60 ವರ್ಷ ಮೇಲ್ಪಟ್ಟ ಆನೆಗಳನ್ನು ಕಠಿಣ ಕೆಲಸಗಳಿಗೆ ಬಳಸುವಂತಿಲ್ಲ ಎಂಬ ನಿಯಮವಿದೆ. ಸದ್ಯಕ್ಕೆ ಭೀಮ, ಮಹೇಂದ್ರ, ಏಕಲವ್ಯ, ಧನಂಜಯ ಸೇರಿದಂತೆ ಇತರೆ ಆನೆಗಳು ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಮೈಸೂರಿಗೆ ಆಗಮಿಸಿದ್ದ 3 ಹೊಸ ಆನೆಗಳ ಜತೆಗೆ ಎಲ್ಲಾ 14 ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷ
ಮೈಸೂರು: ಮುಂದಿನ ವರ್ಷವೂ ಕ್ಯಾಪ್ಟನ್ ಅಭಿಮನ್ಯುವೇ 750 ಕೆಜಿ ತೂಕದ ಅಂಬಾರಿ ಹೊರುತ್ತಾನೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದ್ದಾರೆ. 60 ವರ್ಷ ಮೇಲ್ಪಟ್ಟ ಆನೆಗಳನ್ನು ಕಠಿಣ ಕೆಲಸಗಳಿಗೆ ಬಳಸುವಂತಿಲ್ಲ ಎಂಬ ನಿಯಮವಿದೆ. ಪ್ರಸ್ತುತ ಅಭಿಮನ್ಯುವಿಗೆ 59 ವರ್ಷ .

ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಅಭಿಮನ್ಯು ಅಂಬಾರಿ ಹೊರುತ್ತಾನೆಯೇ ಎಂಬ ಪ್ರಶ್ನೆ ಎದ್ದಿತ್ತು. ಇದೀಗ ಡಿಸಿಎಫ್ ಪ್ರಭುಗೌಡ ಸ್ಪಷ್ಟನೆ ನೀಡಿದ್ದಾರೆ. ”ಮುಂದಿನ ವರ್ಷವೂ ಕ್ಯಾಪ್ಟನ್ ಅಭಿಮನ್ಯುವೇ ಅಂಬಾರಿ ಹೊತ್ತು ಸಾಗುತ್ತಾನೆ. ಆ ನಂತರದ ವರ್ಷಗಳಲ್ಲಿಅಂಬಾರಿ ಹೊತ್ತು ಸಾಗಲು ಮೂರ್ನಾಲ್ಕು ಆನೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ಸದ್ಯಕ್ಕೆ ಭೀಮ, ಮಹೇಂದ್ರ, ಏಕಲವ್ಯ, ಧನಂಜಯ ಸೇರಿದಂತೆ ಇತರೆ ಆನೆಗಳು ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅಂದಿನ ಸಂದರ್ಭಕ್ಕೆ ತಕ್ಕಂತೆ ಅಂಬಾರಿ ಆನೆಯನ್ನು ಆಯ್ಕೆ ಮಾಡಲಾಗುತ್ತದೆ” ಎಂದು ತಿಳಿಸಿದರು. ”ಪ್ರತಿಬಾರಿ ಕೆಲ ಆನೆಗಳನ್ನು ಅಂತಿಮ ಕ್ಷಣದಲ್ಲಿ ಮೆರವಣಿಗೆ ಯಿಂದ ಹೊರಗಿಡಲಾಗುತ್ತಿತ್ತು. ಅಂತಿಮವಾಗಿ 9 ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದವು. ಇದೇ ಮೊದಲ ಬಾರಿ ಮೈಸೂರಿಗೆ ಆಗಮಿಸಿದ್ದ 3 ಹೊಸ ಆನೆಗಳ ಜತೆಗೆ ಎಲ್ಲಾ 14 ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷ” ಎಂದು ತಿಳಿಸಿದರು.”

Leave a comment