ಕೆಂಪು ಕಲ್ಲಿನ ದರ ಕಡಿಮೆ ಮಾಡಿ ಬಡ ಜನರಿಗೆ ನೆರವಾಗುವಂತೆ ಜಿಲ್ಲಾಧಿಕಾರಿಗಳಿಗೆ:: ನವೀನ್ ಸಾಲಿಯನ್ ಮನವಿ

3

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ ಮಾಡಿರುವುದರಿಂದ ಪ್ರಸ್ತುತವಾಗಿ ಏರಿಸಿದ್ದ ದರವನ್ನು ಈ ಕೂಡಲೇ ಕಡಿಮೆ ಮಾಡಿ ಹಿಂದೆ ಇದ್ದ ದರವನ್ನು ನಿಗದಿಪಡಿಸಿ ಬಡ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು, ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರ ,ಸಾರ್ವಜನಿಕರ ಹಾಗೂ ಕಾರ್ಮಿಕ ಮುಖಂಡರ ಜೊತೆ ಸಭೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಗಣಿ ಅಧಿಕಾರಿಯವರಿಗೆ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯನ್ ಒತ್ತಾಯಿಸಿದ್ದಾರೆ.

“ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸುವ ಕೆಂಪು ಕಲ್ಲಿನ ದುಬಾರಿ ದರದ ಕುರಿತು ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ್ದ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದೆ. ಆದರೆ ಕೆಂಪು ಕಲ್ಲಿನ ದರ ಮಾತ್ರ ದುಬಾರಿಯಾಗಿದೆ. ಹಿಂದೆ 30 ರಿಂದ 35ರೂ.ಗಳಿಗೆ ಸಿಗುತ್ತಿದ್ದ ಕಲ್ಲಿನ ದರ ರಾಜಸ್ವ ಹೆಸರಿನಲ್ಲಿ 50ರಿಂದ 55 ರೂ. ವಸೂಲು ಮಾಡುತ್ತಿದ್ದಾರೆ. ದರ ಇಳಿಸದ ಕೆಂಪು ಕಲ್ಲು ಮಾಫಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು,ದರ ಏರಿಕೆಯಿಂದ ಬಡ, ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ತೊಂದರೆಯಾಗಿದೆ.

ಈ ಬಗ್ಗೆ ಸಾರ್ವಜನಿಕರು, ಹಾಗೂ ಮನೆ ನಿರ್ಮಾಣ ಮಾಡುತ್ತಿರುವ ಬಡವರಿಂದ ಸಾಕಷ್ಟು ದೂರುಗಳು ಬಂದಿದ್ದು, ಈ ಬಗ್ಗೆ ಸಭೆ ನಡೆಸಿ ಕ್ರಮ ವಹಿಸಬೇಕು. ಟೆಂಡರ್ ಆದಾರಿತ ಬ್ಲಾಕ್ ಹೆಚ್ಚಿಸಲು ಪ್ರಯತ್ನಿಸಿ,ವೈಜ್ಞಾನಿಕವಾಗಿ ಕೆಂಪು ಕಲ್ಲಿನ ದರ ನಿಗದಿ ಮಾಡಲು ಸೂಕ್ತ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಅಳವಡಿಸಬೇಕು” ಎಂದು ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಗಣಿ ಭೂವಿಜ್ಞಾನ ಅಧಿಕಾರಿಯವರಿಗೆ ನವೀನ್ ಸಾಲಿಯನ್ ಮನವಿ ಮಾಡಿದ್ದಾರೆ .

Leave a comment

Leave a Reply

Your email address will not be published. Required fields are marked *

Related Articles

ಉಡುಪಿಗೆ ಏರ್‌ಪೋರ್ಟ್‌ ಬೇಕೆನ್ನುವ ಎರಡು ದಶಕಗಳ ಕನಸಿಗೆ ಈಗ ರೆಕ್ಕೆಪುಕ್ಕ

ಪಡುಬಿದ್ರಿಯಲ್ಲಿ ಏರ್‌ಪೋರ್ಟ್‌: ಉಡುಪಿಗೆ ಬರುವ ಪ್ರಧಾನಿ ಮೋದಿಗೂ ಏರ್‌ಪೋರ್ಟ್‌ ಬೇಡಿಕೆ ಸಲ್ಲಿಕೆಯಾಗಲಿದೆ. ಬಜ್ಪೆ ಮತ್ತು ಪ್ರಸ್ತಾಪಿತ...

ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ಸಮಾಜ ಸೇವಕ ದಿ ಪಮ್ಮೊಟ್ಟು ಸುಂದರ್ ಶೆಟ್ಟಿ ಸ್ಮರಣಾರ್ಥ ಉಚಿತ ನೇತ್ರ ಚಿಕಿತ್ಸೆ ಹಾಗೂ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರ

ಹಿಂದೂ ಜನಾ ಸೇವಾ ಟ್ರಸ್ಟ್(ರಿ)ಪ್ರಸಾದ್ ನೇತ್ರಾಲಯ ನೇತ್ರ ಜ್ಯೋತಿ ಸೇವಾ ಟ್ರಸ್ಟ್ ಪಮ್ಮೊಟ್ಟು ದಿ ಸುಂದರ...

15 ವರ್ಷದ ಕೆಳಗಿನ ವಯೋಮಾನದ ಅಖಿಲ ಭಾರತ ಬಿಕೂ ಪೈ ಆ್ಯಂಗಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಉಡುಪಿ ಕ್ರಿಕೆಟ್ ತಂಡ

ಗೋವಾದಲ್ಲಿ ನಡೆಯುತ್ತಿರುವ 15 ವರ್ಷದ ಕೆಳಗಿನ ವಯೋಮಾನದ ಕ್ರಿಕೆಟ್ ಪಂದ್ಯಾಟಕ್ಕಾಗಿ ತೆರಳಿದ ಉಡುಪಿ ತಂಡ ಯು.ಎ.ಇ....

ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಸಹಾಯಧನ ಕೊಡಿಸುವುದಾಗಿ ವಂಚನೆ ಹಲವರ ವಿರುದ್ಧ ವಂಚನೆ ಪ್ರಕರಣ ದಾಖಲು

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಕೊಡಿಸುವುದಾಗಿ ವಂಚನೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲು...