ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಮೊಬೈಲ್ ಫೋನ್ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಒಂದು ದಿಟ್ಟ ಕ್ರಮ ಕೈಗೊಂಡಿದೆ. ಭಾರತೀಯ ದೂರಸಂಪರ್ಕ ಸಚಿವಾಲಯವು, ದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಹೊಸ ಸ್ಮಾರ್ಟ್ಫೋನ್ನಲ್ಲಿ ಸರ್ಕಾರದ ‘ಸಂಚಾರ್ ಸಾಥಿ’ ಎಂಬ ಸೈಬರ್ ಸುರಕ್ಷತಾ ಅಪ್ಲಿಕೇಶನ್ ಅನ್ನು ಪ್ರಿ ಇನ್ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಸ್ಮಾರ್ಟ್ಫೋನ್ಗಳಲ್ಲಿ ಸರ್ಕಾರದ ‘ಸಂಚಾರ್ ಸಾಥಿ’ ಆ್ಯಪ್ ಇನ್ನು ಮುಂದೆ ಕಡ್ಡಾಯ ಈ ನಿಯಮವನ್ನು ಜಾರಿಗೆ ತರಲು ಮೊಬೈಲ್ ತಯಾರಿಕಾ ಕಂಪನಿಗಳಿಗೆ 90 ದಿನಗಳ ಗಡುವು ನೀಡಿದೆ ಸರಕಾರ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ತಮ್ಮ ಫೋನ್ಗಳಿಂದ ಅನ್ಇನ್ಸ್ಟಾಲ್ ಮಾಡಲು ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ
ಈಗಾಗಲೇ ಮಾರುಕಟ್ಟೆಯಲ್ಲಿರುವ ಫೋನ್ಗಳಿಗೂ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಈ ಆ್ಯಪ್ ಅನ್ನು ಕಳುಹಿಸಲು ಸೂಚನೆ ಸೈಬರ್ ವಂಚನೆ, ನಕಲಿ ಐಎಂಇಐ ಸಂಖ್ಯೆಗಳ ಬಳಕೆ, ಮತ್ತು ಕದ್ದ ಫೋನ್ಗಳ ದುರ್ಬಳಕೆ ತಡೆಯುವುದು ಸರ್ಕಾರದ ಮುಖ್ಯ ಉದ್ದೇಶ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಈ ಆದೇಶದ ಅನ್ವಯ, ಸ್ಯಾಮ್ಸಂಗ್, ಶಿಯೋಮಿ, ವಿವೋ, ಓಪ್ಪೋ ಸೇರಿದಂತೆ ಆ್ಯಪಲ್ನಂತಹ ಎಲ್ಲಾ ಪ್ರಮುಖ ಸ್ಮಾರ್ಟ್ಫೋನ್ ತಯಾರಕರು, ತಮ್ಮ ಹೊಸ ಮೊಬೈಲ್ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಅನ್ನು ಅಳವಡಿಸಬೇಕು. ಈ ನಿಯಮವನ್ನು ಜಾರಿಗೆ ತರಲು ಕಂಪನಿಗಳಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.
ಬಳಕೆದಾರರು ಈ ಆ್ಯಪ್ ಅನ್ನು ತಮ್ಮ ಫೋನ್ನಿಂದ ತೆಗೆದುಹಾಕಲು ಸಾಧ್ಯವಾಗದಂತೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹಳೆಯ ಫೋನ್ಗಳಿಗೂ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಈ ಆ್ಯಪ್ ಅನ್ನು ಕಳುಹಿಸಿಕೊಡುವಂತೆ ಸಚಿವಾಲಯವು ಸೂಚಿಸಿದೆ.
ಸೈಬರ್ ವಂಚನೆಗೆ ಭಾರತೀಯರು ತತ್ತರ, ಒಂದೇ ವರ್ಷದಲ್ಲಿ 22,842 ಕೋಟಿ ರೂಪಾಯಿ ಗುಳುಂ! ಕ್ರಿಮಿನಲ್ಗಳಿಗೆ ವಾಟ್ಸ್ಆಪೇ ಫೆವರಿಟ್! ಸರ್ಕಾರದ ಕ್ರಮಕ್ಕೆ ಕಾರಣವೇನು? ಇತ್ತೀಚಿನ ದಿನಗಳಲ್ಲಿ ನಕಲಿ ಅಥವಾ ಕ್ಲೋನ್ ಮಾಡಲಾದ ಐಎಂಇಐ ಸಂಖ್ಯೆಗಳನ್ನು ಬಳಸಿ ನಡೆಯುವ ವಂಚನೆಗಳು ಮತ್ತು ಕದ್ದ ಮೊಬೈಲ್ಗಳನ್ನು ಬಳಸಿಕೊಂಡು ನಡೆಸುವ ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ‘ಸಂಚಾರ್ ಸಾಥಿ’ ಆ್ಯಪ್ ಮೂಲಕ ಇದಕ್ಕೆ ಅಂತ್ಯ ಹಾಡಲು ಮುಂದಾಗಿದೆ.

ಈ ಆ್ಯಪ್, ಕಳೆದುಹೋದ ಅಥವಾ ಕದ್ದೊಯ್ದ ಫೋನ್ಗಳನ್ನು ಬ್ಲಾಕ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ, ಬಳಕೆದಾರರ ಹೆಸರಿನಲ್ಲಿರುವ ನಕಲಿ ಮೊಬೈಲ್ ಸಂಪರ್ಕಗಳನ್ನು ಗುರುತಿಸಿ, ಅವುಗಳನ್ನು ಕಡಿತಗೊಳಿಸಲು ಸಹ ಅವಕಾಶ ನೀಡುತ್ತದೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಈ ಆ್ಯಪ್, ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಕಳೆದುಹೋದ ಫೋನ್ಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ ಮತ್ತು ಸುಮಾರು 37 ಲಕ್ಷ ಕದ್ದ ಫೋನ್ಗಳನ್ನು ಬ್ಲಾಕ್ ಮಾಡಿದೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳಿವೆ.
ಆ್ಯಪಲ್ ಜೊತೆ ಸಂಘರ್ಷದ ಸಾಧ್ಯತೆ ಸರ್ಕಾರದ ಈ ಹೊಸ ನಿಯಮವು ಜಾಗತಿಕ ಟೆಕ್ ದೈತ್ಯ ಆ್ಯಪಲ್ ಕಂಪನಿಯೊಂದಿಗೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ, ಆ್ಯಪಲ್ ತನ್ನ ಆಂತರಿಕ ನೀತಿಗಳ ಪ್ರಕಾರ, ತನ್ನದೇ ಸ್ವಾಮ್ಯದ ಆ್ಯಪ್ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಅಥವಾ ಮೂರನೇ ವ್ಯಕ್ತಿಯ ಅಂದರೆ ಥರ್ಡ್ ಪಾರ್ಟಿ ಆ್ಯಪ್ಗಳನ್ನು ಮೊದಲೇ ಇನ್ಸ್ಟಾಲ್ ಮಾಡಿ ಫೋನ್ಗಳನ್ನು ಮಾರಾಟ ಮಾಡುವುದಿಲ್ಲ.
ಈ ಹಿಂದೆ ಕೂಡ, ಸ್ಪ್ಯಾಮ್-ವಿರೋಧಿ ಆ್ಯಪ್ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮತ್ತು ಆ್ಯಪಲ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಖಾಸಗಿತನದ ಬಗ್ಗೆ ತಜ್ಞರ ಕಳವಳ ಸರ್ಕಾರದ ಈ ಕ್ರಮವು ಸೈಬರ್ ಸುರಕ್ಷತೆಗೆ ಪೂರಕವಾಗಿದ್ದರೂ, ಬಳಕೆದಾರರ ಖಾಸಗಿತನ ಮತ್ತು ಆಯ್ಕೆಯ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬ ಕಳವಳವನ್ನು ತಂತ್ರಜ್ಞಾನ ಕಾನೂನು ತಜ್ಞರು ವ್ಯಕ್ತಪಡಿಸಿದ್ದಾರೆ.
“ಈ ಆದೇಶದ ಮೂಲಕ ಸರ್ಕಾರವು ಬಳಕೆದಾರರ ಸಮ್ಮತಿಯನ್ನು ಒಂದು ಅರ್ಥಪೂರ್ಣ ಆಯ್ಕೆಯಾಗಿ ಪರಿಗಣಿಸದೆ ಅದನ್ನು ತೆಗೆದುಹಾಕುತ್ತಿದೆ,” ಎಂದು ಇಂಟರ್ನೆಟ್ ಹಕ್ಕುಗಳ ವಕೀಲೆ ಮಿಶಿ ಚೌಧರಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರಷ್ಯಾ ಸರ್ಕಾರ ಇದೇ ರೀತಿಯ ನಿಯಮವನ್ನು ಜಾರಿಗೆ ತಂದಾಗ, ಖಾಸಗಿತನದ ಪ್ರತಿಪಾದಕರು ಅದನ್ನು ತೀವ್ರವಾಗಿ ಟೀಕಿಸಿದ್ದರು. ಒಟ್ಟಿನಲ್ಲಿ, ಸೈಬರ್ ಸುರಕ್ಷತೆಯ ಗುರಿಯೊಂದಿಗೆ ಜಾರಿಗೆ ಬರುತ್ತಿರುವ ಈ ನಿಯಮವು, ತಂತ್ರಜ್ಞಾನ ಕಂಪನಿಗಳ ನೀತಿಗಳು ಮತ್ತು ಬಳಕೆದಾರರ ಖಾಸಗಿತನದ ಹಕ್ಕುಗಳ ನಡುವೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.”

Leave a comment