ಮಂಗಳೂರು ವಿಮಾನ ನಿಲ್ದಾಣವು ಭಯೋತ್ಪಾದಕ ದಾಳಿಯ ಗುರಿ ಮಾಡಬಹುದಾದ ನಿಟ್ಟಿನಲ್ಲಿ ಬಿಗಿ ಭದ್ರತೆ

23

ಮಂಗಳೂರು: ಮಂಗಳೂರಿನಲ್ಲಿ ಹೆದ್ದಾರಿಗಳು, ರೈಲ್ವೆ ನಿಲ್ದಾಣ, ಸಮುದ್ರ ಮಾರ್ಗವೂ ಇರುವುದರಿಂದ ಯಾವ ಮಾರ್ಗದಲ್ಲೂ ಭಯೋತ್ಪಾದಕರು ಆಗಮಿಸಬಹುದು. ವಿಮಾನ ನಿಲ್ದಾಣವನ್ನು ಗುರಿ ಮಾಡಬಹುದು. ಈ ನಿಟ್ಟಿನಲ್ಲಿ ಬಿಗಿ ಭದ್ರತೆ, ಆಗಾಗ ಪರಿಶೀಲನೆ, ಅಣಕು ಕಾರ್ಯಾಚರಣೆಗಳೂ ಅಗತ್ಯ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಾವಳಿಯ 4-5 ಜಿಲ್ಲೆಗಳ ಪ್ರಮುಖ ಸಂಪರ್ಕ ತಾಣ. ಪ್ರತಿದಿನ 55ರಷ್ಟು ವಿಮಾನ ಸೇರಿದಂತೆ, 2025-26ನೇ ಸಾಲಿನ ಪ್ರಥಮ ಅರ್ಧ ವರ್ಷದಲ್ಲಿ 9245 ವಿಮಾನಗಳ ಹಾರಾಟ ನಡೆದಿದ್ದು, ಒಂದೇ ದಿನದಲ್ಲಿ 61 ವಿಮಾನಗಳಲ್ಲಿ 8,168 ಮಂದಿ ಸಂಚಾರ ನಡೆಸಿದ ದಾಖಲೆಯೂ ಇಲ್ಲಿದೆ.

ಭಾರಿ ಭದ್ರತೆ, ಸುರಕ್ಷೆ ಅಗತ್ಯ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ, ದೇಶೀಯ ಪ್ರಯಾಣಿಕರಿಂದ ಗಿಜಿಗಿಡುತ್ತಿರುತ್ತದೆ. ಪ್ರಯಾಣಿಕರ ಜತೆ ವಿದೇಶಿ ಗಣ್ಯರು, ಪ್ರಮುಖ ವ್ಯಕ್ತಿಗಳು ಸಂಚಾರ ಮಾಡುತ್ತಾರೆ. ಪ್ರಯಾಣಿಕರ ಬಳಿ ಅಮೂಲ್ಯ ದಾಖಲೆಗಳು, ಎಲೆಕ್ಟ್ರಾನಿಕ್‌ ಮತ್ತಿತರ ವಸ್ತುಗಳು, ಸಾಮಾನು ಸರಂಜಾಮುಗಳೂ ಇರುತ್ತವೆ.

ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು, ಹೊರಗಡೆ ಪ್ರಯಾಣಿಕರನ್ನು ಬಿಡಲು, ಕರೆಯೊಯ್ಯಲು ಸಾಕಷ್ಟು ಜನ ಇರುತ್ತಾರೆ. ಇಂತಹ ವಿಮಾನ ನಿಲ್ದಾಣಕ್ಕೆ ಭಾರಿ ಭದ್ರತೆ, ಸುರಕ್ಷೆಯ ಅಗತ್ಯವಿರುತ್ತದೆ. ಬೆಚ್ಚಿ ಬೀಳುವ ಘಟನೆಯೂ ನಡೆದಿತ್ತು.. ವಿಮಾನ ನಿಲ್ದಾಣಕ್ಕೆ ಭಯೋತ್ಪಾದಕರಿಂದ ಹಲವು ಬಾರಿ ಬೆದರಿಕೆ ಕರೆಗಳು ಬಂದಿವೆ. 2020ರಲ್ಲಿ ಆದಿತ್ಯ ರಾವ್‌ ಎಂಬಾತ ನಿರಾತಂಕವಾಗಿ ವಿಮಾನ ನಿಲ್ದಾಣದ ಆವರಣದಲ್ಲೇ ಲ್ಯಾಪ್‌ಟಾಪ್‌ ಬ್ಯಾಗ್‌ನಲ್ಲಿಸ್ಫೋ ಟಕ ವಸ್ತುಗಳನ್ನಿಟ್ಟು ಹೋಗಿದ್ದ ಘಟನೆಗೆ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು.

ಆತ ಅನುಮಾನಾಸ್ಪದ ಬ್ಯಾಗ್‌ ತಂದಿಟ್ಟು ಹೋಗುವ ತನಕವೂ ಯಾವುದೇ ಸುಳಿವು ಸಿಗದೇ ಇದ್ದುದು ವಿಮಾನ ನಿಲ್ದಾಣದ ಭದ್ರತಾ ವೈಫಲ್ಯ ಜಗಜ್ಜಾಹೀರಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿ, ಅವರು ಬಂದು, ಕೆಂಜಾರಿನ ಮೈದಾನಕ್ಕೆ ಕೊಂಡೊಯ್ದು, 10 ಅಡಿ ಆಳದ ಗುಂಡಿಯಲ್ಲಿಟ್ಟು, ಅದರ ಸುತ್ತ ಮರಳಿನ ಚೀಲದ ತಡೆಗೋಡೆ ನಿರ್ಮಿಸಿ, ಸಿಡಿಸಲಾಗಿತ್ತು. ಸುಮಾರು ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಬಾಂಬ್‌ ನಿಷ್ಕ್ರಿಯಗೊಳಿಸುವ ತುರ್ತು ವ್ಯವಸ್ಥೆಗಳು ಇಲ್ಲದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದವು.

ಸಿಐಎಸ್‌ಎಫ್‌ ಭದ್ರತೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷೆ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್‌) ನಿಯಮಗಳಡಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌)ಯು ವಿಶೇಷ ಸಿಬ್ಬಂದಿ ಸಹಿತ ಸುಧಾರಿತ ತಂತ್ರಜ್ಞಾನ ಮೂಲಕ ಕಾರ್ಯಾಚರಿಸುತ್ತಿದೆ.

ಭದ್ರತಾ ವ್ಯವಸ್ಥೆಯಲ್ಲಿ ಪ್ರವೇಶ ದ್ವಾರದಲ್ಲಿ 24/7 ಪೊಲೀಸ್‌ ಚೆಕ್‌ ಪೋಸ್ಟ್‌, ಗುಂಡು ನಿರೋಧಕ ವಾಹನಗಳು ಮತ್ತು ಸುಧಾರಿತ ಬಾಂಬ್‌ ವಿಲೇವಾರಿ ಪರಿಕರಗಳಂತಹ ವಿಶೇಷ ಉಪಕರಣಗಳ ಸೇರ್ಪಡೆಯಾಗಿದೆ. ವಿಮಾನ ನಿಲ್ದಾಣವು ಕಾಗದರಹಿತ ಪ್ರವೇಶ ಮತ್ತು ಭದ್ರತಾ ಕ್ಲಿಯರೆನ್ಸ್‌ಗಾಗಿ ಡಿಜಿಯಾತ್ರಾ ವ್ಯವಸ್ಥೆ ಬಳಸುತ್ತಿದೆ.

ಪ್ರಯಾಣಿಕರು ಮತ್ತು ಅವರ ಬ್ಯಾಗ್‌ಗಳ ಅತ್ಯಾಧುನಿಕ ತಪಾಸಣೆಗಾಗಿ ಸ್ಕ್ರೀನಿಂಗ್‌ ಮತ್ತು ಪತ್ತೆ, ನಿಲ್ದಾಣ ಪರಿಧಿಯ ಭದ್ರತೆ, ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ, ಪ್ರವೇಶ ದ್ವಾರಗಳಲ್ಲಿ ಬೊಲ್ಲಾರ್ಡ್‌ಗಳು ಮತ್ತು ಟೈರ್‌ ಕಿಲ್ಲರ್‌ಗಳನ್ನು ಹೊಂದಿದೆ. ಶಂಕಿತ ಲಗೇಜ್‌ ಕಂಟೈನ್‌ಮೆಂಟ್‌ ಮತ್ತು ಸಿಐಎಸ್‌ಎಫ್‌ಗೆ ಮಿನಿಯೇಚರ್‌ ರಿಮೋಟ್‌ ಆಪರೇಟೆಡ್‌ ವಾಹನಗಳಿವೆ. ಭದ್ರತಾ ಸಿಬ್ಬಂದಿಗೆ ಹ್ಯಾಂಡ್ಸ್‌-ಫ್ರೀ ಸಂವಹನ ಕಿಟ್‌ ನೀಡಿದೆ.

ಸಿಐಎಸ್‌ಎಫ್‌ ಸಿಬ್ಬಂದಿ ಧಾವಿಸಲು ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ), ತರಬೇತಿ ಮೈದಾನ ಮತ್ತು ಏ9 ಸ್ಕಾಡ್‌ಗಳಿವೆ. ಎಲ್ಲ ಪ್ರಯಾಣಿಕರಿಗೆ ಪ್ರಮಾಣಿತ ವಲಸೆ(ಇಮಿಗ್ರೇಷನ್‌) ತಪಾಸಣೆ ನಡೆಸಲಾಗುತ್ತದೆ.

ಅತ್ಯಾಧುನಿಕ ವ್ಯವಸ್ಥೆ ಭದ್ರತಾ ಪಡೆ ಮತ್ತು ವಿಶೇಷ ತಂಡ ಕಾರ್ಯಾಚರಣೆ, ರಾತ್ರಿ ದೃಷ್ಟಿ ಬೈನಾಕ್ಯುಲರ್‌ಗಳು ಮತ್ತು ಐಆರ್‌ ಇಲ್ಯುಮಿನೇಟರ್‌ಗಳು, ಎಕ್ಸ್‌-ರೇ ಯಂತ್ರಗಳು ಮತ್ತು ಬ್ಯಾಗೇಜ್‌ ರೋಲರ್‌ಗಳು, ಇ-ಗೇಟ್‌ಗಳು, ಬಾರ್‌ಕೋಡ್‌ ಸ್ಕ್ಯಾ‌ನ್‌, ಗಸ್ತು ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಎಲ್ಲ ಹ್ಯಾಂಡ್‌ ಬ್ಯಾಗೇಜ್‌ಗಳನ್ನು ಎಕ್ಸ್‌-ರೇ ಯಂತ್ರಗಳ ಮೂಲಕ ತಪಾಸಣೆ, ಮೆಟಲ್‌ ಡಿಟೆಕ್ಟರ್‌/ ಬಾಡಿ ಸ್ಕ್ಯಾನರ್‌ಗಳ ಮೂಲಕ ಹಾದು ಹೋಗುವ ವ್ಯವಸ್ಥೆ.

ವಿಮಾನ ನಿಲ್ದಾಣದ ಭದ್ರತೆಯನ್ನು ಸಿಐಎಸ್‌ಎಫ್‌ ನಿರ್ವಹಿಸುತ್ತದೆ. ಟರ್ಮಿನಲ್‌ನೊಳಗೆ ಖಾಸಗಿ ಭದ್ರತಾ ವ್ಯವಸ್ಥೆಯೂ ಇದೆ. ಪ್ರವೇಶ ಟೋಲ್‌ ಬೂತ್‌ ಬಳಿ ಬಜಪೆ ಪೊಲೀಸ್‌ ಠಾಣೆ ಸಿಬ್ಬಂದಿಗಾಗಿ ಪೊಲೀಸ್‌ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ.ಯಾವುದೇ ಭದ್ರತಾ ಬೆದರಿಕೆಗಳನ್ನು ಎದುರಿಸಲು ಅತ್ಯಾಧುನಿಕ ಭದ್ರತಾ ಸಾಧನಗಳನ್ನು ಹೊಂದಿದೆ ಎಂದಿದ್ದಾರೆ ವಕ್ತಾರರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ .”

Leave a comment

Leave a Reply

Your email address will not be published. Required fields are marked *

Related Articles

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...

ಅಲ್ಪಸಂಖ್ಯಾತರ ಸಾಲದ ಬಡ್ಡಿ ಮನ್ನಾ ತುಷ್ಟಿಕರಣದಲ್ಲಿ ತೊಡಗಿಕೊಂಡ ಸರಕಾರದ ವಿರುದ್ಧ:: ಸಿಟಿ ರವಿ ವಾಗ್ದಾಳಿ

“ಬೆಂಗಳೂರು: ಬಿಜೆಪಿಯ ಹಿರಿಯ ನಾಯಕರು ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ರೈತರು, ಹಿಂದುಳಿದ...