ವಿಜಯಕುಮಾರ್ ಚವ್ಹಾಣ ಇವರು ಜಿಲ್ಲಾ ಕಾರಾಗೃಹ ಕಾಜರಗುತ್ತುಹಿರಿಯಡ್ಕ ಉಡುಪಿ ಇಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತಿರುವ ಸಂದರ್ಭದಲ್ಲಿ ಕಾರಾಗೃಹದಲ್ಲಿರುವ ವಿಚಾರಣಾದೀನ ಕೈದಿ ಇಸಾಕ್ ಎಂಬುವವನು

ಬೆಳಿಗ್ಗೆ 7:45ರ ವೇಳೆಯಲ್ಲಿ ಏಕಾಎಕಿ ಖೈದಿ ರವಿಚಂದ್ರನ್ ಎಂಬುವವನ ಮೇಲೆ ಕೈಯಲ್ಲಿ ಸ್ಟೀಲ್ ಚೆಂಬು ಸಿಕ್ಕಿಸಿಕೊಂಡು ಹಿಂದಿನಿಂದ ತಲೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಕರ್ತವ್ಯ ನಿರತ ಸಿಬ್ಬಂದಿಯವರು ಓಡಿ ಹೋಗಿ ನೋಡಲಾಗಿ ಸದರಿ ಇಸಾಕ್ ಎಂಬ ಖೈದಿ ಕೈಯಲ್ಲಿ ಚೆಂಬು ಸಿಕ್ಕಿಸಿಕೊಂಡಿದ್ದನ್ನು ತೆಗೆಸಿ ವಿಚಾರಿಸಲಾಗಿ ರೂಮಿನಲ್ಲಿ ವಾಕಿಂಗ್ ಮಾಡುತ್ತಿದ್ದಾನೆಂಬ ಕ್ಷುಲ್ಲಕ ಕಾರಣ ನೀಡಿರುತ್ತಾನೆ.

ಹಲ್ಲೆಗೊಳಗಾದ ರವಿಚಂದ್ರನ್ ಎಂಬವರ ಎಡಕಿವಿಯ ಹಿಂಭಾಗದ ತಲೆಯಲ್ಲಿ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ವಿಚಾರಣಾ ಬಂದಿ ಇಸಾಕ್ ಇತನು ವಿನಾಃ ಕಾರಣ ಸಹಬಂದಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದು ಕಾರಾಗೃಹ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Leave a comment