ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನ : ರೈತರಿಗೆ ಭರಪೂರ ಆದಾಯ ಬರುವ ನಿರೀಕ್ಷೆ

28

 ಕೊಪ್ಪಳ : ಮಾರುಕಟ್ಟೆಯ ಬೆಲೆಯ ಏರಿಳಿತಕ್ಕೆ ಹೈರಾಣಾಗುತ್ತಿದ್ದ ರೈತರಿಗೆ ಕೊಪಪ್ಳ ಜಿಲ್ಲೆಯ ತೋಟಗಾರಿಕೆ ಇಲಾಖೆ ಬೈಬ್ಯಾಕ್ ಎಂಬ ಹೊಸ ಮಾರ್ಗೋಪಾಯ ಸೂಚಿಸಿದೆ. ದಾಳಿಂಬೆ, ಬಾಳೆ, ದ್ರಾಕ್ಷಿಯನ್ನು ಇನ್ನು ನಿಶ್ಚಿಂತೆಯಿಂದ ಬೆಳೆಯಬಹುದಾಗಿದೆ.

ಜಿಲ್ಲೆಯ ರೈತರು ದಾಳಿಂಬೆ, ಬಾಳೆ ಮತ್ತು ದ್ರಾಕ್ಷಿ ಬೆಳೆಯನ್ನು ಒಪ್ಪಂದ ಕೃಷಿ ಮೂಲಕ ಬೆಳೆಯಬಹುದು. ಟೊಮೊಟೊ, ಹಲಸು ಬೆಳೆಗಾರರಿಗೆ ಬೈ ಬ್ಯಾಕ್‌ ಪರಿಚಯಿಸಿ, ಯಶಸ್ವಿಯಾಗಿರುವ ತೋಟಗಾರಿಕೆ ಇಲಾಖೆ, ಇದೀಗ ದಾಳಿಂಬೆ, ಬಾಳೆ ಮತ್ತು ದ್ರಾಕ್ಷಿ ಬೆಳೆಗೂ ಬೈ ಬ್ಯಾಕ್‌ ಅನುಷ್ಠಾನದಿಂದ ಅನ್ನದಾತರಿಗೆ ವರದಾನವಾಗಲಿದೆ.

ರೈತರು ಮಾರುಕಟ್ಟೆಯಲ್ಲಿ ದರದ ಏರಿಳಿತದ ಭಯದಿಂದ ಮುಕ್ತರಾಗುತ್ತಾರೆ. ಅಲ್ಲದೆ, ಸಸಿ ಹಾಗೂ ಬೆಳೆಯುವ ವಿಧಾನ ಸೇರಿ ಎಲ್ಲ ರೀತಿಯ ಮಾಹಿತಿ ನೀಡಿ, ಜತೆಗೆ ಬೆಳೆಯ ದರ ಕೂಡ ಮುಂಚಿತವಾಗಿ ರೈತರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ನಿಗದಿಪಡಿಸಲಾಗುತ್ತದೆ. ಜಿಲ್ಲೆಯಲ್ಲಿ ನಾನಾ ತೋಟಗಾರಿಕೆ ಬೆಳೆಗಳನ್ನು 55 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

2016ರಲ್ಲಿ ಕೇವಲ 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿತ್ತು. ಆದರೆ, ಕಳೆದೊಂದು ದಶಕದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ರೈತರು ಕೂಡ ಹೆಚ್ಚು ಆದಾಯ ತಂದು ಕೊಡುವ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯಲ್ಲಿ ಈವರೆಗೂ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ, ಇತ್ತೀಚೆಗೆ ಜಂಟಿ ನಿರ್ದೇಶಕರಾಗಿ ಮುಂಬಡ್ತಿ ಪಡೆದಿರುವ ಕೃಷ್ಣ ಉಕ್ಕುಂದ ಅವರು, ಜಿಲ್ಲೆಯ ರೈತರಿಗೆ ಸಕಾರಾತ್ಮಕ ಮಾರ್ಗದರ್ಶನ, ಸರಕಾರದಿಂದ ಅಗತ್ಯ ನೆರವು ದೊರಕಿಸುತ್ತಿರುವುದರಿಂದ ತೋಟಗಾರಿಕೆ ಬೆಳೆಗಾರರಿಗೆ ಹೆಚ್ಚಿನ ಉತ್ತೇಜನ ಸಿಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ದಾಳಿಂಬೆ 8 ಸಾವಿರ ಹೆಕ್ಟೇರ್‌, ಬಾಳೆ 1 ಸಾವಿರ ಹೆಕ್ಟೇರ್‌, ದ್ರಾಕ್ಷಿ 500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಕಳೆದ ದಶಕದ ಹಿಂದೆ ದಾಳಿಂಬೆ ಬೆಳೆಗೆ ಏಕಾಏಕಿ ದುಂಡಾಣು ರೋಗ ಬಿದ್ದಿದ್ದರಿಂದ ಜಿಲ್ಲೆಯ ಸಾವಿರಾರು ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು. ಕಳೆದ ಎರಡು ವರ್ಷದಿಂದ ಹೊಸ ನಾವಿನ್ಯತೆಯೊಂದಿಗೆ ದಾಳಿಂಬೆ ಬೆಳೆಯಲು ತೋಟಗಾರಿಕೆ ಇಲಾಖೆ, ಪ್ರೋ ತ್ಸಾಹ ನೀಡುತ್ತಿರುವುದರಿಂದ ದಾಳಿಂಬೆ ಬೆಳೆ ಬೆಳೆಯುವ ರೈತರ ಸಂಖ್ಯೆಯು ದ್ವಿಗುಣಮುಖವಾಗಿದೆ.

ಅಂತೆಯೇ ರೈತರಿಗೆ ಸೂಕ್ತ ಮಾರುಕಟ್ಟೆ ದೊರೆಯಲಿ ಎಂಬ ಉದ್ದೇಶದಿಂದ ಬೈ ಬ್ಯಾಕ್‌ ಪದ್ಧತಿ ಪರಿಚಯಿಸಲಾಗುತ್ತಿದೆ. ಉತ್ತಮ ಫಸಲುನೊಂದಿಗೆ ಬಾಳೆ ಬೆಳೆದರೂ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿದಿದ್ದರಿಂದ ರೈತರ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಿತ್ತು. ಹೀಗಾಗಿ ಬಾಳೆ ಬೆಳೆಗಾರರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಒಪ್ಪಂದ ಕೃಷಿ ಪರಿಚಯಿಸಲಾಗುತ್ತಿದೆ. ಇದರಿಂದ ಎಕರೆಗೆ 10 ಲಕ್ಷ ರೂ. ವರೆಗೆ ನಿವ್ವಳ ಆದಾಯವನ್ನು ರೈತರು ತಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ಈಗಾಗಲೇ ಹಲವು ರೈತರ ನೋಂದಣಿ ಪ್ರಕ್ರಿಯೆ ಭರದಿಂದ ಸಾಗಿದೆ.

ಏನಿದು ಒಪ್ಪಂದ ಕೃಷಿ? ದಾಳಿಂಬೆ, ಬಾಳೆ ಹಾಗೂ ದ್ರಾಕ್ಷಿ ಬೆಳೆಯಲು ಇಚ್ಛಿಸುವ ರೈತರಿಗೆ ಸಸಿಗಳನ್ನು ಕೊಡಲಾಗುತ್ತದೆ. ಬೆಳೆಯುವ ಮುನ್ನವೇ ರೈತರಿಗೆ ಹಣ್ಣಿನ ದರ ನಿಗದಿ ಮಾಡಲಾಗುತ್ತದೆ. ಬೆಳೆದು ಒಪ್ಪಂದ ಮಾಡಿಕೊಳ್ಳಲಾಗಿರುವ ಕಾಯಕ ಆಗ್ರೋ ಫಾರ್ಮ್ ಎಫ್‌ಪಿಒ ಮುಖಾಂತರ ಸ್ಪಂದನಾ ಫಾರ್ಮಸ್‌ ಕಂಪನಿಗೆ ಮಾರಾಟ ಮಾಡಬೇಕು.

ಈ ಸಮಯದಲ್ಲಿ ಹಣ್ಣಿನ ದರ ಕುಸಿದರೂ ಈ ಮುಂಚೆ ನಿಗದಿಪಡಿಸಿದ ದರದಲ್ಲೇ ಖರೀದಿ ಮಾಡಲಿದೆ. ಈ ರೀತಿ ಒಪ್ಪಂದದ ಮೂಲಕ ರೈತರಿಗೆ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ತೋಟಗಾರಿಕೆ ಇ

ಲಾಖೆಯೂ ರೈತರ ಹಾಗೂ ಕಂಪನಿ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲಿದೆ. ಕಂಪನಿಯನ್ನು ರೈತರಿಗೆ ತೋಟಗಾರಿಕೆ ಇಲಾಖೆಯೇ ಪರಿಚಯಿಸಿದ್ದು, ಪೂರ್ಣ ಪ್ರಮಾಣದಲ್ಲಿ ವಿಶ್ವಾಸಕ್ಕೆ ಬಂದ ಬಳಿಕವೇ ಅನ್ನದಾತರು ಒಪ್ಪಂದ ಕೃಷಿಗೆ ಮುದ್ರೆ ಹಾಕಬಹುದು.

ಈಗಾಗಲೇ ಟೊಮೊಟೊ, ಹಲಸು ಬೆಳೆ ಬೆಳೆಯುವ ರೈತರಿಗೆ ಒಪ್ಪಂದ ಕೃಷಿ ವರದಾನವಾಗಿರುವುದರಿಂದ ದಾಳಿಂಬೆ, ದ್ರಾಕ್ಷಿ ಹಾಗೂ ಬಾಳೆ ಬೆಳೆಗಾರರು ಒಪ್ಪಂದಕ್ಕೆ ಹೆಸರು ನೋಂದಾಯಿಸುತ್ತಿರುವುದು ವಿಶೇಷ. ಜಿಲ್ಲೆಯಲ್ಲಿ ಹೊಸದಾಗಿ ದಾಳಿಂಬೆ, ಬಾಳೆ ಹಾಗೂ ದ್ರಾಕ್ಷಿ ಬೆಳೆಗೆ ಬೈ ಬ್ಯಾಕ್‌ ಸಿಸ್ಟಮ್‌ ಪರಿಚಯಿಸಲಾಗಿದೆ.

ಈ ಹಿಂದೆ ಹಲಸು, ಟೊಮೊಟೊ ಬೆಳೆಗೆ ಬೈಬ್ಯಾಕ್‌ ಪದ್ಧತಿ ಪರಿಚಯಿಸಲಾಗಿತ್ತು. ಬೆಳೆಯಲು ಇಚ್ಛಿಸುವ ರೈತರಿಗೆ ಅಗತ್ಯ ಮಾರ್ಗದರ್ಶನದ ಜತೆಗೆ ಸರಕಾರದಿಂದ ದೊರೆಯುವ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ ಎಂದಿದ್ದಾರೆ ಕೃಷ್ಣ ಉಕ್ಕುಂದ, ಜಂಟಿ ನಿರ್ದೇಶಕ, ತೋಟಕಾರಿಕೆ ಇಲಾಖೆ, ಕೊಪ್ಪಳ”

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...