ಬೆಂಗಳೂರು : ನಿಯಮ ಪ್ರಕಾರ ಗಾಡಿಗಳಿಗೆ ಕೊಡದೆ, ರಸ್ತೆ ಬದಿ, ಬೇರೆಯವರ ಮನೆಯ ಅಕ್ಕಪಕ್ಕ ಸುರಿದು ಸಮಸ್ಯೆ ಸೃಷ್ಟಿಸುವವರಿಗೆ ತಕ್ಕ ಶಾಸ್ತಿ ಮಾಡಲು ಜಿಬಿಎ ಮುಂದಾಗಿದೆ. ಕಸ ಎಸೆಯುವವರ ವಿಡಿಯೋ ಮಾಡಿ, ಅವರ ಮನೆ ಮುಂದೆಯೇ ಬಂದು ಕಸ ಹಾಕಿ, ದುಪ್ಪಟ್ಟು ದಂಡ ಹಾಕಲಾಗ್ತಿದೆ.
ಬೆಂಗಳೂರು ರಸ್ತೆ ಬದಿ, ಕೆರೆಗಳ ಪಕ್ಕ, ಮರದ ಬುಡದಲ್ಲಿ ಹೀಗೆ ಎಲ್ಲೆಂದರಲ್ಲಿ ಕಸ ಸುರಿದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಹೆಸರು ಹಾಳಾಗುತ್ತಿದೆ. ಹೀಗಾಗಿ ಜನರಿಗೆ ತಕ್ಕ ಪಾಠ ಕಲಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ಹೊಸ ಪ್ಲ್ಯಾನ್ ಮಾಡಿದೆ. ಮನೆ ಮುಂದೆ ಆಟೋ ಕಸ ಸುರಿದ ಜಿಬಿಎ! ಕಸ ಎಸೆಯುವಾಗ ಅವರ ವಿಡಿಯೋಗಳನ್ನು ಮಾರ್ಷಲ್ ಗಳು ತೆಗೆದು, ನಂತರ ಅವರ ಮನೆಯ ಮುಂದೆಯೇ ಆಟೋ ಟಿಪ್ಪರ್ ಮೂಲಕ ಫುಲ್ ಲೋಡ್ ಕಸ ಸುರಿಯುವ ಮೂಲಕ ಜಿಬಿಎ ಪಾಠ ಕಲಿಸಲು ಮುಂದಾಗಿದೆ.

ಇಂದು ಈ ಅಭಿಯಾನ ನಡೆಸಿರುವ ಮಾರ್ಷಲ್ ಗಳು, ಪೌರಕಾರ್ಮಿಕರು ಹಾಗೂ ಆರೋಗ್ಯ ಅಧಿಕಾರಿಗಳು ಮನೆ ಮುಂದೆ ಕಸ ಸುರಿಯಲು ಆರಂಭಿಸಿದ್ದಾರೆ. ಈ ಮೂಲಕ ಮರ್ಯಾದೆ ಬೀದಿ ಪಾಲು ಆಗುವುದಲ್ಲದೆ, ದಂಡದ ಮೊತ್ತ ಕೂಡಾ ದುಪ್ಪಟ್ಟು ಹಾಕಲಾಗುತ್ತಿದೆ. ಎಲ್ಲೆಲ್ಲಿ ಅಭಿಯಾನ? ದತ್ತಾತ್ರೇಯ ವಾರ್ಡ್, ಶಿವಾಜಿನಗರ ವ್ಯಾಪ್ತಿಯಲ್ಲಿ ಬರುವ ಎಸ್ ಆರ್ನಗರ, ಸಂಪಂಗಿರಾಮನಗರದಲ್ಲಿ ಮನೆಮುಂದೆ ಕಸ ಸುರಿಯಲಾಗಿದೆ.
ಅಲ್ಲದೆ ಪ್ರತಿಯೊಬ್ಬರಿಗೂ 500 ರೂಪಾಯಿದಂಡ ವಿಧಿಸಲಾಗಿದೆ. ಇನ್ನು ಮುಂದೆ ಈ ತಪ್ಪನ್ನು ಮರುಕಳಿಸಬಾರದೆಂದು ಎಚ್ಚರಿಕೆ ನೀಡಲಾಗಿದೆ. ಕಟ್ಟಡದಲ್ಲಿ ಹಲವು ಮನೆಗಳಿದ್ದರೂ, ಯಾರೇ ಒಬ್ಬರು ಕಸ ಎಸೆದಿದ್ದರೂ ಎಲ್ಲಾ ಮನೆಗೆ ಸಮಸ್ಯೆ ಆಗಲಿದೆ ರಾತ್ರಿ ಹೊತ್ತಲ್ಲಿ, ಇರಬಹುದು ಯಾವುದೇ ಸಮಯದಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ. ಕಸ ಎಸೆದಾಗ, ಅಕ್ಕಪಕ್ಕ ಮನೆಯವರು ಕೂಡಾ ಛೀಮಾರಿ ಹಾಕಿದ ಘಟನೆ ನಡೆದಿದೆ.

ವಿದ್ಯಾವಂತರು ಕೂಡಾ ಮೂರ್ಖರ ರೀತಿ ಕಸ ಸೆಯುತ್ತಿದ್ದಾರೆ. ಇದೇ ರೀತಿ ಬುದ್ಧಿ ಕಲಿಸುತ್ತಿರುವುದು ಸರಿಯಾಗಿದೆ. ಜಿಬಿಎ ಗಾಡಿ ಬಂದಾಗ ಕಸ ವಿಂಗಡಿಸಿ ಕೊಡಬೇಕು. ಅದು ಬಿಟ್ಟು 8 ಗಂಟೆಯವರೆಗೂ ನಿದ್ದೆ ಮಾಡುತ್ತಾ, ನಂತರ ಕಸ ಎಲ್ಲೆಂದರಲ್ಲಿ ಎಸೆಯೋದು ಸರಿಯಲ್ಲ ಎಂದು ಹೇಳಿದ್ದಾರೆ. ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಎಲ್ಲರ ಆರೋಗ್ಯ ರಕ್ಷಣೆಯೂ ಸಾಧ್ಯ.
ಬೇರೆಯವರ ಮನೆ ಮುಂದೆ, ರಸ್ತೆ ಕಾರ್ನರ್ ಗಳಲ್ಲಿ ಎಸೆಯುವುದು ಸರಿಯಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಕಸ ಸುರಿದು, ದುಪ್ಪಟ್ಟು ದಂಡ ಹಾಕಿ, ಅಕ್ಕಪಕ್ಕದ ಮನೆಯವರ ಮುಂದೆ ತಪ್ಪಿತಸ್ಥರಿಗೆ ಕ್ಲಾಸ್ ತೆಗೆದುಕೊಂಡ ಮಾರ್ಷಲ್ ಗಳು, ಆರೋಗ್ಯ ಅಧಿಕಾರಿಗಳು ಬಳಿಕ ಕಸವನ್ನು ವಾಪಸ್ ತುಂಬಿಕೊಂಡು ಹೋದರು.”

Leave a comment