ಶೀಘ್ರದಲ್ಲೇ ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಹಿಲ್ಸ್‌ನಲ್ಲಿ ಕೇಬಲ್ ಕಾರ್ ಸೇವೆ ಆರಂಭ

21

2027ರೊಳಗಾಗಿ ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಹಿಲ್ಸ್‌ನಲ್ಲಿ ಕೇಬಲ್ ಕಾರ್ ಸೇವೆ ಬೆಟ್ಟದ ಮೇಲಿನ ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆ ಅನುಮತಿ ಪಡೆದ ತಕ್ಷಣ ಕಾಮಗಾರಿ ಆರಂಭ ಒಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಂಪನಿಗೆ ಗಡುವು ಕೊಟ್ಟ ಅರಣ್ಯ ಇಲಾಖೆ ನಂದಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ

ಚಿಕ್ಕಬಳ್ಳಾಪುರ: ಬೆಂಗಳೂರಿನ ಸಮೀಪವಿರುವ ನಂದಿ ಬೆಟ್ಟದಲ್ಲಿ 2027ರ ವೇಳೆಗೆ ಕೇಬಲ್ ಕಾರ್(ರೋಪ್‌ ವೇ) ಸೇವೆ ಆರಂಭವಾಗುವ ಸಾಧ್ಯತೆ ಇದೆ. ನಂದಿ ಬೆಟ್ಟ ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರನ್ನು ಸೆಳೆಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ನಂದಿ ಬೆಟ್ಟದಲ್ಲಿ ಕೇಬಲ್‌ ಕಾರ್‌(ರೋಪ್‌ ವೇ) ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್‌ನಲ್ಲಿ ಬೆಟ್ಟದ ಮೇಲಿನ ಟರ್ಮಿನಲ್‌ಗೆ ಬೇಕಾದ 3.5 ಎಕರೆ ಖಾಸಗಿ ಭೂಮಿಯ ಸ್ವಾಧೀನವೂ ಮುಗಿಯಲಿದೆ. ಇದರಿಂದಾಗಿ ಪ್ರವಾಸಿಗರು ಕೇಬಲ್ ಕಾರ್ ಮೂಲಕ ನಂದಿ ಬೆಟ್ಟದ ಸುಂದರ ದೃಶ್ಯಗಳನ್ನು ಇನ್ನಷ್ಟು ಆನಂದಿಸಬಹುದಾಗಿದೆ.  

ನಂದಿ ಬೆಟ್ಟವು ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಸುಂದರ ಗಿರಿಧಾಮ. ಇಲ್ಲಿನ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮತ್ತು ಹೊರ ರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದು ಪ್ರೇಮಿಗಳ ತಾಣ ಎಂತಲೂ ಜನಪ್ರಿಯವಾಗಿದೆ. 2027ರ ನಂತರ ಕೇಬಲ್‌ ಕಾರ್‌ ಯೋಜನೆಯಿಂದ ಮತ್ತಷ್ಟು ಪ್ರವಾಸಿಗರು ನಂದಿ ಬೆಟ್ಟದ ಸೌಂದರ್ಯ ಆನಂದಿಸಲಿದ್ದಾರೆ. 3.5 ಎಕರೆ ಭೂಸ್ವಾಧೀನ ಬಾಕಿ ʻಚಿಕ್ಕಬಳ್ಳಾಪುರ ಜಿಲ್ಲಾಡಳಿತವು 2025ರ ಆರಂಭದಲ್ಲಿ ಕೇಬಲ್ ಕಾರ್ ಟರ್ಮಿನಲ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು.

ಮೊದಲು ಕೆಳಗಿನ ಟರ್ಮಿನಲ್‌ಗಾಗಿ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈಗ ಬೆಟ್ಟದ ಮೇಲಿನ ಕಾರಿಡಾರ್‌ ಉದ್ದಕ್ಕೂ ಇರುವ 3.5 ಎಕರೆ ಖಾಸಗಿ ಭೂಮಿಯನ್ನು ಜಿಲ್ಲಾಡಳಿತ ನವೆಂಬರ್‌ನಲ್ಲಿ ಸ್ವಾಧೀನಪಡಿಸಿಕೊಳ್ಳಲಿದೆ.ಈ ಭೂಸ್ವಾಧೀನ ಪೂರ್ಣಗೊಂಡರೆ, ಕೇಬಲ್ ಕಾರ್ ಯೋಜನೆಯ ಕೆಲಸಗಳು ವೇಗ ಪಡೆದುಕೊಳ್ಳುತ್ತವೆ.

ಯಾವುದೇ ಅಡೆತಡೆಗಳಿಲ್ಲದೆ ಯೋಜನೆ ಸುಸೂತ್ರವಾಗಿ ಪೂರ್ಣಗೊಂಡರೆ, ಪ್ರವಾಸಿಗರು ತಮ್ಮ ಪ್ರವಾಸವನ್ನು ರೋಮಾಂಚನಕಾರಿಯಾಗಿ ಅನುಭವಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. 1.5 ವರ್ಷದೊಳಗೆ ಕಾಮಗಾರಿ ಪೂರ್ಣಕ್ಕೆ ಗಡುವು ನಂದಿ ಬೆಟ್ಟದಲ್ಲಿ 2.9 ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಾಣದ ಯೋಜನೆಯು ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಕೈಗೆತ್ತಿಕೊಂಡಿದೆ.

ಈ ಯೋಜನೆಯು 2027ರ ಮಧ್ಯಭಾಗದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ, ಯೋಜನೆಯ ಅಂತಿಮ ಯೋಜನೆಗಳನ್ನು ಅನುಮೋದನೆಗಾಗಿ ಸಲ್ಲಿಸಲಾಗಿದೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡದುಕೊಳ್ಳುವುದು ಬಾಕಿ ಇದೆ. ಮುಂದಿನ ಎರಡು ತಿಂಗಳಲ್ಲಿ ಅನುಮೋದನೆಗಳು ದೊರೆತು, ನಂತರ ಸಿವಿಲ್ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.

Nandi Hills: ಬಡವರ ಊಟಿ ನಂದಿ ಬೆಟ್ಟದಲ್ಲಿ ಪ್ರವಾಸಿಗರ ಕಲರವ! ಮಳೆರಾಯನ ಲೆಕ್ಕಿಸದೇ ಚುಮುಚುಮ ಚಳಿಯಲ್ಲಿ ನಂದಿ ಹಿಲ್ಸ್‌ಗೆ ಟೂರಿಸ್ಟ್‌ ಲಗ್ಗೆ ಎಲ್ಲ ರೀತಿಯ ಅನುಮತಿ ಪಡೆದ ನಂತರ, ಕಂಪನಿ ಕೆಲಸ ಆರಂಭಿಸಿ, ಸಂಪೂರ್ಣಗೊಳಿಸಲು 1.5 ವರ್ಷಗಳ ಗಡುವು ನೀಡಲಾಗಿದೆ. ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರ್ಮಾಣ ಕಾರ್ಯ ಆರಂಭವಾಗುವ ಸಾಧ್ಯತೆಯಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. ಭೂ ಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಬಾಕಿ ಈ ರೋಪ್‌ವೇ ಯೋಜನೆಯಿಂದಾಗಿ ನಂದಿ ಬೆಟ್ಟದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಲಿದೆ.

ಇದು ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜೊತೆಗೆ, ಆರ್ಥಿಕ ಚಟುವಟಿಕೆಗಳಿಗೂ ಸಹಾಯ ಮಾಡಲಿದೆ. 2023ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಬಲ್‌ ಕಾರ್‌ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುಧಾಕರ್ ಕೆ ಅವರು ಈ ಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದರು. ಆದರೆ, ನಂದಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಿಸುವ ಕಲ್ಪನೆ ಅದಕ್ಕೂ ಹಲವು ದಶಕಗಳ ಹಿಂದೆಯೇ ಇತ್ತು. ಕೇಬಲ್‌ ಕಾರ್‌ ಯೋಜನೆಯಲ್ಲಿ ಎದುರಾದ ಪ್ರಮುಖ ಅಡೆತಡೆಗಳಲ್ಲಿ ಭೂಸ್ವಾಧೀನ ಮತ್ತು ಅರಣ್ಯ ಇಲಾಖೆಯ ಅನುಮತಿ ಪ್ರಮುಖವಾದವು.

ರೋಪ್‌ವೇಗೆ ಬೆಂಬಲ ನೀಡುವ ಒಂದು ಕಂಬ ಅರಣ್ಯ ಭೂಮಿಯ ಮಧ್ಯೆ ಬರುವುದರಿಂದ ಅರಣ್ಯ ಇಲಾಖೆಯ ಅನುಮತಿ ಇನ್ನೂ ಬಾಕಿ ಇದೆ. ಏನೆಲ್ಲ ಸೌಲಭ್ಯ ಇರಲಿದೆ? ಕೆಳಗಿನ ಟರ್ಮಿನಲ್‌ನಲ್ಲಿ 200ಕ್ಕೂ ಹೆಚ್ಚು ಕಾರುಗಳು, 110 ದ್ವಿಚಕ್ರ ವಾಹನಗಳು, ಬಸ್ಸುಗಳು ಮತ್ತು ವ್ಯಾನ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.

600 ಮಂದಿ ಕುಳಿತುಕೊಳ್ಳಬಹುದಾದ ವಿಶ್ರಾಂತಿ ಪ್ರದೇಶ ನಿರ್ಮಿಸುವುದು. ಒಟ್ಟು 50 ಅರೆ-ಮುಚ್ಚಿದ ಕ್ಯಾಬಿನ್‌ಗಳು ಇರಲಿವೆ. ಇವು ಪ್ರವಾಸಿಗರನ್ನು ಬೆಟ್ಟದ ಕೆಳಗೆ ಮತ್ತು ಮೇಲಿನ ಟರ್ಮಿನಲ್‌ಗಳ ನಡುವೆ ಕರೆದೊಯ್ಯಲಿವೆ. ಈ ಕ್ಯಾಬಿನ್‌ಗಳಿಂದ ಬೆಟ್ಟಗಳ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು ಎನ್ನಲಾಗಿದೆ.”

Leave a comment

Leave a Reply

Your email address will not be published. Required fields are marked *

Related Articles

ವಂದೇ ಮಾತರಂ’ ಹಾಡುವುದು ಕಡ್ಡಾಯ: ಏಕಪಕ್ಷೀಯ ಮತೀಯ ಅಜೆಂಡಕ್ಕೆ ವಿರೋಧ:: ಜಮಿಯತ್ ಉಲಮಾ-ಇ -ಹಿಂದ್

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ...

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...