ಭತ್ತದ ಬದಲು ತಾಳೆ ಬೆಳೆಯತ್ತ ಮುಂದಾದ ರೈತರು

23

ಮೂಡಿಗೆರೆ ತಾಲೂಕಿನಲ್ಲಿ ಭತ್ತದ ಕೃಷಿ ಲಾಭದಾಯಕವಲ್ಲದ ಕಾರಣ ಪಾಳುಬಿದ್ದ ಗದ್ದೆಗಳಲ್ಲಿ ರೈತರು ತಾಳೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ತಾಳೆಗೆ ಉತ್ತಮ ಧಾರಣೆ, ಕಾಡುಪ್ರಾಣಿಗಳ ಹಾವಳಿ ಕಡಿಮೆ ಇರುವುದು ಹಾಗೂ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಸಿಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಇದು ಅಡಕೆಗಿಂತ ಶೇ.90ರಷ್ಟು ಕಡಿಮೆ ಖರ್ಚಿನ, ಹೆಚ್ಚು ಲಾಭದಾಯಕ ಬೆಳೆಯಾಗಿದ್ದು, ಹಲವು ರೈತರು ಈಗಾಗಲೇ ಇದನ್ನು ಅಳವಡಿಸಿಕೊಂಡಿದ್ದಾರೆ. 

ಭತ್ತದ ಕೃಷಿ ಲಾಭದಾಯಕವಲ್ಲದ ಕಾರಣ ಪಾಳುಬಿಟ್ಟದ್ದ ಗದ್ದೆಗಳಲ್ಲಿ ತಾಳೆ ಬೆಳೆಯಲು ರೈತರು ಮುಂದು. ತಾಳೆಗೆ ಉತ್ತಮ ಧಾರಣೆ ಇರುವುದು, ಕಾಡುಪ್ರಾಣಿಗಳ ಹಾವಳಿ ಕಡಿಮೆ ಇರುವುದು ಕಾರಣ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಹಳಷ್ಟು ರೈತರು.

ಮೂಡಿಗೆರೆ: ಭತ್ತದ ಕೃಷಿ ಲಾಭದಾಯಕವಲ್ಲದ ಕಾರಣ ಪಾಳುಬಿಟ್ಟದ್ದ ಗದ್ದೆಗಳಲ್ಲಿ ತಾಳೆ ಬೆಳೆ ಬೆಳೆಯಲು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಹಳಷ್ಟು ರೈತರು ಮುಂದಾಗಿದ್ದಾರೆ. ತಾಳೆಗೆ ಉತ್ತಮ ಧಾರಣೆ ಇರುವುದು, ಕಾಡುಪ್ರಾಣಿಗಳ ಹಾವಳಿ ಕಡಿಮೆ ಇರುವುದು ತಾಳೆಯತ್ತ ರೈತರು ಗಮನಹರಿಸಲು ಕಾರಣವಾಗಿದೆ. ತಾಲೂಕಿನಲ್ಲಿ ಸಾವಿರಾರು ಹೆಕ್ಟೆರ್‌ ಭತ್ತದ ಗದ್ದೆಗಳು ಪಾಳುಬಿದ್ದಿವೆ. ಕೆಲವರು ಒಂದಷ್ಟು ಗದ್ದೆಗಳನ್ನು ತೋಟವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈಗ ಲಾಭದಾಯಕ ಉಪಬೆಳೆ ಎನಿಸಿಕೊಂಡಿರುವ ತಾಳೆಯನ್ನು ಬೆಳೆಯುವ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ಸಾಹಿ ರೈತರು ತಾಳೆ ಕೃಷಿಯತ್ತ ಒಲವು ತೋರಿಸಿದ್ದಾರೆ.  

ಒಗ್ಗುವ ಮಣ್ಣಿನ ಗುಣ ತಾಳೆ ಕೃಷಿಗೆ ವಾರ್ಷಿಕ ಸರಾಸರಿ 2ಸಾವಿರ ಮಿ.ಮೀ. ಮಳೆ, ಶೇ.30 ರಿಂದ 32 ಉಷ್ಣಾಂಶ ಹೊಂದಿರುವ ಪರಿಸರ, ಮಣ್ಣಿನ ಗುಣಗಳು ಅಗತ್ಯ. ಈ ರೀತಿಯ ಹವಾಮಾನ ಮಲೆನಾಡು ಭಾಗದಲ್ಲಿದೆ. ತಾಳೆ ಬೆಳೆಯ ಜತೆಗೆ ಬದನೆಕಾಯಿ, ಮೆಣಸಿನಕಾಯಿ, ಎಲೆಕೋಸು, ಶುಂಠಿ, ಬಾಳೆಯನ್ನು ಕೂಡ ಅಂತರ್‌ ಬೆಳೆಯಾಗಿ ಬೆಳೆಯಬಹುದು. ತಾಳೆಹಣ್ಣಿನ ಸಿಪ್ಪಿಯಿಂದ ಪಾಮ್‌ ಆಯಿಲ್‌ ತಯಾರಿಸಿದರೆ, ಬೀಜದಿಂದ ಸೆಂಟ್‌, ಹೇರ್‌ ಡೈ, ಸೋಪು ಮತ್ತಿತರ ಕಾಸ್ಮೆಟಿಕ್‌ ಉತ್ಪನ್ನಗಳನ್ನು ತಯಾರಿಸಬಹುದು.

ತಾಳೆ ಬೆಳೆಗೆ ಹವಾಮಾನ ವೈಪರೀತ್ಯವಾದರೂ ಆತಂಕಪಡುವ ಅಗತ್ಯವಿಲ್ಲ. ಬೆಳೆಯುವ ಕ್ರಮ ಒಂದು ಎಕರೆ ಪ್ರದೇಶದಲ್ಲಿಗಿಡದಿಂದ ಗಿಡಕ್ಕೆ 30 ಅಡಿ ಅಂತರದಲ್ಲಿಕನಿಷ್ಠ 55 ರಿಂದ 60 ತಾಳೆಗಿಡ ನೆಡಬಹುದು. ಗಿಡಗಳ ಆರೈಕೆಯನ್ನು ಚೆನ್ನಾಗಿ ಮಾಡಿದರೆ 3-4 ವರ್ಷದಲ್ಲಿಇಳುವರಿ ಆರಂಭವಾಗುತ್ತದೆ.

ಒಂದು ಗೊನೆಯಲ್ಲಿಸುಮಾರು 30ಕೆ.ಜಿ. ತಾಳೆಹಣ್ಣು ಸಿಗುತ್ತದೆ. ವರ್ಷಕ್ಕೆ ಕನಿಷ್ಠ 3 ಬಾರಿ ತಾಳೆಗೊನೆ ಕಟಾವಿಗೆ ಬರುತ್ತದೆ. ತಿಂಗಳಿಗೆ ಒಂದು ಎಕರೆಯಲ್ಲಿ7 ರಿಂದ 8 ಕ್ವಿಂಟಾಲ್‌ ಇಳುವರಿ ಸಿಗುತ್ತದೆ. ಗಿಡ ಬೆಳವಣಿಗೆಯಾದಂತೆ ಇಳುವರಿಯೂ ಹೆಚ್ಚುತ್ತಾ ಹೋಗುತ್ತದೆ. ತೋಟಗಾರಿಕೆ ಇಲಾಖೆಯಿಂದ ತಾಳೆ ಕೃಷಿಗೆ ತಾಳೆ ಸಸಿಗಳು, ಗೊಬ್ಬರ, ಕೊಳವೆ ಬಾವಿ, ಯಂತ್ರೋಪಕರಣ ಖರೀದಿಗೆ ಸಹಾಯಧನ ಸಿಗುತ್ತದೆ. ತಾಲೂಕಿನ ಹ್ಯಾರಗುಡ್ಡೆ, ಗೌತಳ್ಳಿ, ನಂದೀಪುರ, ಊರುಬಗೆ, ಜಿ.ಅಗ್ರಹಾರ, ದಾರದಹಳ್ಳಿ ಮತ್ತಿತರ ಕಡೆ 70 ಎಕರೆ ಭತ್ತದ ಗದ್ದೆಯಲ್ಲಿವರ್ಷಪೂರ್ತಿ ಇಳುವರಿ ಸಿಗುವ ತಾಳೆ ಕೃಷಿ ಮಾಡಲು ರೈತರು ಮುಂದಾಗಿದ್ದಾರೆ.

ತಾಲೂಕಿನಲ್ಲಿಕಸಬಾ ಮತ್ತು ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿಹೆಚ್ಚಾಗಿ ರೈತರು ತಾಳೆ ಕೃಷಿ ಮಾಡಿದ್ದಾರೆ. 2021ರಿಂದ 25ರವರೆಗೆ 40 ಎಕರೆ, 2025-26ನೇ ಸಾಲಿನಲ್ಲಿ30 ಎಕರೆ ಪ್ರದೇಶದಲ್ಲಿರೈತರು ತಾಳೆ ಕೃಷಿಯಲ್ಲಿತೊಡಗಿದ್ದಾರೆ. ಸರಕಾರದಿಂದ ತಾಳೆ ಕೃಷಿಗೆ ಖಚಿತ ಬೆಂಬಲ ಬೆಲೆ, ಗಿಡ ಹಾಕಿದಾಗಿನಿಂದ ಕಟಾವುವರೆಗೆ ಸಹಾಯಧನ ನೀಡಲಾಗುತ್ತಿದೆ ಎಂದು ಮೂಡಿಗೆರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ತಿಳಿಸಿದ್ದಾರೆ. ಅಡಕೆ ಬೆಳೆಗೆ ಹೋಲಿಕೆ ಮಾಡಿದರೆ ಶೇ.90 ರಷ್ಟು ಖರ್ಚು ತಾಳೆಗೆ ಯಾವುದೇ ಔಷಧಿ ಸಿಂಪಡಣೆ ಬೇಕಾಗಿಲ್ಲ.

ಅಡಕೆ ಬೆಳೆಗೆ ಹೋಲಿಕೆ ಮಾಡಿದರೆ ಶೇ.90 ರಷ್ಟು ಖರ್ಚು ಕಡಿಮೆ. ತೋಟಗಾರಿಕೆ ಇಲಾಖೆಯಿಂದ ಉಚಿತ ಗಿಡ, ನಿರ್ವಹಣೆಗೆ ಸಹಾಯಧನ ನೀಡುವುದರಿಂದ ಸುಲಭ ಬೆಳೆಯಾಗಿದೆ.

ಕಳೆದ 3 ವರ್ಷದಿಂದ 3 ಎಕರೆ ಪ್ರದೇಶದಲ್ಲಿತಾಳೆ ಬೆಳೆಸಿದ್ದು, ಫಸಲಿಗೆ ಬಂದಿದೆ. ಮತ್ತೆ ಹೊಸದಾಗಿ 200 ಗಿಡಗಳನ್ನು ಹಾಕಲು ಮುಂದಾಗಿದ್ದೇನೆ ಎನ್ನುತ್ತಾರೆ ಕೃಷಿಕ ರೇಣುಕುಮಾರ್‌. 2020-21ರಲ್ಲಿ13 ಎಕರೆ ಭತ್ತದ ಗದ್ದೆಯಲ್ಲಿತಾಳೆ ಗಿಡ ಹಾಕಿದ್ದು, ಈಗ ಫಸಲು ಬರಲಾರಂಭಿಸಿದೆ.

ಇತ್ತೀಚೆಗೆ 3 ಬಾರಿ ಕೊಯ್ಲುಮಾಡಿದ್ದು, 3 ಟನ್‌ ಫಸಲು ಸಿಕ್ಕಿದೆ. ಇನ್ನೂ ಇಳುವರಿ ಬರಲಾರಂಭಿಸಿದೆ. ಇತರೇ ಬೆಳೆಗೆ ಹೋಲಿಕೆ ಮಾಡಿದರೆ ತಾಳೆ ಬೆಳೆ ಅಧಿಕ ಲಾಭ ಪಡೆಯುವ ಹಾಗೂ ತುಂಬಾ ಸರಳವಾಗಿ ಬೆಳೆಯುವ ಬೆಳೆಯಾಗಿದೆ ಎನ್ನುತ್ತಾರೆ ಮತ್ತೊಬ್ಬ ಕೃಷಿಕ ಎಚ್‌.ಪಿ.ಅನುಲ್‌ಕುಮಾರ್‌.”

Leave a comment

Leave a Reply

Your email address will not be published. Required fields are marked *

Related Articles

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...

ಅಲ್ಪಸಂಖ್ಯಾತರ ಸಾಲದ ಬಡ್ಡಿ ಮನ್ನಾ ತುಷ್ಟಿಕರಣದಲ್ಲಿ ತೊಡಗಿಕೊಂಡ ಸರಕಾರದ ವಿರುದ್ಧ:: ಸಿಟಿ ರವಿ ವಾಗ್ದಾಳಿ

“ಬೆಂಗಳೂರು: ಬಿಜೆಪಿಯ ಹಿರಿಯ ನಾಯಕರು ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ರೈತರು, ಹಿಂದುಳಿದ...