ಭಾರತದ ಪ್ರವಾಸ ದುಬಾರಿ ಎನ್ನುವ ವಿದೇಶಿಗರು, ದೇಶದ ಪ್ರವಾಸೋದ್ಯಮಕ್ಕೆ ಎಚ್ಚರಿಕೆ ಅತ್ಯಂತ ಸುಲಭವಾದ ವೀಸಾ ಪದ್ದತಿಯಿಂದ ಬೇರೆ ದೇಶಗಳ ಮೇಲೆ ಪ್ರವಾಸಿಗರ ಆಕರ್ಷಣೆ ಭಾರತದಲ್ಲಿ ಅತ್ಯಂತ ಪ್ರಮುಖ ವಲಯ ಪ್ರವಾಸೋದ್ಯಮ, ಉದ್ಯಮವನ್ನು ಹೇಗೆ ಉಳಿಸಿಕೊಳ್ಳುವುದು? ಪ್ರವಾಸೋದ್ಯಮಕ್ಕೆ ಎಚ್ಚರಿಕೆಯ ಗಂಟೆ ಪ್ರವಾಸೋದ್ಯಮ ಎನ್ನುವುದು ಎಲ್ಲಾ ದೇಶಗಳದ ಹೆಮ್ಮೆ.
ನಮ್ಮ ದೇಶದ ವಿಚಾರಕ್ಕೆ ಬರುವುದಾದರೆ, ಅಜಂತಾದಿಂದ ಹಂಪಿಯವರೆಗೆ, ತಾಜ್ ಮಹಲ್ ನಿಂದ ಗೋವಾದ ಬೀಚ್ ಗಳವರೆಗೆ, ಭಾರತದಲ್ಲಿ ವಿಶ್ವಪರಂಪರೆಯ ಆಕರ್ಷಣೆಗಳು ಒಂದಾ.. ಎರಡಾ.. ಆದರೂ, ವಿದೇಶಿ ಪ್ರವಾಸಿಗರ ಕಣ್ಣುಗಳಲ್ಲಿ ಭಾರತದ ಭಾವಚಿತ್ರ ಇಂದು ಅಪಾಯದ ಅಂಚಿನಲ್ಲಿ ನಿಂತಿದೆ. ನಮ್ಮ ದೇಶಕ್ಕೆ ಬೇರೊಂದು ಹಣೆಪಟ್ಟಿಯನ್ನು ಕಟ್ಟಲಾಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು. ಅದು ಸರ್ಕಾರದ್ದೇ ಆಗಿರಬಹುದು, ಸಾರ್ವಜನಿಕರ ತಪ್ಪೂ ಆಗಿರಬಹುದು.

ಇತ್ತೀಚಿನ ದಿನಗಳಲ್ಲಿ ಥೈಲ್ಯಾಂಡ್, ಮಲೇಷ್ಯಾ, ಬಾಲಿ, ವಿಯೆಟ್ನಾಂ, ಕಾಂಬೋಡಿಯಾ ಮತ್ತು ಶ್ರೀಲಂಕಾ ಮುಂತಾದ ದೇಶಗಳು, ಪ್ರವಾಸಿಗರ ಮೆಚ್ಚಿನ ತಾಣಗಳಾಗುತ್ತಿವೆ. ಇದಕ್ಕೆ ಕಾರಣ ಸರಳ : ಅಗ್ಗದ ವೆಚ್ಚ, ಸುಲಭವಾದ ವೀಸಾ ಪದ್ದತಿ, ವಿವಿಧ ರೀತಿಯ ವೈವಿಧ್ಯಮಯ ಆಕರ್ಷಣೆಗಳು ಮತ್ತು ಅಲ್ಲಿ ಸಿಗುವ ಅತ್ಯುತ್ತಮ ಆತಿಥ್ಯ. ಈ ವಿಭಾಗದಲ್ಲಿ, ಹೋಲಿಕೆಯಲ್ಲಿ, ಮಾಡುವಾಗ, ಭಾರತ ದೇಶದ ಪ್ರವಾಸವನ್ನು, ಪ್ರವಾಸಿಗರು “.ದುಬಾರಿ ಭಾರತ ಎಂದು ಹೇಳುತ್ತಿದ್ದಾರೆ.
ವಿದೇಶಿ ಪ್ರವಾಸಿಗರಿಗೆ ಭಾರತದ ಪ್ರವಾಸದ ವೇಳೆ ಆದ ಕೆಲವೊಂದು ಅಸಮಾಧಾನ, ಭಾರತದ ಜನರು ನಡೆದುಕೊಂಡ ರೀತಿ ಒಪ್ಪಿಕೊಳ್ಳತಕ್ಕದಲ್ಲ. ಇದು, ಪ್ರವಾಸೋದ್ಯಮಕ್ಕೆ ನೇರವಾಗಿ ಪ್ರಭಾವವನ್ನು ಬೀರುವುದು ಒಂದು ಕಡೆಯಾದರೆ, ಇದು ದೇಶಕ್ಕೆ ಕಳಂಕ ತರುವ ಘಟನೆಗಳಾಗಿವೆ. ಅಂತಹ ಕೆಲವೊಂದು ಸ್ಯಾಂಪಲ್ : ದೆಹಲಿಯ ಸ್ಮಾರಕದಲ್ಲಿ ಆಸ್ಟ್ರೇಲಿಯಾ ಪ್ರವಾಸಿಗನೊಬ್ಬ “2400% ಅಧಿಕ ವಸೂಲಿ” ಎಂದ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.

ಅದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಹೋಯಿತು. ಹೈದರಾಬಾದ್ನಲ್ಲಿ 10 ಬಾಳೆಹಣ್ಣಿಗೆ ಒಂದು ಸಾವಿರ ರೂಪಾಯಿ ವಸೂಲಿ ಮಾಡಿದ ಸುದ್ದಿ ಪ್ರವಾಸೋದ್ಯಮದ ಮಾನವನ್ನು ಕುಗ್ಗಿಸಿತು. ಗುರುಗ್ರಾಮದಲ್ಲಿ (ಹರ್ಯಾಣ) ಪೊಲೀಸ್ ಅಧಿಕಾರಿ ವಿದೇಶಿಗರೊಬ್ಬರಿಂದ ಒಂದು ಸಾವಿರ ರೂಪಾಯಿ ಲಂಚ ಪಡೆದ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಿದಾಡಿತು. ರಾಜಸ್ಥಾನದಲ್ಲಿ ಇಂಗ್ಲಿಷ್ ಪ್ರವಾಸಿಗನೊಬ್ಬ “ನನಗೆ ಏಕೆ 5 ಪಟ್ಟು ಹೆಚ್ಚು ದರ?” ಎಂದು ಪ್ರಶ್ನಿಸಿದ ಅನುಭವವನ್ನು ತಮ್ಮ ಸೋಶಿಯಲ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದ.
ಕೋಲ್ಕತ್ತಾದಲ್ಲಿ ಟ್ಯಾಕ್ಸಿ ಚಾಲಕರ ಹೆಚ್ಚುವರಿ ದರ ವಸೂಲಿ, ಗೋವಾದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸೇವೆಗಳ ದೂರುಗಳು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರನ್ನು ಮುಟ್ಟಿವೆ. ಇಂತಹ ಘಟನೆಗಳು ಭಾರತದ ಪ್ರವಾಸೋದ್ಯಮಕ್ಕೆ ಎಚ್ಚರಿಕೆ ಗಂಟೆಗಳು. ವಿಶ್ವಾಸ ಕಳೆದುಕೊಂಡ ಪ್ರವಾಸಿಗರು ಮತ್ತೆ ಹಿಂದಿರುಗುವುದಿಲ್ಲ ಇದರ ಹೊಡೆತ ನೇರವಾಗಿ ದೇಶದ ಆರ್ಥಿಕತೆಗೆ ಬೀಳುತ್ತದೆ.

ಪಾಠ ಮತ್ತು ಪರಿಹಾರ ದಕ್ಷಿಣ ಏಷ್ಯಾ ದೇಶಗಳ ಪಾಠ: ಅಗ್ಗದ ವೆಚ್ಚ + ಸುಲಭ ಪ್ರವೇಶ + ಆತ್ಮೀಯ ಸೇವೆ. ಭಾರತದ ಅಗತ್ಯ: ಬೆಲೆ ಸಮತೋಲನ, ಉತ್ತಮ ಅನುಭವ, ಪಾರದರ್ಶಕ ದರ ನಿಲುವು. ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಅತಿಯಾದ ಎಂಟ್ರನ್ಸ್ ಟಿಕೆಟ್ ಮತ್ತು ಕ್ಯಾಮೆರಾ ಶುಲ್ಕ ವಿಧಿಸುವುದನ್ನು ಮರುಪರಿಶೀಲಿಸಬೇಕು.
ASI ಸುಪರ್ದಿಯ ಕೋಟೆಗಳು ಮತ್ತು ಸ್ಮಾರಕಗಳು ಪ್ರವಾಸಿಗರು ಹೊರಗಿನಿಂದಲೇ ನೋಡಿಕೊಂಡು ಹೋಗುವಂತಾಗಬಾರದು. ನಮ್ಮ ದೇಶದ ಹೆರಿಟೇಜ್ ತಾಣಗಳು ಹೆಮ್ಮೆ ತರಬೇಕು , ಅಸಮಾಧಾನವಲ್ಲ. ಭಾರತದ ಪ್ರವಾಸೋದ್ಯಮವು ಮುಂದಿನ ದಶಕದಲ್ಲಿ ದಕ್ಷಿಣ ಏಷ್ಯಾದೊಂದಿಗೆ ಸ್ಪರ್ಧಿಸಲು, ಅತಿಯಾದ ದರದ ಬಲೆಗೆ ಪ್ರವಾಸಿಗರು ಬಲಿಯಾಗದಂತೆ ನೋಡಿಕೊಳ್ಳುವುದು ಅತ್ಯಾವಶ್ಯಕ.”
Leave a comment