ಭಾರತೀಯರು ಸೇರಿದಂತೆ 171 ಅಕ್ರಮ ರೈಡರ್ ಗಳ ಬಂಧನ : ಅಕ್ರಮ ವಲಸಿಗರ ಮೇಲೆ ಯುಕೆ ಸರ್ಕಾರ ದಾಳಿ

28

ಲಂಡನ್:‌ ಯುಕೆಯಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಕಡಿವಾಣಕ್ಕೆ ‘ಆಪರೇಷನ್ ಈಕ್ವಲೈಸ್’ ಬ್ರಿಟನ್‌ ಸರ್ಕಾರ ನವೆಂಬರ್‌ ನಲ್ಲಿ ನಡೆಸಿದ ವ್ಯಾಪಕ ಕಾರ್ಚರಣೆಯಲ್ಲಿ ಭಾರತೀಯರು, ಬಾಂಗ್ಲಾದ ಪ್ರಜೆಗಳು , ಚೀನಿಯರು ಸೇರಿದಂತೆ ಪುಡ್‌ ಡೆಲಿವರಿ ಮಾಡುತ್ತಿದ್ದ 171 ಅಕ್ರಮ ರೈಡರ್ ಗಳ ಬಂಧನ ಬಂಧಿತ ಅಕ್ರಮವಲಸಿಗರನ್ನು ತಮ್ಮ ದೇಶಗಳಿಗೆ ಗಡೀಪಾರು ಮಾಡುವುದಾಗಿ ಘೋಷಿಸಿದ ಬ್ರಿಟನ್‌ ಸರ್ಕಾರ ಅಕ್ರಮ ವಲಸಿಗರ ಮೇಲೆ ಯುಕೆ ಸರ್ಕಾರ ದಾಳಿ

ಯುಕೆಯಲ್ಲಿರುವ ಅಕ್ರಮ ವಲಸಿಗರ ಮೇಲೆ ಕಡಿವಾಣ ಹಾಕಲು ಕ್ರಮಗಳನ್ನು ಜರುಗಿಸುತ್ತಿರುವ ಯುಕೆ ಸರ್ಕಾರ ನಡೆಸಿರುವ ವ್ಯಾಪಕ ಕಾರ್ಯಚರಣೆಯಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಸುಮಾರು 171 ಡೆಲಿವರಿ ರೈಡರ್‌ಗಳನ್ನು ಬಂಧಿಸಿದ್ದಾರೆ.

ಇದರಲ್ಲಿ ಭಾರತೀಯರು ಸಹ ಸೇರಿದ್ದು, ಇವರನ್ನು ದೇಶದಿಂದ ಗಡಿಪಾರು ಮಾಡಲಿದ್ದೇವೆ ಎಂದು ಬ್ರಿಟಿಷ್‌ ಸರ್ಕಾರ ತಿಳಿಸಿದೆ. ಬ್ರಿಟನ್‌ನಲ್ಲಿ ʼಆಪರೇಷನ್ ಈಕ್ವಲೈಸ್ʼ ಕಳೆದ ತಿಂಗಳು, ಬ್ರಿಟನ್‌ನಾದ್ಯಂತ ವಲಸೆ ಜಾರಿ ಅಧಿಕಾರಿಗಳು ‘ಆಪರೇಷನ್ ಈಕ್ವಲೈಸ್’ ಎಂಬ ಕಾರ್ಯಾಚರಣೆಯನ್ನು ಏಳು ದಿನಗಳ ಕಾಲ ನಡೆಸಿದರು.

ಈ ಕಾರ್ಯಾಚರಣೆಯಲ್ಲಿ, ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ರೈಡರ್‌ಗಳ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮವಾಗಿ ಕೆಲಸ ಮಾಡುತ್ತಿದ್ದವರನ್ನು ಸ್ಥಳದಲ್ಲೇ ಬಂಧಿಸಿ, ಅವರ ದೇಶಗಳಿಗೆ ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಈ ಅಕ್ರಮ ಕೆಲಸಗಾರರಲ್ಲಿ ಭಾರತೀಯರು ಸೇರಿದಂತೆ ಬಾಂಗ್ಲಾದೇಶ ಮತ್ತು ಚೀನಾದವರು ಇದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿದ ಯುಕೆ ಗಡಿ ಭದ್ರತಾ ಸಚಿವ ಅಲೆಕ್ಸ್ ನಾರ್ರಿಸ್ ನೀವು ಈ ದೇಶದಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದರೆ, ನಿಮ್ಮನ್ನು ಬಂಧಿಸಿ ಗಡಿಪಾರು ಮಾಡಲಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಈ ಕಾರ್ಯಚರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರ ಬಂಧನ ಬ್ರಿಟಿಷ್‌ ಗೃಹ ಇಲಾಖೆ ಕಾರ್ಯಚರಣೆಯ ಕುರಿತು ವಿವರಿಸಿ ನ.17ರಂದು ಪೂರ್ವ ಲಂಡನ್‌ನ ನ್ಯೂಹ್ಯಾಮ್‌ನ ಹೈ ಸ್ಟ್ರೀಟ್‌ನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು,ಅಲ್ಲಿ ಬಾಂಗ್ಲಾದೇಶ ಮತ್ತು ಭಾರತೀಯ ರಾಷ್ಟ್ರೀಯತೆ ಹೊಂದಿದ್ದು, ಅಕ್ರಮವಾಗಿ ಕೆಲಸಮಾಡುತ್ತಿದ್ದ 4 ರೈಡರ್‌ಗಳನ್ನು ಅಕ್ರಮ ಕೆಲಸಕ್ಕಾಗಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ರೀತಿ ನ.25ರಂದು ಪೂರ್ವ ಇಂಗ್ಲೆಂಡ್‌ನ ನಾರ್ವಿಚ್ ನಗರ ಕೇಂದ್ರದಲ್ಲಿ ಕಾರ್ಯಾಚರಣೆ ನಡೆಸಿದ್ದು ಆಗ 3 ಭಾರತೀಯ ರೈಡರ್‌ಗಳನ್ನು ಬಂಧಿಸಲಾಗಿದೆ. ಇವರಲ್ಲಿ 2 ಗಡಿಪಾರು ಮಾಡಲು ಬಂಧಿಸಿಡಲಾಗಿದ್ದು, ಮೂರನೇ ವ್ಯಕ್ತಿಗೆ ಕಟ್ಟುನಿಟ್ಟಾದ ವಲಸೆ ಜಾಮೀನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ನಾರ್ರಿಸ್‌ ಫುಡ್ ಡೆಲಿವರಿ ಕಂಪನಿಗಳಾದ ಡೆಲಿವೆರೊ, ಜಸ್ಟ್‌ ಈಟ್‌, ಉಬರ್‌ ಈಟ್ಸ್‌ ನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಕ್ರಮ ಕೆಲಸವನ್ನು ತಡೆಯಲು ಕೈಗೊಂಡ ಕ್ರಮಗಳು ಹಾಗೂ ಮುಂದಿನ ಹಂತದ ಕಾರ್ಯಚರಣೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಅಮೆರಿಕ ಬಿಟ್ಟು ಹೋಗೋಕೆ ಫ್ರೀ ಫ್ಲೈಟ್ ಟಿಕೆಟ್, ಜೊತೆಗೆ 1000 ಡಾಲರ್‌ ಹಾಲಿಡೇ ಗಿಫ್ಟ್! ಅಕ್ರಮ ವಲಸಿಗರ ಕಡಿವಾಣಕ್ಕೆ ತೀವ್ರ ಕಾರ್ಯಚರಣೆ ಈ ಚರ್ಚೆಯಲ್ಲಿ, ಅಕ್ರಮ ಖಾತೆ ಹಂಚಿಕೆಯನ್ನು ತಡೆಯಲು ಕಂಪನಿಗಳು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಹೆಚ್ಚಿಸುವುದು ಮತ್ತು ಅಕ್ರಮ ಕೆಲಸದ ಹಾಟ್‌ಸ್ಪಾಟ್‌ಗಳನ್ನು ಪತ್ತೆಹಚ್ಚಲು ಆಶ್ರಯ ಹೋಟೆಲ್‌ಗಳ ಸ್ಥಳಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಅಪರಾಧಿಗಳು ಹಣ ಅಕ್ರಮ ವರ್ಗಾವಣೆಯಿಂದ ಹಿಡಿದು ಅಕ್ರಮ ಕೆಲಸದವರೆಗೆ ಗಂಭೀರ ಅಪರಾಧಗಳನ್ನು ಮರೆಮಾಡಲು ಹೈ ಸ್ಟ್ರೀಟ್‌ಗಳಲ್ಲಿರುವ ನಕಲಿ ಅಂಗಡಿಗಳನ್ನು ಬಳಸುತ್ತಿದ್ದಾರೆ. ಇದು ನಿಜವಾದ ವ್ಯಾಪಾರಿಗಳಿಗೆ ಹಾನಿಯುಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ಅದಕ್ಕಾಗಿಯೇ ಸರ್ಕಾರ ಈ ಅಪರಾಧಿಗಳು ಮತ್ತು ಅವರ ಕಪ್ಪು ಹಣವನ್ನು ನಿರಂತರವಾಗಿ ಬೆನ್ನಟ್ಟುತ್ತಿದೆ. ಕಳೆದ ವರ್ಷ 300 ಮಿಲಿಯನ್ ಪೌಂಡ್‌ಗಳಷ್ಟು ಅಪರಾಧ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಅನಗತ್ಯ ಅಂಗಡಿಗಳನ್ನು ನಿರ್ಬಂಧಿಸಲು ಮತ್ತು ಅವರ ಮುಖ್ಯ ಬೀದಿಗಳಲ್ಲಿ ಏನಿದೆ ಎಂಬುದರ ಮೇಲೆ ನಿಗಾ ವಹಿಸಲು ಅಧಿಕಾರಗಳನ್ನು ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ಯುಕೆಯಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳ ಇತ್ತಿಚಿನ ಸರ್ಕಾರದ ದತ್ತಾಂಶಗಳ ಪ್ರಕಾರ, ಕಳೆದ ವರ್ಷ ಅಕ್ರಮ ಕೆಲಸವನ್ನು ತಡೆಯಲು ನಡೆಸಿದ ಜಾರಿ ಕ್ರಮಗಳು ದಾಖಲೆ ಮಟ್ಟವನ್ನು ತಲುಪಿವೆ ಎಂದು ತಿಳಿದುಬಂದಿದೆ. 11 ಸಾವಿರಕ್ಕೂ ಹೆಚ್ಚು ಪರಿಶೀಲನೆಗಳು ಮತ್ತು 8 ಸಾವಿರ ಬಂಧನಗಳು ನಡೆದಿವೆ.

ಇದು ಕ್ರಮವಾಗಿ ಶೇಕಡಾ 51 ದಿಂದ ಶೇಕಡಾ 63 ರಷ್ಟು ಹೆಚ್ಚಳವಾಗಿದೆ. ಜುಲೈ 2024 ರಿಂದ ಯುಕೆಯಲ್ಲಿ ಉಳಿಯಲು ಯಾವುದೇ ಮಾನ್ಯತೆ ಇಲ್ಲದೆ ಇರುವ ಸುಮಾರು 50 ಸಾವಿರ ಜನರನ್ನು ದೇಶದಿಂದ ಗಡಿಪಾರು ಮಾಡಲಾಗಿದ್ದು, ಕಳೆದ 12 ತಿಂಗಳುಗಳಲ್ಲಿ ಅಕ್ರಮವಲಸಿಗರ ಬಂಧನಗಳು ಮತ್ತು ಶಿಕ್ಷೆಗಳು ಶೇಕಡಾ 33 ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.”

Leave a comment

Leave a Reply

Your email address will not be published. Required fields are marked *

Related Articles

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಸಂದರ್ಭದಲ್ಲಿ ಮೋದಿ ಸರಕಾರದ ನಿಲುವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದಂತಹ ಪರಿಸ್ಥಿತಿಯ ನಡುವೆ, ಹಿರಿಯ ಕಾಂಗ್ರೆಸ್ ನಾಯಕ...

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 74 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಟಿಎಂಸಿಯಲ್ಲಿ ಭುಗಿಲೆದ್ದ ಅಸಮಾಧಾನ

ಕೋಲ್ಕತ್ತಾ: ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ...

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ  ಸೇರಿದಂತೆ 40ಪ್ರಮುಖರು ಬಿಜೆಪಿಗೆ ಸೇರ್ಪಡೆ

“ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಂತೆಯೇ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ....

ಮಹಿಳೆಯರ ಬಗ್ಗೆ ಅಶ್ಲೀಲ ಹಾಡು ಹಾಡಿದ ರ‍್ಯಾಪರ್ ಬಾದ್‌ಶಾ ಹಣೆಗೆ ನೇರವಾಗಿ ‘ಗುಂಡು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ

“ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗ ಗಾಯಕ-ರ‍್ಯಾಪರ್ ಬಾದ್‌ಶಾ ಅವರ ಹರಿಯಾಣ ಭಾಷೆಯ ಹಾಡು ‘ಟಟೀರಿ’ ಸುತ್ತಲಿನ...