ಸಿಲಿಕಾನ್ ಮರಳು ಅಕ್ರಮ ಸಾಗಾಟ 3 ಲಾರಿ ಮಾಲಕರ ವಿರುದ್ಧ ಪ್ರಕರಣ ದಾಖಲು

49

ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮೂಳೂರು ಗ್ರಾಮದ ಎಸ್‌.ಎಸ್‌ ರಸ್ತೆಯ ಬಳಿ ಇರುವ ಪೊಯ್ಯದ ಗುಡ್ಡೆ ಎಂಬಲ್ಲಿಂದ ಸಿಲಿಕಾನ್‌ ಮರಳನ್ನು ಜೆ.ಸಿ.ಬಿ. ಮೂಖಾಂತರ ಮೂರು ಲಾರಿಗಳಿಗೆ ತುಂಬಿಸಿ ಸಿಲಿಕಾನ್‌ ಮರಳನ್ನು ಸಾಗಾಟ ಮಾಡಿರುವುದಾಗಿ ಬಂದ ಮಾಹಿತಿಯಂತೆ  ಗ್ರಾಮದ ಎಸ್‌.ಎಸ್‌. ರಸ್ತೆಯ ಬಳಿ ಇರುವ ಪೊಯ್ಯದ ಗುಡ್ಡೆ ಎಂಬಲ್ಲಿಗೆ ಹೋಗಿ ನೋಡಲಾಗಿ ಸಿಲಿಕಾನ್‌ ಮರಳನ್ನು ಸ್ಥಳದಿಂದ ಸಾಗಾಟ ವಾಗಿರುವುದನ್ನು ಖಚಿತ ಪಡಿಸಿಕೊಂಡು ನಂತರ

ಮೂಳೂರು ಎಸ್.ಎಸ್.‌ ರಸ್ತೆಯಲ್ಲಿರುವ ಸಿಸಿ ಕ್ಯಾಮರಾವನ್ನು ಪರಿಶೀಲಿಸಲಾಗಿ ದಿನಾಂಕ: 01.10.2025 ರಂದು ಸುಮಾರು ಬೆಳಿಗ್ಗೆ 08:30 ಗಂಟೆಯಿಂದ 12:30 ಗಂಟೆಯ ನಡುವೆ KA20AB3474 ಮತ್ತು KL18K8768 ಹಾಗೂ ಇನ್ನೊಂದು ನಂಬರ್‌ ತಿಳಿಯದ ಹಳದಿ ಬಣ್ಣದ ಈಚರ್‌ ಕಂಪನಿಯ ಟಿಪ್ಪರ್‌ ಲಾರಿಯಲ್ಲಿ ವಾಹನದ ಚಾಲಕರು ಸಿಲಿಕಾನ್‌ ಮರಳನ್ನು ತಮ್ಮ ಸ್ವಂತ ಲಾಭದ ಉದ್ದೇಶಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿಕೊಂಡು ಹೋಗಿ ಅಪರಾಧ ಎಸಗಿರುವುದು ಕಂಡು ಬಂದಿದ್ದು

ಆದುದರಿಂದ KA20AB3474 ಮತ್ತು KL18K8768 ಹಾಗೂ ಇನ್ನೊಂದು ನಂಬರ್‌ ತಿಳಿಯದ ಹಳದಿ ಬಣ್ಣದ ಈಚರ್‌ ಕಂಪನಿಯ ಟಿಪ್ಪರ್‌ ಲಾರಿ ಚಾಲಕರು ಹಾಗೂ ಮಾಲಕರ ವಿರುದ್ದ ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...