ದಿ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಸುವರ್ಣಮುಖಿ ನದಿ ಪುನರುಜ್ಜೀವನ ಜಾಗೃತಿ

23

ಅಂತರ್ಜಲ ಮಟ್ಟವನ್ನು ಹೆಚ್ಚಿಸಲು, ಮಾಲಿನ್ಯವನ್ನು ತಡೆಗಟ್ಟಲು ಮತ್ತು ಸಮುದಾಯಗಳನ್ನು ಸಜ್ಜುಗೊಳಿಸಲು ಪ್ರಕೃತಿ ಆಧಾರಿತ ಪರಿಹಾರಗಳ ಮೇಲೆ ಚರ್ಚೆಗಳು ಕೇಂದ್ರೀಕರಿಸಿದವು. ಈ ಉಪಕ್ರಮವು 69 ಹಳ್ಳಿಗಳ 9.3 ಲಕ್ಷ ಜನರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ.

ಬೆಂಗಳೂರಿನ ನೀರಿನ ಭವಿಷ್ಯಕ್ಕಾಗಿ ನೀತಿಗತ ದೃಷ್ಟಿಕೋನಗಳು, ಪಾರಂಪರಿಕ ಜ್ಞಾನ ಮತ್ತು ನಾಗರಿಕರ ಸಹಭಾಗಿತ್ವಗಳನ್ನು ಮಾರ್ಗಸೂಚಿಯಲ್ಲಿ ಹೆಣೆಯಿತು. ಕುಂದುತ್ತಿರುವ ಬೆಂಗಳೂರಿನ ನೀರಿನ ಸಂಪನ್ಮೂಲಗಳನ್ನು ಮತ್ತು ಕಣ್ಮರೆಯಾಗುತ್ತಿರುವ ಹಸಿರು ಹೊದಿಕೆಯನ್ನು ಸಂರಕ್ಷಿಸುವುದು ಆದ್ಯತೆ.

ಸುವರ್ಣಮುಖಿ ನದಿ ಪುನರುಜ್ಜೀವನ ಯೋಜನೆಯು ದಿ ಆರ್ಟ್ ಆಫ್ ಲಿವಿಂಗ್‌ನ, ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಅಂತರ್ಜಲವನ್ನು ಪುನಃಸ್ಥಾಪಿಸುವ ವ್ಯಾಪಕ ರಾಷ್ಟ್ರೀಯ ಆಂದೋಲನದ ಭಾಗವಾಗಿದೆ 

ಬೆಂಗಳೂರು: ಅಂತರ್ಜಲ ಮಟ್ಟಗಳು ಕ್ಷೀಣಿಸುತ್ತಿರುವುದು, ಸರೋವರಗಳು ಕಣ್ಮರೆಯಾಗುತ್ತಿರುವುದು ಮತ್ತು ಕಾವೇರಿ ನದಿಯ ಮೇಲೆ ಅತಿಯಾದ ಅವಲಂಬನೆಯೊಂದಿಗೆ, ಬೆಂಗಳೂರಿನ ನೀರಿನ ಬಿಕ್ಕಟ್ಟು ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ದಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಸುವರ್ಣಮುಖಿ ನದಿ ಪುನರುಜ್ಜೀವನ ಜಾಗೃತಿ ಮತ್ತು ಕ್ರಿಯಾ ಕಾರ್ಯಾಗಾರವು ಸರ್ಕಾರಿ ನಾಯಕರು, ವಿಜ್ಞಾನಿಗಳು ಮತ್ತು ಸಮುದಾಯ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಕಾರ್ಯಸಾಧ್ಯ ಪರಿಹಾರಗಳನ್ನು ರೂಪಿಸಿತು.

ನೈಸರ್ಗಿಕ ಜಲ ಮರುಪೂರಣವನ್ನು ಪುನಃಸ್ಥಾಪಿಸುವುದು, ಪ್ರಕೃತಿ ಆಧಾರಿತ ವಿಧಾನಗಳ ಮೂಲಕ ಮಾಲಿನ್ಯವನ್ನು ನಿಭಾಯಿಸುವುದು ಮತ್ತು ದೀರ್ಘಕಾಲೀನ ನೀರಿನ ಸುರಕ್ಷತೆಗಾಗಿ ಸಮುದಾಯಗಳನ್ನು ಸಜ್ಜುಗೊಳಿಸುವುದರ ಮೇಲೆ ಚರ್ಚೆಗಳು ಗಮನ ಹರಿಸಿದ್ದವು.

ಜಾಗತಿಕ ಮಾನವತಾವಾದಿ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ರವರ, ಭಾರತದ ನಶಿಸುತ್ತಿರುವ ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಭಾರತವನ್ನು ಜಲಸಂಪನ್ಮೂಲವನ್ನಾಗಿ ಮಾಡುವ ದೃಷ್ಟಿಕೋನದಿಂದ ಪ್ರೇರಿತರಾಗಿ, ದಿ ಆರ್ಟ್ ಆಫ್ ಲಿವಿಂಗ್, ಕರ್ನಾಟಕ ಸರ್ಕಾರ ಮತ್ತು ಐಐಎಂ ಬೆಂಗಳೂರು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ತಾಂತ್ರಿಕ ಅಧಿವೇಶನಗಳನ್ನು ಮೀರಿಹೋಗಿ, ಬೆಂಗಳೂರಿನ ನೀರಿನ ಭವಿಷ್ಯಕ್ಕಾಗಿ ನೀತಿಗತ ದೃಷ್ಟಿಕೋನಗಳು, ಪಾರಂಪರಿಕ ಜ್ಞಾನ ಮತ್ತು ನಾಗರಿಕರ ಸಹಭಾಗಿತ್ವಗಳನ್ನು ಮಾರ್ಗಸೂಚಿಯಲ್ಲಿ ಹೆಣೆಯಿತು.

ಕಾರ್ಯಾಗಾರವು ಸಾಂಕೇತಿಕವಾದ ಜಲ ಕಲಶ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಇದರಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಐದು ನದಿಗಳಾದ ಕುಮುದ್ವತಿ, ಅರ್ಕಾವತಿ, ವೃಷಭಾವತಿ, ಸುವರ್ಣಮುಖಿ ಮತ್ತು ಪಾಲಾರ್ ನಿಂದ ಸಂಗ್ರಹಿಸಲಾದ ನೀರನ್ನು ಪವಿತ್ರಗೊಳಿಸಿ ಒಟ್ಟುಸೇರಿಸಲಾಯಿತು. ನಂತರ ವೈದಿಕ ಗುರುಕುಲದ ವಿದ್ಯಾರ್ಥಿಗಳು ಋಗ್ವೇದದ ಆಪಃ ಸೂಕ್ತವನ್ನು ಪಠಿಸಿದರು. ಈ ಮೂಲಕ ನೀರಿನ ಪವಿತ್ರತೆ ಮತ್ತು ಜೀವ ನೀಡುವ ಶಕ್ತಿಯನ್ನು ಆಹ್ವಾನಿಸಿದರು.

ನದಿಗಳ ಬಗ್ಗೆ ಭಾರತದಲ್ಲಿರುವ ಸಾಂಸ್ಕೃತಿಕ ಶ್ರದ್ಧೆಯ ಈ ಭಾವನೆಯು ಸಂವಾದ ಮತ್ತು ಕ್ರಿಯಾಶೀಲತೆಯ ದಿನಕ್ಕೆ ನಾಂದಿ ಹಾಡಿತು. “ನದಿಗಳು ಮತ್ತು ಮಳೆ ಜೀವನದ ತೊಟ್ಟಿಲು. ಕುಂದುತ್ತಿರುವ ಬೆಂಗಳೂರಿನ ನೀರಿನ ಸಂಪನ್ಮೂಲಗಳನ್ನು ಮತ್ತು ಕಣ್ಮರೆಯಾಗುತ್ತಿರುವ ಹಸಿರು ಹೊದಿಕೆಯನ್ನು ಸಂರಕ್ಷಿಸುವುದು ನಮ್ಮ ಆದ್ಯತೆ. ಪುಣ್ಯ ನದಿಗಳ ನೀರನ್ನು ನಾವು ನಮ್ಮನ್ನು ಶುದ್ಧೀಕರಿಸಿಕೊಳ್ಳಲು ಬಳಸಿದ್ದೇವೆ.

ಆದರೆ ಇಂದು ಅದೇ ನದಿಗಳನ್ನು ಶುದ್ಧೀಕರಿಸಬೇಕಾಗಿರುವ ಸ್ಥಿತಿಗೆ ತಲುಪಿದ್ದೇವೆ. ಸರ್ಕಾರಿ ಸಂಸ್ಥೆಗಳು ಮತ್ತು ಆರ್ಟ್ ಆಫ್ ಲಿವಿಂಗ್ ನ ನದಿಗಳ ಪುನಶ್ಚೇತನದ ತಂಡವು ಜಂಟಿಯಾಗಿ ತಯಾರಿಸಿರುವ ಯೋಜನೆಯು ಭರವಸೆಯ ಆರಂಭವಾಗಿದೆ. ಇದನ್ನು ನಾವು ಕಾರ್ಯರೂಪಕ್ಕೆ ತಂದು, ಜನರಿಗೆ, ಮರಗಳಿಗೆ ಮತ್ತು ಎಲ್ಲಾ ರೀತಿಯ ಜೀವಗಳಿಗೆ ಶಾಶ್ವತವಾದ ನೀರಿನ ಸುರಕ್ಷತೆಯನ್ನು ನೀಡಬೇಕಾಗಿದೆ” ಎಂದು ಗುರುದೇವ್ ಹೇಳುತ್ತಾರೆ.

ಕಾರ್ಯಾಗಾರವನ್ನು ಉದ್ಘಾಟಿಸಿದ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹಾದೇವನ್, ಐಎಎಸ್, ಯೋಜನೆಯ ಪ್ರಮಾಣ ಮತ್ತು ಸಾಮರ್ಥ್ಯವನ್ನು ಒತ್ತಿ ಹೇಳಿದರು ಮತ್ತು “ಆರ್ಥಿಕ ಬೆಳವಣಿಗೆಗೆ ತ್ವರಿತ ನಗರ ವಿಸ್ತರಣೆ ಅಗತ್ಯ, ಆದರೆ ಇದು ಅಂತರ್ಜಲ ಮಟ್ಟವನ್ನು ಕಡಿಮೆ ಮಾಡಿದೆ.

65 ಮಿಲಿಯನ್ ಘನ ಅಡಿ ಸಂಗ್ರಹ ಸಾಮರ್ಥ್ಯದೊಂದಿಗೆ 216 ಚದರ ಕಿಲೋಮೀಟರ್ ಪೆರಿ-ಅರ್ಬನ್ ಪ್ರದೇಶವನ್ನು ಒಳಗೊಂಡಿರುವ ಈ ಜಲಾಶಯ ಮತ್ತು ಅದರ 110 ಸಂಬಂಧಿತ ಜಲಮೂಲಗಳು ಮತ್ತು 332 ಹೊಳೆಗಳು ಅಂತರ್ಜಲವನ್ನು ಪುನಃಸ್ಥಾಪಿಸಬಹುದು, ಮಳೆನೀರನ್ನು ಸಂಗ್ರಹಿಸಬಹುದು ಮತ್ತು ಸುತ್ತಮುತ್ತಲಿನ 69 ಹಳ್ಳಿಗಳಿಗೆ ಸುಸ್ಥಿರ ನೀರಿನ ಮೂಲವಾಗಬಹುದು.

ಈ ಯೋಜನೆಯು ಕರ್ನಾಟಕಕ್ಕೆ ಮಾತ್ರವಲ್ಲದೆ ಭಾರತದಾದ್ಯಂತ ಇತರ ರಾಜ್ಯಗಳಿಗೂ ಮಾದರಿಯಾಗಿದೆ” ಎಂದರು. ಯೋಜನೆಯ ವಿಜ್ಞಾನ-ಸಂಚಾಲಿತ, ಆದರೆ ಸಮುದಾಯ ಆಧಾರಿತ ವಿಧಾನವನ್ನು ಎತ್ತಿ ತೋರಿಸುತ್ತಾ, ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಪ್ರಭಾಶ್ ಚಂದ್ರ ರೇ, ಐಎಫ್‌ಎಸ್, ಪರಿಸರ ಪುನಃಸ್ಥಾಪನೆಯನ್ನು ವನ್ಯಜೀವಿ ಸಂರಕ್ಷಣೆಯೊಂದಿಗೆ ಹೇಗೆ ಸಮತೋಲನಗೊಳಿಸಲಾಗುತ್ತಿದೆ ಎಂಬುದನ್ನು ವಿವರಿಸಿದರು.

“ಈ ಯೋಜನೆಯಲ್ಲಿ, ಗೇಟೆಡ್ ಸಮುದಾಯಗಳು ಮತ್ತು ಆರ್‌ಡಬ್ಲ್ಯೂಎ  ಗಳಲ್ಲಿನ ನಿವಾಸಿಗಳ ಸಮುದಾಯದ ತೊಡಗಿಸಿಕೊಳ್ಳುವಿಕೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನೀರಿನ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವಾಗ ಜೀವವೈವಿಧ್ಯತೆ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲಾಗಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದರು.

ಜಲ ಜೀವನ್ ಮಿಷನ್ ಚೇರ್ ಪ್ರೊಫೆಸರ್, ಐಐಎಂ ಬೆಂಗಳೂರಿನ ಪ್ರೊ. (ಡಾ.) ಗೋಪಾಲ್ ನಾಯಕ್ ಅವರು ಮೂಲಭೂತ ಕ್ರಮಕ್ಕಾಗಿ ಕರೆ ನೀಡಿದರು. “ಈ ಯೋಜನೆಯನ್ನು ಯಶಸ್ವಿಗೊಳಿಸಲು ವರ್ತನೆಯಲ್ಲಿ ಬದಲಾವಣೆ ತರುವುದು ಅಗತ್ಯ. ಮತ್ತು ಮನಸ್ಥಿತಿಯಲ್ಲಿನ ಈ ಬದಲಾವಣೆಯನ್ನು ಮುನ್ನಡೆಸಲು ಆರ್ಟ್ ಆಫ್ ಲಿವಿಂಗ್ ಅತ್ಯುತ್ತಮ ಸ್ಥಳವಾಗಿದೆ” ಎಂದು ಅವರು ಒತ್ತಿ ಹೇಳಿದರು.

ವೈಜ್ಞಾನಿಕ ದೃಷ್ಟಿಕೋನವನ್ನು ಸೇರಿಸುತ್ತಾ, ವಿವಿಕೆಐನ ನದಿ ಪುನರುಜ್ಜೀವನ ಯೋಜನೆಗಳ ರಾಷ್ಟ್ರೀಯ ನಿರ್ದೇಶಕ ಮತ್ತು ಅಂತರ್ಜಲ ಮತ್ತು ಜಿಐಎಸ್ ಆಧಾರಿತ ಜಲ ನಿರ್ವಹಣೆಯಲ್ಲಿ ಐದು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಅನುಭವಿ ಭೂವಿಜ್ಞಾನಿ ಡಾ. ವೈ. ಲಿಂಗರಾಜು ಅವರು, “ನಗರಾಭಿವೃದ್ಧಿಯ ಹೆಸರಿನಲ್ಲಿ, ಪ್ರಕೃತಿ ಅಳುತ್ತಿದೆ” ಎಂಬುದನ್ನು ಗಮನಿಸಿದರು. ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ನೈಸರ್ಗಿಕ ಸುಸ್ಥಿರತೆ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಪ್ರತಿಪಾದಿಸಿದರು.

ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಶಕ್ತಿ ಮತ್ತು ಕಚ್ಚಾ ವಸ್ತುಗಳ ಅಗತ್ಯವಿದ್ದರೂ, “ಜೈವಿಕ ರೇಖೆಗಳು (bio-ridges), ಮಾಲಿನ್ಯ-ಹೀರಿಕೊಳ್ಳುವ ಸಸ್ಯವರ್ಗ ಮತ್ತು ಮಳೆನೀರಿನ ನೈಸರ್ಗಿಕ ಮರುಬಳಕೆಯಂತಹ ಸರಳ ಪರಿಸರ ಮಧ್ಯಸ್ಥಿಕೆ ವಿಧಾನಗಳಿಂದ ದೀರ್ಘಕಾಲೀನ ಫಲಿತಾಂಶಗಳನ್ನು ಸಾಧಿಸಬಹುದು” ಎಂದು ಅವರು ಹೇಳಿದರು. ಪಂಜಾಬ್‌ನ ಜಲ ಸಂರಕ್ಷಣಾವಾದಿ ಡಾ. ಜಗಜೀತ್ ಸಿಂಗ್ ಕೊಚಾರ್ ಅವರು ಪ್ರಸ್ತುತಪಡಿಸಿದ ನ್ಯಾನೊಬಬಲ್ ತಂತ್ರಜ್ಞಾನದಂತಹ ಹೊಸ ಆವಿಷ್ಕಾರಗಳನ್ನು ಸಹ ಕಾರ್ಯಾಗಾರದಲ್ಲಿ ಪ್ರದರ್ಶಿಸಲಾಯಿತು.

ಇದು ಪುನರುಜ್ಜೀವನ ಉಪಕ್ರಮಗಳ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾಗೀರಥ್ ಎನ್‌ಜಿಒ ಅಧ್ಯಕ್ಷ ಡಾ. ಪ್ರಕಾಶ್ ಕುಲಕರ್ಣಿ ಮತ್ತು ಪೃಥ್ವಿ ಇಕೋ ಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನ ಎಂ.ಡಿ. ಶ್ರೀ ಕ್ರಿಸ್ ಮಧುಸೂದನ್, ಜಲ ಮಾಲಿನ್ಯವನ್ನು ತಗ್ಗಿಸಲು ನವೀನ ಪ್ರಕೃತಿ ಆಧಾರಿತ ವಿಧಾನಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.”

Leave a comment

Leave a Reply

Your email address will not be published. Required fields are marked *

Related Articles

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...

2025 ರಲ್ಲಿ ರಾಜ್ಯದಲ್ಲಿ ನಿರ್ಲಕ್ಷದ ಚಾಲನೆಗಾಗಿ 5947 ವಾಹನ ಚಾಲನಾ ಪರವಾನಿಗೆ ರದ್ದು

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯು 2025 ರಲ್ಲಿ ಕರ್ನಾಟಕದಾದ್ಯಂತ 5,947 ಚಾಲನಾ ಪರವಾನಗಿಗಳನ್ನು (DL) ಅಮಾನತುಗೊಳಿಸಿದೆ....

ಬೆಂಗಳೂರಿನಲ್ಲಿ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್, ನಗದು ಜಪ್ತಿ ವಿದೇಶಿ ಪ್ರಜೆ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ, ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು...

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಇದೆ ವಾಯು ಮಾಲಿನ್ಯ ಸಮಸ್ಯೆ

ಬೆಂಗಳೂರು : ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಇದೆ ವಾಯು ಮಾಲಿನ್ಯ ಸಮಸ್ಯೆ ಅಂತರ್ಜಾಲ ಹಾಗೂ ಪತ್ರಿಕಾ...