಅಧಿಕಾರಿಯವರ ಸೀಲು ಹಾಗೂ ದೂರುದಾರರ ನಕಲಿ ಸಹಿ ಇರುವುದು ಕಂಡುಬಂದಿದ್ದು, ನಮೂನೆ 11 ಬಿ ಯು ಈ ವರ್ಷ ಜೂನ್‌ ತಿಂಗಳಿನಿಂದ ಬಂದ್‌ ಆಗಿ ಈ ವರ್ಷ ಡಿಸೆಂಬರ್‌ 1 ನೇ ತಾರೀಕಿನಂದು ಓಪನ್‌ ಆಗಿದ್ದು,
ಆ ಮಧ್ಯದಲ್ಲಿ ಯಾರೋ ಯಾವುದೋ ದುರುದ್ದೇಶದಿಂದ ತೆಂಕ ಗ್ರಾಮ ಪಂಚಾಯತ್‌ ಕಛೇರಿಯ ಲೆಟರ್‌ ಹೆಡ್‌, ಸೀಲನ್ನು ದುರ್ಬಳಕೆ ಮಾಡಿ, ಪಿರ್ಯಾದಿದಾರರ ನಕಲಿ ಸಹಿಯನ್ನು ಮಾಡಿ ಉಪ ನೊಂದಣಿ ಕಛೇರಿ ಮೂಲ್ಕಿ ಇಲ್ಲಿಗೆ ನಮೂನೆ 11 ಬಿ ರ ಬದಲಿಗೆ ದೃಡಪತ್ರ ನೀಡಿ ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.”

Leave a comment

Leave a Reply

Your email address will not be published. Required fields are marked *

Related Articles

ಪ್ರೀತಿ ನಾಟಕವಾಡಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಕೈಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

“ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ,...

ತಾಯಿಯ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಮಗಳು ಪ್ರಕರಣ ದಾಖಲು

“ಬೆಂಗಳೂರು: ತಾಯಿಯ ಒಪ್ಪಿಗೆ ಇಲ್ಲದೆ ಆಕೆಯ ಖಾಸಗಿ ಪೋಟೋಗಳನ್ನು ತನ್ನ ಲವರ್ ಗೆ ಕಳುಹಿಸಿದ 23...

10ನೇ ತರಗತಿ ಬಾಲಕಿ ಗರ್ಭಿಣಿ,ಪೋಕ್ಸೊ ಪ್ರಕರಣದಾಖಲು ಆರೋಪಿ ಬಂಧನ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ....

ಅನ್ಯಕೋಮಿನ  ಗಂಡ ಹೆಂಡತಿ ಜಗಳ ನಿಲ್ಲಿಸಲು ಹೋದ ನೆರೆಮನೆಯ ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ

ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ...