ಶ್ರೀಮತಿ ವನಿತಾ ಚೇರ್ಕಾಡಿ ಗ್ರಾಮ ಬ್ರಹ್ಮಾವರ ಇವರ ಹೈನುಗಾರಿಕ ಘಟಕಕ್ಕೆ ನುಗ್ಗಿದ ಪರಿಣಾಮ ವನಿತಾರಿಗೆ ನಷ್ಟ ಉಂಟಾಗಿದ್ದು, ಈ ಬಗ್ಗೆ ಅವರು ಚೇರ್ಕಾಡಿ ಗ್ರಾಮ ಪಂಚಾಯತ್ ಪಿ.ಡಿ.ಓ ಸುಭಾಸ್ ಇವರಲ್ಲಿ ಅರ್ಜಿ ನೀಡಿರುತ್ತಾರೆ ಎನ್ನಲಾಗಿದೆ
ಪಿ ಡಿ ಓ ಸುಭಾಸ್ ವನಿತಾರ ಅರ್ಜಿಗೆ ಸ್ಪಂದಿಸದೇ ಇದ್ದು, ಈ ಬಾರಿಯ ಮಳೆಗಾಲದಲ್ಲಿ ಕೂಡ ನೀರು ಹೈನುಗಾರಿಕ ಘಟಕಕ್ಕೆ ನುಗ್ಗಿ ನಷ್ಟ ಉಂಟಾಗಿದ್ದು, ದಿನಾಂಕ 25/07/205 ರಂದು ಮದ್ಯಾಹ್ನಾ 1:00 ಗಂಟೆಗೆ ದೂರುದಾರರು ಚೇರ್ಕಾಡಿ ಗ್ರಾಮ ಪಂಚಾಯತ್ ಕಛೇರಿಗೆ ಹೋಗಿ ಅರ್ಜಿಯ ಬಗ್ಗೆ ವಿಚಾರಿಸಿದರು
ಸಿಟ್ಟಿಗೆದ್ದ ಪಿ ಡಿ ಓ ಮಹಿಳೆ ವನಿತಾರನ್ನು ಉದ್ದೇಶಿಸಿ ಪದೇ ಪದೇ ಬಂದು ತಲೆ ತಿನ್ನುತ್ತಿಯಲ್ಲ ಹೊರಗೆ ಹೋಗಿ “ ಎಂದು ಬೆದರಿಸಿ, ಅವಾಚ್ಯ ಶಬ್ದದಿಂದ ಜಾತಿ ಬಗ್ಗೆ ನಿಂದಿಸಿರುವುದಾಗಿ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 157/2025 ಕಲಂ: 351 (2), 352 BNS ಕಲಂ: 3 (1) (r) (s) The SC ST Act ರಂತೆ ಪ್ರಕರಣ ದಾಖಲಾಗಿದೆ.
Leave a comment