ಮಹಿಳೆಗೆ ಜಾತಿನಿಂದನೆ ಚೇರ್ಕಾಡಿ ಪಂಚಾಯತ್ ಪಿಡಿಓ ವಿರುದ್ಧ ಪ್ರಕರಣ ದಾಖಲು

3
ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ವರ್ಷಗಳ ಕೆಳಗೆ ಅವೈಜ್ಞಾನಿಕವಾಗಿ ಕಾಂಕ್ರೀಟ್‌ ರಸ್ತೆ ಮಾಡಿದ್ದರಿಂದ ಮಳೆಗಾಲದಲ್ಲಿ ಮೇಲ್ಭಾಗದ ಚರಂಡಿ ಹಾಗೂ ರಸ್ತೆ ನೀರು ನುಗ್ಗಿ ಅವಾಂತರ ಪ್ರಶ್ನಿಸಿದ ಮಹಿಳೆ ಮೇಲೆಚೇರ್ಕಾಡಿ ಪಿಡಿಓ ಸುಭಾಸ್  ಜಾತಿ ನಿಂದನೆ ಗೈದ ಬಗ್ಗೆ  ಪ್ರಕರಣ ದಾಖಲಾಗಿದೆ

ಶ್ರೀಮತಿ ವನಿತಾ ಚೇರ್ಕಾಡಿ ಗ್ರಾಮ ಬ್ರಹ್ಮಾವರ ಇವರ ಹೈನುಗಾರಿಕ ಘಟಕಕ್ಕೆ ನುಗ್ಗಿದ ಪರಿಣಾಮ ವನಿತಾರಿಗೆ ನಷ್ಟ ಉಂಟಾಗಿದ್ದು, ಈ ಬಗ್ಗೆ ಅವರು ಚೇರ್ಕಾಡಿ ಗ್ರಾಮ ಪಂಚಾಯತ್‌ ಪಿ.ಡಿ.ಓ ಸುಭಾಸ್‌ ಇವರಲ್ಲಿ ಅರ್ಜಿ ನೀಡಿರುತ್ತಾರೆ ಎನ್ನಲಾಗಿದೆ


ಪಿ ಡಿ ಓ ಸುಭಾಸ್  ವನಿತಾರ ಅರ್ಜಿಗೆ ಸ್ಪಂದಿಸದೇ ಇದ್ದು, ಈ ಬಾರಿಯ ಮಳೆಗಾಲದಲ್ಲಿ ಕೂಡ ನೀರು ಹೈನುಗಾರಿಕ ಘಟಕಕ್ಕೆ ನುಗ್ಗಿ  ನಷ್ಟ ಉಂಟಾಗಿದ್ದು, ದಿನಾಂಕ 25/07/205 ರಂದು ಮದ್ಯಾಹ್ನಾ 1:00 ಗಂಟೆಗೆ ದೂರುದಾರರು ಚೇರ್ಕಾಡಿ ಗ್ರಾಮ ಪಂಚಾಯತ್‌ ಕಛೇರಿಗೆ ಹೋಗಿ ಅರ್ಜಿಯ ಬಗ್ಗೆ ವಿಚಾರಿಸಿದರು

ಸಿಟ್ಟಿಗೆದ್ದ ಪಿ ಡಿ ಓ  ಮಹಿಳೆ ವನಿತಾರನ್ನು ಉದ್ದೇಶಿಸಿ ಪದೇ ಪದೇ ಬಂದು ತಲೆ ತಿನ್ನುತ್ತಿಯಲ್ಲ ಹೊರಗೆ ಹೋಗಿ “ ಎಂದು ಬೆದರಿಸಿ, ಅವಾಚ್ಯ ಶಬ್ದದಿಂದ ಜಾತಿ ಬಗ್ಗೆ ನಿಂದಿಸಿರುವುದಾಗಿ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 157/2025 ಕಲಂ: 351 (2), 352 BNS ಕಲಂ: 3 (1) (r) (s) The SC ST Act ರಂತೆ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೂವರ ವಿರುದ್ಧ  ಕಲ್ಲು ಕಳವು ಪ್ರಕರಣ ದಾಖಲು

ನಂದಳಿಕೆ ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಸಮುದ್ರಕ್ಕೆ ಕಲ್ಲು ಸಾಗಿಸುತ್ತಿದ್ದ ಮೂವರ ವಿರುದ್ಧ ...

ಪಡ್ರೆ ಧೂಮಾವತಿ ದೈವಸ್ಥಾನದ ಚಿನ್ನಾಭರಣ ಹಾಗೂಹಣ,ಕಳ್ಳತನ ಸತೀಶ್ ಮುಂಚೂರುವಿರುದ್ಧ ಪ್ರಕರಣ ದಾಖಲು

ಮಂಗಳೂರು: ಸುರತ್ಕಲ್ ನ  ಸತೀಶ್ ಮುಂಚೂರು ಮತ್ತು ಇತರರ ವಿರುದ್ದ ಪಡ್ರೆ ಧೂಮವತಿ ದೈವಸ್ಥಾನದ ಬಂಗಾರ...

ಪದೇ ಪದೇ ಅಪಘಾತ ನಡೆಯುತ್ತಿದ್ದ ಸ್ಥಳದಲ್ಲಿ ಉದ್ಯಮಿಯ ಲಾಭಿಗೆ ಮಣಿದು ಡಿವೈಡರ್ ತೆರೆವುಗೊಳಿಸುತ್ತಿರುವ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಬೆಂಬಲ

ಖಾಸಗಿ ಬಟ್ಟೆ ಮಳಿಗೆಗಾಗಿ ಹೆದ್ದಾರಿ ಡಿವೈಡರನ್ನೇ ಒಡೆದು ಹಾಕಿದ ಹೆದ್ದಾರಿ ಆಧಿಕಾರಿಗಳು.ನಗರಸಭೆಯ ಅಧಿಕಾರಿಗಳು ಆಧ್ಯಕ್ಷರೂ ಸದಸ್ಯರು...

ಮಂಗಳೂರು ಜೈಲಿನಲ್ಲಿ ಕೈದಿ ಮೇಲೆ ಹಲ್ಲೆ ನಡೆಸಿ ಹಪ್ತ ವಸೂಲಿ ನಡೆಸಿದ ನಾಲ್ವರು  ಸಹ  ಕೈದಿಗಳ ವಿರುದ್ಧ  ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲು

:  ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿ, ಹಪ್ತ ವಸೂಲಿ ನಡೆಸಿದ ನಾಲ್ವರು ಸಹ ಕೈದಿಗಳ...