ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಸಹಾಯಧನ ಕೊಡಿಸುವುದಾಗಿ ವಂಚನೆ ಹಲವರ ವಿರುದ್ಧ ವಂಚನೆ ಪ್ರಕರಣ ದಾಖಲು

15

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಕೊಡಿಸುವುದಾಗಿ ವಂಚನೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ” ಸರಿತಾ ಲೂವಿಸ್‌ ಇವರು ನವೆಂಬರ್‌ 2023 ರಲ್ಲಿ ಅಂಜಲಿನ್‌ ಡಿಸಿಲ್ವಾ ರವರಿಂದ 1ನೇ ಆರೋಪಿ ಕೌಶಲ್ಯ ರವರು ಪರಿಚಯವಾಗಿ ಸರಿತಾರಿಗೆ PMEGP ಅಡಿಯಲ್ಲಿ ಸಬ್ಸಡಿ ಲೋನ್‌ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದು ಸರಿತಾ ಅವರು  ಬೇಡ ಎಂದರೂ ಆರೋಪಿ ಕೌಶಲ್ಯಳು ಒತ್ತಾಯದಿಂದ ನಂಬಿಸಿ ಒಪ್ಪಿಸಿರುತ್ತಾಳೆ
. ನಂತರ ದಿನಗಳಲ್ಲಿ ಸಬ್ಸಡಿ ಲೋನ್‌ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಕಟ್ಟಬೇಕು ಎಂದು ಹೆಳಿದ್ದು, ಅದರಂತೆ ಸರಿತಾ ಲೂವಿಸ್ ದಾರರಿಂದ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್‌, ಮಾಲತಿ, ಪ್ರವೀಣ್‌, ಹರಿಪ್ರಸಾದ್‌, ನಾಗರಾಜ ಮತ್ತು ಭಾರತಿ ಸಿಂಗ್‌ ಎಂಬುವರಿಗೆ ನಗದು ರೂಪದಲ್ಲಿ ಒಟ್ಟು 80,72,000/- ರೂಪಾಯಿ ಹಣ ನೀಡಿರುತ್ತಾರೆ.
ಸರಿತಾರ ಸಂಬಂಧಿ ಅಂಜಲಿನ್‌ ಡಿಸಿಲ್ವಾ ರವರಿಗೂ ಕೂಡಾ PMEGP ಅಡಿಯಲ್ಲಿ ಸಬ್ಸಡಿ ಲೋನ್‌ ಮಾಡಿಸಿಕೊಡುತ್ತೇನೆ ಎಂದು ಹೇಳಿ ಹಂತ ಹಂತವಾಗಿ ಸರಿತಾ ಅವರು ಮೇಲೆ ತಿಳಿಸಿದ ವ್ಯಕ್ತಿಗಳಿಗೆ 65,00,000/- ರೂಪಾಯಿ ನಗದು ಹಣವನ್ನು ನೀಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a comment

Leave a Reply

Your email address will not be published. Required fields are marked *

Related Articles

ಕೆಂಪು ಕಲ್ಲಿನ ದರ ಕಡಿಮೆ ಮಾಡಿ ಬಡ ಜನರಿಗೆ ನೆರವಾಗುವಂತೆ ಜಿಲ್ಲಾಧಿಕಾರಿಗಳಿಗೆ:: ನವೀನ್ ಸಾಲಿಯನ್ ಮನವಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ...

ಉಡುಪಿಗೆ ಏರ್‌ಪೋರ್ಟ್‌ ಬೇಕೆನ್ನುವ ಎರಡು ದಶಕಗಳ ಕನಸಿಗೆ ಈಗ ರೆಕ್ಕೆಪುಕ್ಕ

ಪಡುಬಿದ್ರಿಯಲ್ಲಿ ಏರ್‌ಪೋರ್ಟ್‌: ಉಡುಪಿಗೆ ಬರುವ ಪ್ರಧಾನಿ ಮೋದಿಗೂ ಏರ್‌ಪೋರ್ಟ್‌ ಬೇಡಿಕೆ ಸಲ್ಲಿಕೆಯಾಗಲಿದೆ. ಬಜ್ಪೆ ಮತ್ತು ಪ್ರಸ್ತಾಪಿತ...

ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ಸಮಾಜ ಸೇವಕ ದಿ ಪಮ್ಮೊಟ್ಟು ಸುಂದರ್ ಶೆಟ್ಟಿ ಸ್ಮರಣಾರ್ಥ ಉಚಿತ ನೇತ್ರ ಚಿಕಿತ್ಸೆ ಹಾಗೂ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರ

ಹಿಂದೂ ಜನಾ ಸೇವಾ ಟ್ರಸ್ಟ್(ರಿ)ಪ್ರಸಾದ್ ನೇತ್ರಾಲಯ ನೇತ್ರ ಜ್ಯೋತಿ ಸೇವಾ ಟ್ರಸ್ಟ್ ಪಮ್ಮೊಟ್ಟು ದಿ ಸುಂದರ...

15 ವರ್ಷದ ಕೆಳಗಿನ ವಯೋಮಾನದ ಅಖಿಲ ಭಾರತ ಬಿಕೂ ಪೈ ಆ್ಯಂಗಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಉಡುಪಿ ಕ್ರಿಕೆಟ್ ತಂಡ

ಗೋವಾದಲ್ಲಿ ನಡೆಯುತ್ತಿರುವ 15 ವರ್ಷದ ಕೆಳಗಿನ ವಯೋಮಾನದ ಕ್ರಿಕೆಟ್ ಪಂದ್ಯಾಟಕ್ಕಾಗಿ ತೆರಳಿದ ಉಡುಪಿ ತಂಡ ಯು.ಎ.ಇ....