ಪಿಎಫ್ ಖಾತೆಯ ಶೇಕಡಾ 100 ರಷ್ಟು ಹಣವನ್ನು ಹಿಂಪಡೆಯಲು ಅವಕಾಶ

33

ಹಲವು ಹೊಸ ನಿಯಮ ಇಪಿಎಫ್‌ಒ ಮಂಡಳಿಯು 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಅನುಕೂಲವಾಗುವಂತೆ ಭಾಗಶಃ ಹಿಂಪಡೆಯುವ ನಿಯಮಗಳನ್ನು ಸರಳಗೊಳಿಸಿದೆ. ಸದಸ್ಯರು ಈಗ ತಮ್ಮ ಪಿಎಫ್ ಖಾತೆಯ ಶೇಕಡಾ 100 ರಷ್ಟು ಹಣವನ್ನು ಹಿಂಪಡೆಯಬಹುದು. ಶಿಕ್ಷಣ ಮತ್ತು ವಿವಾಹಕ್ಕಾಗಿ ಹಿಂಪಡೆಯುವ ಮಿತಿಗಳನ್ನು ಹೆಚ್ಚಿಸಲಾಗಿದೆ. 12 ತಿಂಗಳ ಸೇವಾ ಅವಧಿಯ ನಂತರ ಯಾವುದೇ ಕಾರಣವಿಲ್ಲದೆ ಹಣ ಹಿಂಪಡೆಯಲು ಅವಕಾಶವಿದೆ. ಇದರಿಂದ ಕೋಟ್ಯಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ನೌಕರರ ಭವಿಷ್ಯ ನಿಧಿ (ಪಿಎಫ್‌) ಖಾತೆಯಿಂದ ಹಣವನ್ನು ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ. ಪಿಎಫ್ ಖಾತೆಯಲ್ಲಿರುವ ಶೇಕಡಾ 100ರಷ್ಟು ಹಣವನ್ನು ಹಿಂಪಡೆಯಲು ಅವಕಾಶ. ಈ ಹೊಸ ನಿಯಮದಿಂದ ಸುಮಾರು 7 ಕೋಟಿ ಉದ್ಯೋಗಿಗಳಿಗೆ ಅನುಕೂಲ. ಇಪಿಎಫ್‌ಒ ನಿಯಮದಲ್ಲಿ ಬದಲಾವಣೆ

ಬೆಂಗಳೂರು: ನೌಕರರ ಭವಿಷ್ಯ ನಿಧಿ (ಪಿಎಫ್‌) ಖಾತೆಯಿಂದ ಹಣವನ್ನು ಹಿಂಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಪಿಎಫ್ ಖಾತೆಯಲ್ಲಿರುವ ಶೇಕಡಾ 100ರಷ್ಟು ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸುಮಾರು 7 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಇದ್ದ 13 ಸಂಕೀರ್ಣ ನಿಯಮಗಳನ್ನು ಈಗ ‘ಅತ್ಯವಶ್ಯಕ ಅಗತ್ಯಗಳು’, ‘ವಸತಿ ಅಗತ್ಯಗಳು’ ಮತ್ತು ‘ವಿಶೇಷ ಸಂದರ್ಭಗಳು’ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಕನಿಷ್ಠ ಸೇವಾ ಅವಧಿಯನ್ನು 12 ತಿಂಗಳಿಗೆ ಇಳಿಕೆ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಈ ಹಿಂದೆ ಇದ್ದ ಕಠಿಣ ನಿಯಮಗಳನ್ನು ಬದಲಾಯಿಸಲಾಗಿದೆ. ಶಿಕ್ಷಣಕ್ಕಾಗಿ ಪಿಎಫ್ ಹಣವನ್ನು ಭಾಗಶಃ ಹಿಂಪಡೆಯಲು ಈಗ 10 ಬಾರಿ ಅವಕಾಶವಿದೆ. ಮದುವೆಗಾಗಿ ಹಣ ತೆಗೆಯಲು 5 ಬಾರಿ ಅವಕಾಶ ನೀಡಲಾಗಿದೆ. ಈ ಮೊದಲು ಶಿಕ್ಷಣ ಮತ್ತು ಮದುವೆಗೆ ಕೇವಲ 3 ಬಾರಿ ಮಾತ್ರ ಹಣ ಹಿಂಪಡೆಯಲು ಸಾಧ್ಯವಿತ್ತು.

ಪಿಎಫ್ ಖಾತೆಯಿಂದ ಹಣವನ್ನು ಭಾಗಶಃ ಹಿಂಪಡೆಯಲು ಕನಿಷ್ಠ ಸೇವಾ ಅವಧಿಯನ್ನು 12 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಕಾರಣ ನೀಡದೆ ಹಣ ಪಡೆಯಲು ಅವಕಾಶ ‘ವಿಶೇಷ ಸಂದರ್ಭಗಳು’ ಎಂಬ ವಿಭಾಗದ ಅಡಿಯಲ್ಲಿ, ಪ್ರಕೃತಿ ವಿಕೋಪ, ಕಾರ್ಖಾನೆ ಲಾಕೌಟ್, ನಿರಂತರ ನಿರುದ್ಯೋಗ ಅಥವಾ ಸಾಂಕ್ರಾಮಿಕ ರೋಗಗಳಂತಹ ಕಾರಣಗಳನ್ನು ನೀಡದೆಯೇ ಹಣವನ್ನು ಹಿಂಪಡೆಯಲು ಈಗ ಅವಕಾಶವಿದೆ.

ಈ ಸರಳೀಕರಣದಿಂದಾಗಿ ಉದ್ಯೋಗಿಗಳಿಗೆ ತಮ್ಮ ಹಣವನ್ನು ಅಗತ್ಯ ಸಂದರ್ಭಗಳಲ್ಲಿ ಸುಲಭವಾಗಿ ಬಳಸಿಕೊಳ್ಳಲು ಅನುಕೂಲವಾಗಲಿದೆ. ಈ ಹೊಸ ನಿಯಮಗಳು ಉದ್ಯೋಗಿಗಳ ಆರ್ಥಿಕ ಭದ್ರತೆಗೆ ಇನ್ನಷ್ಟು ಬಲ ತುಂಬಲಿವೆ. ಇಪಿಎಫ್‌ಒ ಮಂಡಳಿಯು ವಿಶ್ವಾಸ್ ಯೋಜನೆಯನ್ನು ಕೂಡ ಅಂಗೀಕರಿಸಿದೆ. ಇದು ಪಿಎಫ್ ಪಾವತಿಯಲ್ಲಿ ವಿಳಂಬವಾದಾಗ ವಿಧಿಸುವ ದಂಡಕ್ಕೆ ಸಂಬಂಧಿಸಿದ ದೀರ್ಘಕಾಲದ ವಿವಾದಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆ.

ಮೇ 2025ರ ಹೊತ್ತಿಗೆ, 2,406 ಕೋಟಿ ರೂಪಾಯಿಗಳ ದಂಡ ಬಾಕಿ ಇತ್ತು ಮತ್ತು ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳೂ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ 6,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದವು. (ಪಿಎಫ್‌ ಖಾತೆ ಬ್ಯಾಲೆನ್ಸ್‌ ನೋಡುವುದು ಹೇಗೆ?) ಹೊಸ ಯೋಜನೆಯ ಅಡಿಯಲ್ಲಿ, ದಂಡವನ್ನು ತಿಂಗಳಿಗೆ ಶೇ.1ರಷ್ಟು ನಿಗದಿತ ದರಕ್ಕೆ ಇಳಿಸಲಾಗುವುದು. ಎರಡು ತಿಂಗಳವರೆಗೆ ವಿಳಂಬವಾದರೆ ಶೇ.0.25ರಷ್ಟು ಮತ್ತು ನಾಲ್ಕು ತಿಂಗಳವರೆಗೆ ವಿಳಂಬವಾದರೆ ಶೇ.0.50ರಷ್ಟು ದರವನ್ನು ವಿಧಿಸಲಾಗುತ್ತದೆ.

ಈ ಯೋಜನೆ ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ, ಇದನ್ನು ಮತ್ತೊಂದು ಆರು ತಿಂಗಳು ವಿಸ್ತರಿಸಬಹುದು. ಇದು ಸೆಕ್ಷನ್ 14B ಅಡಿಯಲ್ಲಿನ ಪ್ರಸ್ತುತ, ಅಂತಿಮಗೊಂಡ ಮತ್ತು ವಿಚಾರಣೆಗೆ ಮುಂಚಿನ ಪ್ರಕರಣಗಳನ್ನು ಒಳಗೊಂಡಿದೆ. ಈ ಯೋಜನೆಯ ಅಡಿಯಲ್ಲಿ ನಿಯಮಗಳನ್ನು ಪಾಲಿಸಿದರೆ, ಬಾಕಿ ಇರುವ ಎಲ್ಲಾ ಪ್ರಕರಣಗಳು ರದ್ದಾಗುತ್ತವೆ. ಪಿಂಚಣಿದಾರರ ಅನುಕೂಲಕ್ಕಾಗಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದರ ಅನ್ವಯ, ಪಿಂಚಣಿದಾರರಿಗೆ ಯಾವುದೇ ಶುಲ್ಕವಿಲ್ಲದೆ ಮನೆ ಬಾಗಿಲಲ್ಲೇ ಡಿಜಿಟಲ್ ಜೀವನ್ ಪ್ರಮಾಣಪತ್ರ ಸೇವೆಗಳನ್ನು ಒದಗಿಸಲಾಗುತ್ತದೆ. ಪ್ರಮಾಣಪತ್ರಕ್ಕೆ ವಿಧಿಸುವ 50 ರೂಪಾಯಿ ಶುಲ್ಕವನ್ನು EPFO ಭರಿಸಲಿದೆ. ಈ ಉಪಕ್ರಮವು ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿರುವ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಇದರಿಂದ ಮನೆಗಳಲ್ಲೇ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಪಿಂಚಣಿ ವಿತರಣೆ ನಿರಂತರವಾಗಿ ಮುಂದುವರಿಯುತ್ತದೆ.”

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...