ಮಂಗಳೂರು:ಗಲ್ಫ್ ರಾಷ್ಟ್ರಗಳಿಗೂ ಹೆಚ್ಚುವರಿ ವಿಮಾನಯಾನ ಸೇವೆ, ಅಕ್ಟೋಬರ್ 26ರಿಂದ ನೂತನ ವೇಳಾಪಟ್ಟಿ ಜಾರಿ ದೆಹಲಿಗೆ 1 ಹೆಚ್ಚುವರಿ ವಿಮಾನ ಸೇವೆ ಅಕ್ಟೋಬರ್ 27ರಿಂದ ಮಂಗಳೂರಿನಿಂದ ತಿರುವನಂತಪುರಂಗೆ ವಾರಕ್ಕೆ ಮೂರು ಬಾರಿ ಹೊಸ ವಿಮಾನ ಸಂಚಾರ ಆರಂಭವಾಗಲಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಕ್ಟೋಬರ್ 26ರಿಂದ ಜಾರಿಗೆ ಬರುವ ಚಳಿಗಾಲದ ಹೊಸ ವಿಮಾನಯಾನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ದೆಹಲಿಗೆ ಎರಡನೇ ದೈನಂದಿನ ವಿಮಾನ, ತಿರುವನಂತಪುರಂಗೆ ಹೊಸ ಸೇವೆ ಮತ್ತು ಗಲ್ಫ್ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನ ಸಂಪರ್ಕವನ್ನು ಕಲ್ಪಿಸಲಾಗಿದೆ.
ಈ ಪರಿಷ್ಕೃತ ವೇಳಾಪಟ್ಟಿಯು 2026ರ ಮಾರ್ಚ್ 28ರವರೆಗೆ ಜಾರಿಯಲ್ಲಿರುತ್ತದೆ. ದೇಶೀಯ ವಿಮಾನಯಾನದಲ್ಲಿ ಪ್ರಮುಖ ಬದಲಾವಣೆಗಳು: 1. ದೆಹಲಿಗೆ ಹೆಚ್ಚುವರಿ ವಿಮಾನ: ಈಗಾಗಲೇ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರು-ದೆಹಲಿ ನಡುವೆ ದೈನಂದಿನ ವಿಮಾನ ಸೇವೆ ಒದಗಿಸುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ, ಅಕ್ಟೋಬರ್ 27ರಿಂದ ಎರಡನೇ ದೈನಂದಿನ ವಿಮಾನವನ್ನುಆರಂಭಿಸಲಾಗುತ್ತಿದೆ. ಹೆಚ್ಚುವರಿ ವಿಮಾನ ಪ್ರತಿದಿನ ಮಂಗಳೂರಿನಿಂದ ಮಧ್ಯಾಹ್ನ 12:30ಕ್ಕೆ ಹೊರಟು, 3:25ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ ಸಂಜೆ 4:15ಕ್ಕೆ ಹೊರಟು, ರಾತ್ರಿ 7:10ಕ್ಕೆ ಮಂಗಳೂರಿಗೆ ಆಗಮಿಸಲಿದೆ.

ತಿರುವನಂತಪುರಂಗೆ ಹೊಸ ಸೇವೆ: ಅಕ್ಟೋಬರ್ 27ರಿಂದ ಮಂಗಳೂರಿನಿಂದ ತಿರುವನಂತಪುರಂಗೆ ವಾರಕ್ಕೆ ಮೂರು ಬಾರಿ ಹೊಸ ವಿಮಾನ ಸಂಚಾರ ಆರಂಭವಾಗಲಿದೆ. ಮಂಗಳೂರಿನಿಂದ: ಏರ್ ಇಂಡಿಯಾ (AI 5531) ವಿಮಾನವು ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 9:15ಕ್ಕೆ ಹೊರಟು 10:35ಕ್ಕೆ ತಿರುವನಂತಪುರಂ ತಲುಪಲಿದೆ. ತಿರುವನಂತಪುರಂನಿಂದ: ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಜೆ 4:25ಕ್ಕೆ ಹೊರಟು, 5:45ಕ್ಕೆ ಮಂಗಳೂರಿಗೆ ತಲುಪಲಿದೆ.
3. ಇಂಡಿಗೋ ದೇಶೀಯ ಸೇವೆಗಳು: ಇಂಡಿಗೋ ಸಂಸ್ಥೆಯು ತನ್ನ ದೇಶೀಯ ವಿಮಾನಯಾನವನ್ನು ಈ ಕೆಳಗಿನಂತೆ ಮುಂದುವರಿಸಲಿದೆ: ಬೆಂಗಳೂರಿಗೆ: ಪ್ರತಿದಿನ 6 ವಿಮಾನಗಳು ಮುಂಬೈಗೆ: ಪ್ರತಿದಿನ 3 ವಿಮಾನಗಳು ಹೈದರಾಬಾದ್ಗೆ: ಪ್ರತಿದಿನ 2 ವಿಮಾನಗಳು ದೆಹಲಿ ಮತ್ತು ಚೆನ್ನೈ: ತಲಾ 1 ವಿಮಾನ ಅಂತಾರಾಷ್ಟ್ರೀಯ ವಿಮಾನಯಾನ ಗಲ್ಫ್ ರಾಷ್ಟ್ರಗಳಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಹಲವು ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ದುಬೈ: ವಾರಕ್ಕೆ 6 ದಿನಗಳು ಮತ್ತು ಪ್ರತಿ ಮಂಗಳವಾರ ಹೆಚ್ಚುವರಿ 1 ವಿಮಾನ.

ಅಬುಧಾಬಿ: ಪ್ರತಿದಿನ 1 ವಿಮಾನ. ದಮಾಮ್: ವಾರಕ್ಕೆ 5 ವಿಮಾನಗಳು (1 ಹೆಚ್ಚುವರಿ). ದೋಹಾ: ವಾರಕ್ಕೆ 3 ವಿಮಾನಗಳು (1 ಹೆಚ್ಚುವರಿ). ಬಹ್ರೇನ್: ವಾರಕ್ಕೆ 3 ವಿಮಾನಗಳು (2 ಹೆಚ್ಚುವರಿ). ಕುವೈತ್: ವಾರಕ್ಕೆ 3 ವಿಮಾನಗಳು (2 ಹೆಚ್ಚುವರಿ). ಜೆಡ್ಡಾ: ವಾರಕ್ಕೆ 3 ವಿಮಾನಗಳು (2 ಹೆಚ್ಚುವರಿ).
ಇಂಡಿಗೋ ಅಂತಾರಾಷ್ಟ್ರೀಯ ಸೇವೆಗಳು: ಅಬುಧಾಬಿ: ಪ್ರತಿದಿನ 1 ವಿಮಾನ. ದುಬೈ: ವಾರಕ್ಕೆ 4 ವಿಮಾನಗಳು. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ, ವಿಶೇಷವಾಗಿ ದೆಹಲಿ ಮತ್ತು ಕೇರಳಕ್ಕೆ ಪ್ರಯಾಣಿಸುವವರಿಗೆ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿರುವ ಕರಾವಳಿ ಭಾಗದ ಜನರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ”

Leave a comment