ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಯಿಂದ ಸೆಪ್ಟೆಂಬರ್ 30 ರ ಮಂಗಳವಾರ ಬೆಂಗಳೂರಿನ ಹೆಣ್ಣೂರು ಎಂಯುಎಸ್ಎಸ್ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಆ ದಿನ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೆಣ್ಣೂರು ಬಂಡೆ, ಕೊತ್ತನೂರು, ಬೈರತಿ ಗ್ರಾಮ, ದೊಡ್ಡಗುಬ್ಬಿ ಕ್ರಾಸ್ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಲಾಗಿದೆ

ತುರ್ತು ನಿರ್ವಹಣಾ ಕಾಮಗಾರಿಯಿಂದ ಸೆಪ್ಟೆಂಬರ್ 30 ರ ಮಂಗಳವಾರ ಬೆಂಗಳೂರಿನಲ್ಲಿ ಕರೆಂಟ್ ಕಟ್. ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ. ಹೆಣ್ಣೂರು ಬಂಡೆ, ಕೊತ್ತನೂರು, ಬೈರತಿ ಗ್ರಾಮ, ದೊಡ್ಡಗುಬ್ಬಿ ಕ್ರಾಸ್ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಇರಲ್ಲ. ಬೆಸ್ಕಾಂನಿಂದ ಬೆಂಗಳೂರಿನ ಹಲವೆಡೆ ಮಂಗಳವಾರ ವಿದ್ಯುತ್ ಕಡಿತ.ಬೆಂಗಳೂರು: ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಯು ಸೆಪ್ಟೆಂಬರ್ 30 ಬೆಂಗಳೂರು ಹಲವೆಡೆ ನಡೆಯುತ್ತಿದೆ.

ಈ ಹಿನ್ನೆಲೆ ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಕಡಿತವಾಗಲಿದೆ. 66/11 ಕೆವಿ ಹೆಣ್ಣೂರು ಎಂಯುಎಸ್ಎಸ್ 66 ಕೆವಿ ಲೈನ್ ಬೇಗಳು, ಟ್ರಾನ್ಸ್ಫಾರ್ಮರ್ ಬೇ ಗಳ ತ್ರೈಮಾಸಿಕ ನಿರ್ವಹಣೆಗಾಗಿ ಕೆಪಿಟಿಸಿಎಲ್ ಲೈನ್ ಕ್ಲಿಯರ್ ಪಡೆದಿರುವುದರಿಂದ ಮಂಗಳವಾರ ಬೆಳಗ್ಗೆ 11:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ 66/11 ಕೆವಿ ಹೆಣ್ಣೂರು ಎಂಯುಎಸ್ಎಸ್ನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.”

Leave a comment